ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಪಿ ಬಿ ರೋಡ್ ಶಾಖೆಯಲ್ಲಿ ಶನಿವಾರದಂದು ಬ್ಯಾಂಕ್ ನಲ್ಲಿ ವಿಪರೀತವಾಗಿ ಜನಜಂಗುಳಿ ಇದ್ದು, ಈ ಶಾಖೆಯಲ್ಲಿ ಐದು ಕೌಂಟರ್ ಗಳು ಇದ್ದರೂ ಸಹ ಸಿಬ್ಬಂದಿ ವರ್ಗದ ಕೊರತೆಯಿಂದ ದಿನನಿತ್ಯ ಈ ಬ್ಯಾಂಕಿಗೆ ಬರುವ ಸಾರ್ವಜನಿಕರು ಘಂಟನುಘಂಟಲೇ ಕಾಯುವಂತ ಪರಿಸ್ಥಿತಿ ಉಂಟಾಗಿದೆ .
ಸಾರ್ವಜನಿಕರು ದಿನನಿತ್ಯದ ತಮ್ಮ ಒತ್ತಡದ ನಡುವೆ ಬೇಗನೆ ತಮ್ಮ ವ್ಯವಹಾರ ಮಾಡಿಕೊಂಡು ಹೋಗೋಣ ಎಂದು ಬಂದರೆ, ಯಾವುದೇ ಕೆಲಸಗಳಿಗೂ ಬ್ಯಾಂಕ್ ನಲ್ಲಿ ಘಂಟನುಘಂಟಲೇ ಕಾಯಬೇಕಾದ ಪರಿಸ್ಥಿತಿಯಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರು ಈ ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಶಾಖೆಗೆ ದಿನನಿತ್ಯ ಬರುವ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಹಾಗೂ ಈ ಶಾಖೆಯಲ್ಲಿ ಸಿಬ್ಬಂದಿ ವರ್ಗದವರ ಕೊರತೆ ಇರುವುದರಿಂದ ಮೇಲ್ಪಾಟ್ಟ ಶಾಖಾ ವ್ಯವಸ್ಥಾಪಕರು ಈ ಕೂಡಲೇ ಈ ಶಾಖೆಗೆ ಸಿಬ್ಬಂದಿ ವರ್ಗದವರನ್ನು ನೇಮಕಮಾಡಿಕೊಂಡು ದಿನನಿತ್ಯ ವ್ಯವಹಾರ ಮಾಡಲು ಬರುವಂತಹ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ವರದಿ:ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ ).