ಕೊರಟಗೆರೆ: ಮಹಾ ಶಿವರಾತ್ರಿ ಪ್ರಯುಕ್ತ ಡಾ.ಜಿ.ಪರಮೇಶ್ವರ ಕಪ್ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಕ್ರೀಡೆ ಉಳಿಸಲು ಮತ್ತು ಯುವ ಪ್ರತಿಭೆಗಳನ್ನು ಉತ್ತೇಜಿಸಲು ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಕ್ಷೇತ್ರದ ಎಲ್ಲಾ 36 ಗ್ರಾಮ ಪಂಚಾಯಿತಿ ಮಟ್ಟದ ಯುವಕರಿಗೆ ಈ ಕ್ರೀಡೆ ನಡೆಯುತ್ತಿದ್ದು, ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಘಟಕವು ಈ ಪಂದ್ಯಾವಳಿಗಳನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರರವರ ಮಾರ್ಗದರ್ಶನದಲ್ಲಿ ಹಾಗೂ ಪ್ರೋತ್ಸಾಹದಲ್ಲಿ ನಡೆಸಲಿದ್ದು ಸಾರ್ವಜನಿಕರು ಆಗಮಿಸುವಂತೆ ಕೋರಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ವಿನಯ್ಕುಮಾರ್ ಮಾತನಾಡಿ, ಈ ಪಂದ್ಯವಳಿಗಳು ಹಿಂದೆ ಮಳೆಯ ಕಾರಣ ರದ್ದಾಗಿತ್ತು, ಮಾರ್ಚ್ 1 ಶಿವರಾತ್ರಿಯೊಂದು ಈ ಪಂದ್ಯಾವಳಿಗಳು ಆರಂಭವಾಗಿ ಮೂರು ದಿನಗಳ ಕಾಲ ನಡೆಯಲಿದೆ. ಇದರಲ್ಲಿ 17 ತಂಡಗಳು ಭಾಗವಹಿಸಲಿವೆ.
ಈಗಾಗಲೇ ಕ್ಷೇತ್ರದ 165 ತಂಡಗಳು ಆಯಾ ಹೋಬಳಿಗಳಲ್ಲಿ ಲೀಗ್ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ವಿಜಯಿ ತಂಡಗಳು ಈ ಪಂದ್ಯಾವಳಿಗಳಲ್ಲಿ ಬಾಗವಹಿಲಿವೆ, ಪಂದ್ಯಾವಳಿಗಳ ಉದ್ಘಾಟನೆ ಶಾಸಕರಾದ ಡಾ.ಜಿ.ಪರಮೇಶ್ವರ ನೆರವೇರಿಸುವರು ಅವರೊಂದಿಗೆ ಖ್ಯಾತ ಚಲನ ಚಿತ್ರ ನಟರು, ನಾಯಕರುಗಳು ಉದ್ಘಾಟನಾ ಸಮಾರಂಬದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಯುವ ಕಾಂಗ್ರೆಸ್ ಮುಖಂಡ ರವಿಕುಮಾರ್ ಮಾತನಾಡಿ, ಈ ಪಂದ್ಯಾವಳಿಗಳು ಪ್ರೊ.ಕಬ್ಬಡಿ ರೀತಿ ನಡೆಯಲ್ಲಿದ್ದು ತೀರ್ಪುಗಾರರು ಬೆಂಗಳೂರು ಕಬ್ಬಡ್ಡಿ ಅಸೋಸಿಯೇಷನ್ ನಿಂದ ಆಗಮಿಸಿ ಪಂದ್ಯಗಳನ್ನು ಆಡಿಸುವರು. ವಿಜೇತ ತಂಡಕ್ಕೆ ಪ್ರಥಮ 1 ಲಕ್ಷ , ದ್ವಿತೀಯ 50 ಸಾವಿರ ತೃತೀಯ 25 ಸಾವಿರ ನಾಲ್ಕನೇ 10 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕಗಳು, ಸಾಧನೆಯ ವೈಯಕ್ತಿಕ ಬಹುಮಾನಗಳು ಇರಲಿವೆ ಎಂದರು.
ಪ.ಪಂ ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ, ಪಂದ್ಯಾವಳಿಗಳನ್ನು ಜನರು ವಿಕ್ಷಿಸಲು ಬೃಹತ್ ಗ್ಯಾಲರಿಯನ್ನು ನಿರ್ಮಿಸಲಾಗಿದ್ದು, ಲೈಟಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಮಹಿಳಾ ಅದ್ಯಕ್ಷೆ ಜಯಮ್ಮ, ಪ.ಪಂ ಸದಸ್ಯರಾದ ನಾಗರಾಜು, ನಂದೀಶ್, ಮಾಜಿ ಉಪಾದ್ಯಕ್ಷ ಮಂಜುನಾಥ್, ಟಿಎಪಿಸಿಎಂಎಸ್ ಉಪಾದ್ಯಕ್ಷ ರಾಘವೇಂದ್ರ, ಮುಖಂಡರಾದ ಮಲ್ಲಿಕಾರ್ಜುನ್ ಮಕ್ತಿಯಾರ್, ಕೆ.ಎಂ.ಸುರೇಶ್, ಆಟೋಕುಮಾರ್, ಅರವಿಂದ್, ಗೋಪಿನಾಥ್, ಕಾರ್ಮಹೇಶ್, ಅನಂತ್ ಕುಮಾರ್, ಮಂಜನಾಥ್, ಚಂದ್ರಶೇಖರ್, ಕುಮಾರ್, ಜಮೀರ್, ಡೈರಿಸುರೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB