ಕೊರಟಗೆರೆ : ಕರ್ನಾಟಕದ ಸಂಜೀವಿನಿ ಬೆಟ್ಟವೆಂದೇ ಕರೆಸಿಕೊಳ್ಳುವ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದ ಪ್ರಕೃತಿ ಮಡಿಲಲ್ಲಿ ಸ್ವಾಸ್ಥ್ಯ ಮಾರ್ಗದ ವತಿಯಿಂದ ಎರಡು ದಿನಗಳ ಪ್ರಾಕೃತಿಕ ಸ್ವಾಸ್ಥ್ಯ ಜೀವನ ಕೌಶಲ್ಯ ತರಬೇತಿ ಶಿಬಿರ ನಡೆಸಲಾಯಿತು.
ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ, ನಾಗಮಂಗಲ ಇವರ ವತಿಯಿಂದ ಖ್ಯಾತ ಯೋಗ ಗುರು ಲಕ್ಷ್ಮಣ್ ಜೀ ಅವರ ಸಾರಥ್ಯದಲ್ಲಿ ನಡೆದ ಈ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಕೃತಿ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ, ಸಸ್ಯೌಷಧಗಳ ಪರಿಚಯವನ್ನು ಒಳಗೊಂಡ ಸ್ವಾಸ್ಥ್ಯ ಚಿಂತನೆಯ ಜೊತೆಗೆ ಚಾರಣದ ಹೂರಣವನ್ನು ಒಳಗೊಂಡಿದ್ದು ಶಿಬಿರದ ವಿಶೇಷ.
ಮೊದಲಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞ ವೈದ್ಯೆ ಡಾ.ಭವ್ಯರವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಸಂರಕ್ಷಣೆಯಲ್ಲಿ ಆಹಾರ ವಿಹಾರ ವ್ಯಾಯಾಮ ಅತೀ ಮುಖ್ಯ ಆ ನಿಟ್ಟಿನಲ್ಲಿ ಎಲ್ಲರೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಡೆ ಗಮನ ಹರಿಸಬೇಕಿದೆ ಎಂದರು.
ತದನಂತರ ಮಾತನಾಡಿದ ಸ್ವಾಸ್ಥ್ಯ ಮಾರ್ಗ ಜೀವನ ಮಾರ್ಗ ಯೋಗ ಪ್ರತಿಷ್ಠಾನದ ಸಂಸ್ಥಾಪಕರಾದ ಲಕ್ಷ್ಮಣ್ ಜೀ ಅವರು ಆಧುನಿಕ ಜೀವನ ಶೈಲಿ,ಜನರ ಅತಿಯಾದ ಜೀವನ ನಿರೀಕ್ಷೆಗಳು ನಮ್ಮನ್ನು ಅನಾರೋಗ್ಯದ ಕಡೆ ಕೊಂಡೊಯ್ಯುತ್ತಿವೆ ಆರೋಗ್ಯವನ್ನು ಬಯಸುವ ಪ್ರತಿಯೋಬ್ಬರೂ ವಿಕೃತಿಯಿಂದ ಪ್ರಕೃತಿ ಕಡೆಗೆ ತಿರುಗಬೇಕಿದೆ ಆ ನಿಟ್ಟಿನಲ್ಲಿ ಈ ಶಿಬಿರವನ್ನು ಜನರಲ್ಲಿ ಸ್ವಾಸ್ಥ್ಯ ಚಿಂತನೆಯನ್ನು ಬಿತ್ತುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದರು.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಯೋಗ,ಧ್ಯಾನ,ಪ್ರಾಣಾಯಾಮ ಸೇರಿದಂತೆ ಆಹಾರ ಚಿಕಿತ್ಸೆ,ಪ್ರಕೃತಿ ಚಿಕಿತ್ಸೆ ಸೇರಿದಂತೆ ಹಲವು ವೈವಿಧ್ಯತೆಯಿಂದ ಕೂಡಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ಧ ಯೋಗ ಮತ್ತು ನಿಸರ್ಗ ಚಿಕಿತ್ಸೆ ತಜ್ಞ ವೈದ್ಯೆ ಡಾ.ಭವ್ಯ ರವರು ಕೆಲವು ಪ್ರಾಕೃತಿಕ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಿಕೊಟ್ಟರು. ನಾಗಮಂಗಲದ ವಿದ್ಯಾವತಿ ಆಯುರ್ವೇದ ಚಿಕಿತ್ಸಾಲಯದಿಂದ ಆಗಮಿಸಿದ್ದ ಡಾ.ವಿಶ್ವನಾಥ್ ರವರು ಆಯುರ್ವೇದ ಜೀವನ ಶೈಲಿ ದಿನಚರ್ಯೆ, ಋತು ಚರ್ಯೆಯ ಬಗ್ಗೆ ತಿಳಿಸಿಕೊಟ್ಟರು ಪರಿಸರ ಪ್ರೇಮಿ ಸಸ್ಯೌಷಧಗಳ ಸಂಶೋಧಕರಾದ ಗುಂಗುರುಮಳೆ ಮುರಳಿರವರು ಕೆಲವು ಸಸ್ಯಗಳ, ಬಳ್ಳಿಗಳ ಔಷಧೀಯ ಗುಣಗಳ ತಿಳಿಸಿಕೊಟ್ಟು ನಿತ್ಯ ಆಹಾರದಲ್ಲಿ ಸ್ಥಳೀಯವಾಗಿ ಸ್ವಾಭಾವಿಕವಾಗಿ ಬೆಳೆಯುವಂತಹ ಕೆಲವು ಸೊಪ್ಪು , ಬಳ್ಳಿ, ದಂಟು, ಚಿಗುರೆಲೆಗಳನ್ನು ಉಪಯೋಗ ಅರಿತು ಬಳಸಿದರೆ ವೈದ್ಯರಿಂದ ದೂರ ಉಳಿಯಬಹುದು ಎಂದರು. ನಾಟಿ ವೈದ್ಯ ಚಿಕ್ಕಣ ರವರು ಸೋರಿಯಾಸಿಸ್,ಮೈಗ್ರೇನ್, ಮುಟ್ಟಿನ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮಾಡಿಕೊಳ್ಳ ಬಹುದಾದ ಕೆಲವು ನಾಟಿ ಔಷಧಗಳ ಬಗ್ಗೆ ತಿಳಿಸಿಕೊಟ್ಟರು.
ರಾಜ್ಯದ ನಾನಾ ಭಾಗಗಳಿಂದ ಹಲವರು ಯೋಗ ಶಿಕ್ಷಕರು 25 ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ವರದಿ.
ಮಂಜುಸ್ವಾಮಿ.ಎಂ.ಎನ್.
ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB