ತುಮಕೂರು: ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ, ಪ್ರತಿಬಾರಿ ಬಜೆಟ್ ಮಂಡನೆ ಮಾಡಿದ ತಕ್ಷಣ ಬೆಲೆ ಏರಿಕೆ ಮಾಡೋ ಚಾಳಿ ಇಟ್ಟುಕೊಂಡಿದ್ದಾರೆ. ಗೃಹ ಲಕ್ಷ್ಮಿ ಹಣ ಬಾರದೇ ಮೂರು ತಿಂಗಳು ಆಯಿತು. ಸತ್ತವರಿಗೆ ಹಿಡಿ ಮಣ್ಣು ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಹರಿಹಾಯ್ದಿದ್ದಾರೆ..
ಜನಾಕ್ರೋಶ ಸಮಾವೇಶ ಹಿನ್ನೆಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದ್ದಾರೆ. ಈ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು.
ಡಿಕೆಶಿ , ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ ಸಿಎಂ ಆಗಲು ಪೈಪೋಟಿಯಲ್ಲಿ ಇದ್ದಾರೆ. ಈ ಕಾದಾಟದಲ್ಲಿ ರಾಜ್ಯದ ಜನರ ಹಿತ ಮರೆತಿದ್ದಾರೆ ಎಂದರು.
ಸದನದಲ್ಲಿ ಶಾಸಕ ಬಿ.ಸುರೇಶ್ ಗೌಡ ಸೇರಿದಂತೆ ಬಿಜೆಪಿ ಶಾಸಕ ಅಮಾನತು ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಅಮಾನತು ಮಾಡುವ ಹಕ್ಕು ಸ್ಪೀಕರ್ ಗೆ ಇಲ್ಲ, ಒಂದು ದಿನ ಮಾತ್ರ ಸ್ಪೀಕರ್ ಅಮಾನತು ಮಾಡಬಹುದು. ಸ್ಪೀಕರ್ ನಡವಳಿಕೆನೆ ಸರಿ ಇಲ್ಲ.. ಅದನ್ನು ನಾನು ಖಂಡಿಸುತ್ತೇನೆ ಎಂದರಲ್ಲದೇ, ಆತನಿಗೆ ಏನಿದೆ ಅಧಿಕಾರ ಅಮಾನತು ಮಾಡಲು? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಭಿಕ್ಷೆಯಲ್ಲಿ ಬದುಕುತ್ತಿದೆ. ಹಾಗಾಗಿ ಮುಸ್ಲಿಂರನ್ನು ಸರಿಯಾದ ಟ್ರಾಕ್ ಗೆ ತರಲು ಅವರಿಂದ ಸಾಧ್ಯ ಆಗುತ್ತಿಲ್ಲ. ಕಾನೂನು ಕೈಗೆತ್ತಿಕೊಳ್ಳುವ ಅವರನ್ನು ಸರ್ಕಾರ ಹೆಡೆಮುರಿ ಕಟ್ಟುತ್ತಿಲ್ಲ, ಕಾಂಗ್ರೆಸ್ ಸರ್ಕಾರನೇ ಮುಸ್ಲಿಂ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಡುತ್ತಿದೆ, ಹಾಗಾಗಿ ಇಂಥಹ ಘಟನೆಗಳು ನಡೀತಿದೆ ಎಂದು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW