ಸರಗೂರು: ತಾಲ್ಲೂಕಿನ ಪಟ್ಟಣದಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಭಾರೀ ಗಾಳಿ-ಮಳೆಗೆ ಒಂದೇ ಕಡೆಯಲ್ಲಿ ಮೂರು ವಾಸದ ಮನೆಯು ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಮೂರನೇ ವಾರ್ಡಿನಲ್ಲಿ ಘಟನೆ ನಡೆದಿದೆ.
ಬುಧವಾರ ಬೆಳಿಗ್ಗೆ 10 ರಿಂದ ಸಂಜೆಯವರೆಗೂ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹೊರಗೆ ಯಾರೂ ಬಾರದಂತೆ ಮನೆಯಲ್ಲಿಯೇ ಜನರನ್ನು ದಿಗ್ಬಂಧನ ಮಾಡಿದಂತಿತ್ತು.
ಸತತವಾಗಿ ಮೂರು ದಿನಗಳಿಂದ ಮಳೆಗೆ ಬುಧವಾರ ದಂದು ರಾತ್ರಿ ವೇಳೆಯಲ್ಲಿ ಮಲಗಿದ್ದ ಸಮಯದಲ್ಲಿ ನಡೆದು ಮೂರನೇ ವಾರ್ಡಿನ ಪುಟ್ಟಸಿದ್ದಮ್ಮ, ಚಿಕ್ಕತಾಯಮ್ಮ, ಹೆಜ್ಜೂರಮ್ಮ, ದೇವಮಣಿ ಎಂಬುವವರ ಮನೆ ಏಕಾಏಕಿ ಕುಸಿದು ಬಿದ್ದಿದೆ. ಸದ್ಯ ಮನೆ ಕಳೆದುಕೊಂಡು, ಜೀವನೋಪಾಯಕ್ಕೆ ಇದ್ದ ಮನೆಯನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬವು ಒತ್ತಾಯ ಮಾಡಿದೆ.
ಮನೆ ಬಳಕೆ ವಸ್ತುಗಳಾದ ಟಿವಿ, ಬಟ್ಟೆ ಬರೆ ಇತ್ಯಾದಿ ವಸ್ತುಗಳನ್ನೂ ತೆಗೆದುಕೊಂಡು ಉಳಿಸಿಕೊಂಡು ಹೋಗಲು ಕೂಡ ಮನೆಯವರಿಂದ ಸಾಧ್ಯವಾಗಿಲ್ಲ, ಈ ಮನೆಯ ಮಾಲಕರು ಮನೆಯ ಜತೆಗೆ ವಸ್ತುಗಳನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.
ತಾಲ್ಲೂಕಿನ ಆಡಳಿತ ಗಂಜಿ ಕೇಂದ್ರವನ್ನು ತೆರೆಯದೆ ಪಟ್ಟಣದ ಜನರು ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯಾವುದೇ ಕ್ರಮ ತಾಲ್ಲೂಕು ಆಡಳಿತ ಮತ್ತು ಪ.ಪಂ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾರ್ಡಿನ ಜನರು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಮತ್ತು ಪಪಂ ಇಲಾಖೆಗಳಿಗೆ ಗಮನಕ್ಕೂ ತಂದರು ಮನೆಗಳ ಪರಿಶೀಲನೆ ನಡಿಸಲು ಬಾರದೆ ತಾರತಮ್ಯ ಮಾಡುತ್ತಾರೆ ಎಂದು ತಿಳಿಸಿದರು.
ಮನೆಯನ್ನು ಕಳೆದುಕೊಂಡ ಮಹಿಳೆ ಹೆಜ್ಜೂರಮ್ಮ ಮಾತನಾಡಿ, 30– 40 ವರ್ಷಗಳಿಂದ ಇದೇ ಮನೆಯಲ್ಲಿ ಇದ್ದೇವೆ. ಗಂಡ ಇದ್ದಾನೆ ಎಂದು ಧೈರ್ಯ ಇತ್ತು. ಗಂಡ ಸತ್ತು ಹೋಗಿ ಸುಮಾರು ವರ್ಷಗಳೇ ಕಳೆದಿವೆ. ಅವರು ಕಟ್ಟಿದ ಮನೆ ಈಗ ಅದು ಕೂಡಾ ಇಲ್ಲ. ಗೋಡೆಗಳು ಕುಸಿದು ಬಿದ್ದುಹೋಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಹಾಗೂ ವಯಸ್ಸಾದ ಹಿರಿಯರು ಹಾಗೂ ವಿಕಲಚೇತನರು ಇದ್ದಾರೆ. ಇವರನ್ನು ಎಲ್ಲಿ ಕಟ್ಟಿಕೊಂಡು ಹೋಗಿ ಬದುಕಲಿ ಎಂದು ಅಳಲು ತೋಡಿಕೊಂಡಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA