ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ಕ್ಷೇತ್ರ ಹೊಸಪಟ್ಟಣದ ಶ್ರೀ ದುರ್ಗಾಂಭ ದೇವಿಯವರ ಜಾತ್ರಾ ಮಹೋತ್ಸವವು ಇಂದಿನಿಂದ ಮಾರ್ಚ್ 1ರವರೆಗೆ ಜರಗಲಿದೆ.
ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ದುರ್ಗಾಂಭ ದೇವಿ ಸೇವಾ ಸಮಿತಿ (ರಿ) ಮತ್ತು ದೇವಾಲಯದ ಗುಡಿಗೌಡರಾದ ಮಹಾಲಿಂಗಯ್ಯ ಜಾತ್ರಾ ಮಹೋತ್ಸವದ ಕುರಿತು ಮಾಹಿತಿ ನೀಡಿದರು.
ಗ್ರಾಮದ ಧೂತರಾಯ ಸ್ವಾಮಿ, ಚೌಡೇನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಮತ್ತು ಚೌಡೇನಹಳ್ಳಿ ಗ್ರಾಮದ ಧೂತರಾಯ ಸ್ವಾಮಿ ಆಗಮನದೊಂದಿಗೆ ದಿನಾಂಕ: 26/27.02.2023 ನೇ ಭಾನುವಾರ ಮತ್ತು ಸೋಮವಾರ ಅಮ್ಮನವರ ಮಧುವಣಗಿತ್ತಿ ಶಾಸ್ತ್ರ,, ದಿನಾಂಕ: 28.02.2023 ನೇ ಮಂಗಳವಾರ ಶ್ರೀ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಆರತಿಬಾನ. ರಾತ್ರಿ ರಸಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ದಿನಾಂಕ:01.03.2023 ನೇ ಬುಧವಾರ ಗಂಗಾಸ್ನಾನ,ಸಿಡಿ ಉತ್ಸವ ನಂತರ ಮಧ್ಯಾಹ್ನ 01:30 ಕ್ಕೆ ಶ್ರೀ ದೇವಿಯವರ ದಿವ್ಯ ರಥೋತ್ಸವ, ನಂತರ ಅನ್ನ ಸಂತರ್ಪಣೆ, ಸಂಜೆ ಜಗದೊಡೆಯ ಧೂತಯ್ಯನವರ ಅದ್ದೂರಿ ಮಣೇವು ಕಾರ್ಯಕ್ರಮವಿದ್ದು, ಈ ಜಾತ್ರಾ ಮಹೋತ್ಸವಕ್ಕೆ ನಾಡಿನ ಸಚಿವರು,ಮಾಜಿ ಸಚಿವರು,ಶಾಸಕರು ಚುನಾಯಿತ ಜನಪ್ರತಿನಿಧಿಗಳು, ಜನಾಂಗದ ಮುಖಂಡರುಗಳು ವಿವಿಧ ಪಕ್ಷದ ಮುಖಂಡರುಗಳು, ನೌಕರವರ್ಗ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯ ದೊಡ್ಡೇಗೌಡ,ಶ್ರೀ ದುರ್ಗಾಂಭ ದೇವಿ ಸೇವಾ ಸಮಿತಿಯ ರಂಗಸ್ವಾಮಿ, ವಿರುಪಾಕ್ಷ,ಕಾರ್ಯದರ್ಶಿ ನಂಜಪ್ಪ, ರಂಗಸ್ವಾಮಿ ಹಾಗೂ ರಮೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA