ತಿಪಟೂರು: ತಾಲೂಕಿನ ಶ್ರೀಹೊನ್ನವಳಿ ಅಮ್ಮನವರ ರಥೋತ್ಸವ ಮಾರ್ಚ್ 13ರಂದು ನೇರವೇರಿತು. ಮಾರ್ಚ್ 5ರಂದು ಆರಂಭಗೊಂಡಿದ್ದ ರಥೋತ್ಸವ ಕಾರ್ಯಕ್ರಮವು ಸೋಮವಾರ ಮುಕ್ತಾಯಗೊಂಡಿತು.
9 ದಿನಗಳ ಕಾಲ ವಿಜೃಂಭಣೆಯಿಂದ ನಡೆದ ರಥೋತ್ಸವದಲ್ಲಿ 18 ಹಳ್ಳಿಗಳ ಸಾವಿರಾರು ಭಕ್ತರು ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು. ದೇವಿಗೆ ಜಿಲೇಬಿ, ಬೂಂದಿ, ಬಾಳೆಹಣ್ಣಿನ ರಸಾಯಣವನ್ನು ಭಕ್ತರು ಅರ್ಪಿಸಿದರು.
ಇದೇ ವೇಳೆ ಸಂಗೊಳ್ಳಿ ರಾಯಣ್ಣನ ಸಂಘದವತಿಯಿಂದ 18 ಕೆ.ಜಿ.ಯ ಕೇಕ್ ನ್ನು ಶ್ರೀಧೋತರಾಯ ಸ್ವಾಮಿ ತನ್ನ ಖಡ್ಗದಿಂದ ಕತ್ತರಿಸುವ ಮೂಲಕ ಜಾತ್ರೆಗೆ ಹುಟ್ಟುಹಬ್ಬದಂತೆ ಚಾಲನೆ ನೀಡಲಾಯಿತು.
ಊರಿನ ರಾಜ ಬೀದಿಗಳಲ್ಲಿ ಉತ್ಸವ ನೆರವೇರಿದ ಬಳಿಕ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಈ ಜಾತ್ರೋತ್ಸವದಲ್ಲಿ ಕೋಲಾಪುರದಮ್ಮ, ಚಿಕ್ಕಮ್ಮ, ಬನಶಂಕರಮ್ಮ, ಅಣ್ಣಪ್ಪಸ್ವಾಮಿ, ಕಂಚಿನ ಭೋತರಾಯಸ್ವಾಮಿ, ಧೊತರಾಯಸ್ವಾಮಿಯ ಪೂಜೆಯನ್ನು ನೆರವೇರಿಸಲಾಗಿತ್ತು. ಈ ರಥೋತ್ಸವದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA