ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕ್ಯಾತಗನಹಳ್ಳಿ ಮತ್ತು ಹೊಟ್ಟೆ ಬೊಮ್ಮನಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಕಾವಲು ಮಾರಮ್ಮ ದೇವಿಯ ಮೆರವಣಿಗೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, 41 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ, 41ನೇ ದಿನ ಎರಡು ಗ್ರಾಮಗಳ ಗ್ರಾಮಸ್ಥರು ಶ್ರೀ ಕಾವಲು ಮಾರಮ್ಮ ದೇವಿಗೆ ವಿಶೇಷ ಆರತಿ ದೀಪೋತ್ಸವ ಪೂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದರು.
ಶ್ರೀ ಕಾವಲು ಮಾರಮ್ಮ ದೇವಿಯ ಪ್ರಧಾನ ಅರ್ಚಕ ಮದಕರಿ ನಾಯಕ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಿಡಗಲ್ ಸಂಸ್ಥಾನದ ಮಡಿಲಲ್ಲಿ ನೆಲೆಸಿರುವ ಈ ಶಕ್ತಿ ದೇವತೆಗೆ ನಮ್ಮ ಎರಡು ಗ್ರಾಮಗಳ ಗ್ರಾಮ ದೇವತೆಯಾಗಿದ್ದು, ಅನೇಕ ಗ್ರಾಮಗಳಿಂದ ಭಕ್ತರು ಶ್ರೀ ಕಾವಲು ಮಾರಮ್ಮ ದೇವಿಯ ವಿಶೇಷ ಪೂಜೆಗೆ ಆಗಮಿಸಿ ಭಕ್ತಿಯಿಂದ ಬೇಡಿಕೊಂಡಿರುವ ವರಗಳನ್ನು ಕರುಣಿಸುವ ದೇವಿಯಾಗಿದ್ದು, ಇಂತಹ ದೇವಿಯನ್ನು ಪೂಜಿಸಿದರೆ ಕಂಕಣ ಭಾಗ್ಯ ಸಂತಾನ ಭಾಗ್ಯ ಗೃಹ ನಿರ್ಮಾಣಭಾಗ್ಯ ಮತ್ತು ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿ ಮಂಗಳವಾರ ವಿಶೇಷ ಪೂಜೆ ಇರುತ್ತದೆ ಸಮಸ್ತ ಭಕ್ತರು ಆಗಮಿಸಬೇಕಾಗಿ ವಿನಂತಿಸಿದರು.
ವಿಶೇಷ ಪೂಜೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತಿಮ್ಮಾರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಚಂದ್ರು ಮುಂತಾದವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ