ಮಧ್ಯಾಹ್ನ 1 ಲೋಟ ಮಜ್ಜಿಗೆ ಕುಡಿಯಿರಿ, ಹಲವು ಪ್ರಯೋಜನಗಳನ್ನ ಪಡೆಯಿರಿ:
ಮಜ್ಜಿಗೆ ಆರೋಗ್ಯಕ್ಕೆ ಉತ್ತಮವಾಗಿರುವ ಪಾನೀಯ. ಮುಖ್ಯವಾಗಿ ಮಧ್ಯಾಹ್ನ ಊಟದ ನಂತರ ಒಂದು ಲೋಟ ಮಜ್ಜಿಗೆ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮಧ್ಯಾಹ್ನ ಮಜ್ಜಿಗೆ ಕುಡಿಯುವುದರಿಂದ ನಿಮ್ಮ ಪೌಷ್ಠಿಕ ಶಕ್ತಿ ಹೆಚ್ಚುತ್ತದೆ. ನೀವು ಫ್ರೆಶ್ ಮತ್ತು ಎನರ್ಜಿಟಿಕ್ ಆಗಿರುತ್ತೀರಿ. ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಇದು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಒದಗಿಸುತ್ತದೆ.
ಕರಿಬೇವಿನ ಎಲೆಗಳಿಂದ ದೇಹಕ್ಕಾಗುವ ಪ್ರಯೋಜನ ಇಂತಿವೆ:
ಕರಿಬೇವಿನ ಎಲೆಗಳು ಎ, ಬಿ, ಸಿ & ಬಿ 2 ವಿಟಮಿನ್ ಗಳನ್ನು ಹೊಂದಿದ್ದು, ಇವು ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಕೂದಲು ಬೆಳೆವಣಿಗೆಗೆ ಪೂರಕವಾಗಿರುವ ಕರಿಬೇವಿನಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕರಿಬೇವಿನ ಎಲೆಗಳು ಅತ್ಯುತ್ತಮ ನೈಸರ್ಗಿಕ ಮೂಲಿಕೆಯಾಗಿದ್ದು, ಪಿತ್ತಜನಕಾಂಗವನ್ನು ಸಹ ರಕ್ಷಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದು ಸೋಂಕುಗಳನ್ನು ದೂರವಿಡುತ್ತದೆ.
ಗಸಗಸೆ ಬೀಜಗಳಲ್ಲಿವೆ ಹಲವಾರು ಆರೋಗ್ಯ ಪ್ರಯೋಜನಗಳು:
ಗಸಗಸೆಗಳು ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿವೆ. ನಿಮ್ಮ ಆಹಾರದಲ್ಲಿ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಕಡಿಮಿ ಮಾಡುತ್ತದೆ. ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಗಸಗಸೆ ಬೀಜಗಳಲ್ಲಿ ಮೆಗ್ರೀಸಿಯಮ್ ಮತ್ತು ಕ್ಯಾಲ್ಸಿಯಂ ಇರುತ್ತದೆ. ಅವು ಮೂಳೆಗಳನ್ನು ಬಲಗೊಳಿಸುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296