ಮಧುಗಿರಿ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 4 ಲಕ್ಷ ರೂ. ಮೌಲ್ಯದ ಮದ್ಯವನ್ನು ನ್ಯಾಯಾಲಯದ ಆದೇಶದ , ಮೇರೆಗೆ ನಾಶಪಡಿಸಲಾಯಿತು.
ಮಧುಗಿರಿ ಪ್ರಭಾರ ತಹಸೀಲ್ದಾರ್ ಕಮಲಮ್ಮ, ಸಿರಾ ಡಿಪೋ ಮ್ಯಾನೇಜರ್ ವೀರಾರೆಡ್ಡಿ, ಅಬಕಾರಿ ಅಧೀಕ್ಷಕರಾದ ಸುರೇಶ ಆರ್. ಮತ್ತು ಅಬಕಾರಿ ನಿರೀಕ್ಷಕರಾದ ರಾಮ್ ಮೂರ್ತಿ ಎಸ್ ಇವರ ನೇತೃತ್ವದಲ್ಲಿ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು.
ಒಟ್ಟು 220 ಮೊಕದ್ದಮೆಗಳಲ್ಲಿ ಅಬಕಾರಿ ಇಲಾಖೆಯು ಮದ್ಯ, ಬಿಯರ್, ಸೇಂದಿಯನ್ನು ವಶಪಡಿಸಿಕೊಂಡಿದ್ದರು. 824.510 ಲೀಟರ್ ಮಧ್ಯ, 42.940 ಲೀಟರ್ ಬಿಯರ್ ನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಪುರಸಭಾ ಇಲಾಖೆಯ ಘನ ತಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಗಿದೆ.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy