ಕೋಮುವಾದದ ವಿಷ ಕಾರಲು ಕೇಸರಿ ವಸ್ತ್ರವನ್ನು ಬಳಸುತ್ತಿರುವ ಹಿಂದೂ ಮತೀಯವಾದಿಗಳು ತಿಳಿದುಕೊಳ್ಳಬೇಕಾದ ವಾಸ್ತವ ಸಂಗತಿ ಏನೆಂದರೆ…,
ಕೇಸರಿ ವಸ್ತ್ರ ಮೂಲದಲ್ಲಿ ಬುದ್ಧಗುರು, ಬಸವಾದಿ ಪ್ರಮಥ ಶರಣರು, ಪಂಚಗಣಾಧೀಶರು ಹಾಗೂ ದೇಶಿ ಯೋಗಧಾರೆಯ ಸಾಧು ಸನ್ಯಾಸಿ ಯೋಗಿಗಳು ಧರಿಸುತ್ತಿದ್ದ ಧರ್ಮಾತೀತ ವಸ್ತ್ರವಾಗಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆಯನ್ನು ಪಡೆದ ಬಳಿಕ ಬುದ್ಧಗುರುವಿನಂತೆ ಇದೇ ಕೇಸರಿ ಚೀವರವನ್ನು ಧರಿಸಿದ್ದರು. ಆಗೆಲ್ಲಾ ಕೇಸರಿ ಶಾಲು ಹಿಂದೂ ಮತೀಯವಾದಿಗಳ ಲಾಂಛನವಾಗಿರಲಿಲ್ಲ. ಇಂತಹ ಕೇಸರಿಯನ್ನು ಹಿಂದೂಧರ್ಮದ ಗುರುತಿನ ಬಣ್ಣದ ವಸ್ತ್ರವನ್ನಾಗಿ ಹೈಜಾಕ್ ಮಾಡಿರುವ ಹಿಂದೂ ಮತೀಯವಾದಿಗಳು ಹಚ್ಚುತ್ತಿರುವ ಬೆಂಕಿಗೆ ವಿದ್ಯಾರ್ಥಿಗಳು ದೀಪದ ಹುಳುಗಳಂತೆ ಆಕರ್ಷಿತವಾಗಬಾರದು. ದೀಪದ ಹುಳುಗಳು ರೆಕ್ಕೆ ಸುಟ್ಟು ಬೀಳುವಂತೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸುಟ್ಟುಕೊಳ್ಳಬಾರದು.
ನ್ಯಾಯಾಲಯವು ಬುದ್ಧಗುರು ಬಸವಣ್ಣ ಅಂಬೇಡ್ಕರ್ ಬಳಸಿರುವ ಕೇಸರಿ ವಸ್ತ್ರವನ್ನು ಕೋಮುವಾದವನ್ನು ಪ್ರಚೋದಿಸುವ ಲಾಂಛನವನ್ನಾಗಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಬಳಸಿಕೊಳ್ಳಬಾರದೆಂದು ನಿಷೇಧ ಹೇರಲು ನಾವು ಸರ್ಕಾರವನ್ನು ಒತ್ತಾಯಿಸುವ ಅಗತ್ಯವಿದೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB