Author: admin

ಶ್ರೀರಾಮಚಂದ್ರನ ಫೋಟೋವಿರುವ ಪೇಪರ್​ ಪ್ಲೇಟ್ ​ಗಳಲ್ಲಿ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ಬಿರಿಯಾನಿ ಬಡಿಸುತ್ತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯ ಜಹಾಂಗೀರ್‌ ಪುರಿಯಲ್ಲಿರುವ ಬಿರಿಯಾನಿ ಜಾಯಿಂಟ್ ‌ನಲ್ಲಿ ಈ ಘಟನೆ ವರದಿಯಾಗಿದ್ದು, ಸದ್ಯ ಅಂಗಡಿ ಮಾಲೀಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಪೇಪರ್​ ಪ್ಲೇಟ್ ​ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಹಾಕಿಕೊಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ​ನಲ್ಲಿ ಚಿತ್ರೀಕರಿಸಿದ್ದು, ಎಲ್ಲೆಡೆ ಹರಿಬಿಟ್ಟಿದ್ದಾರೆ. ಬಿರಿಯಾನಿಗಾಗಿ ಅಂಗಡಿಯ ಬಳಿ ಜನರು ಗುಂಪುಗಟ್ಟಿ ಸಾಲು ಸಾಲಾಗಿ ನಿಂತಿರುವುದು ಕಾಣಬಹುದು. ಬಜರಂಗದಳದ ಸದಸ್ಯರು ತಕ್ಷಣವೇ ಅಂಗಡಿಯ ಮಾಲೀಕರಿಗೆ ಆ ಪ್ಲೇಟ್ ‌ಗಳಲ್ಲಿ ಬಿರಿಯಾನಿ ಮಾರಾಟ ಮಾಡದಂತೆ ಎಚ್ಚರಿಸಿ, ನಂತರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಬೆಂಗಳೂರು:  ಎಲೆಕ್ಟ್ರಾನಿಕ್ ಸಿಟಿಯ ಸಿಂಘಸಂದ್ರದ ಬಳಿಯ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಟಿಂಬರ್‌ ನಲ್ಲಿ ಬೆಂಕಿ ಕಾಣಿಸಿದೆ ಎರಡು ಕಾರುಗಳು ಸುಟ್ಟು ಕರಕಲಾಗಿವೆ. ಮಧ್ಯರಾತ್ರಿ ಕಟ್ಟಿಗೆಗಳನ್ನು ಸಂಗ್ರಹ ಮಾಡಿದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿದ್ದ ಕಾರ್‌ ವಾಶ್‌ ರೂಂನಲ್ಲಿದ್ದ ಎರಡು ಕಾರುಗಳು ಭಸ್ಮಗೊಂಡಿದೆ. ಟಿಂಬರ್ ಹಿಂದೆಯಿದ್ದ ಗಾರ್ಮೆಂಟ್ಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ರ್ಯಾಂಡೆಡ್ ರೆಡಿಮೆಡ್ ಬಟ್ಟೆಗಳು ಪ್ಯಾಕ್ ಆಗಿದ್ದ ಬಾಕ್ಸ್ ಗಳು ಸುಟ್ಟು ಹೋಗಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಔರಾದ್:  ಪಟ್ಟಣದ ವಾರ್ಡ್ ನಂಬರ್ 92 ರಲ್ಲಿ ಜನತಾ ಕಾಲೋನಿಯಲ್ಲಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾ ಸಹ ಸಂಚಾಲಕರಾದ ಸುಧಾಕರ್ ಕೊಳ್ಳುರ ರವರ ನೇತೃತ್ವದಲ್ಲಿ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸಲಾಯಿತು ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಾಗರ್ ಈಶ್ವರ್ ಖಂಡ್ರೆ ಅವರ ಪರ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಸುಧಾಕರ್ ಕೊಳ್ಳುರ ರವರು, ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಸರ್ಕಾರ ಬಂದ ತಕ್ಷಣ ಐದು ಗ್ಯಾರಂಟಿಗಳು ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ ಎಂದರು. ಗ್ಯಾರಂಟಿಗಳಿಂದ ಜನರು ಬದುಕು ಸಾಗಿಸಲು ತುಂಬಾನೇ ಅನುಕೂಲವಾಗಿದೆ. ಅದೇ ತರ ಈ ಬಾರಿ ಕೂಡ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ತಕ್ಷಣ ಐದು ನ್ಯಾಯಗಳ ಜೊತೆ 25 ಗ್ಯಾರಂಟಿಗಳು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಪಾಲುದಾರಿಕೆ ನ್ಯಾಯಗಳು ಎಂಬ ಐದು…

Read More

ಯಾದಗಿರಿ: ಯಾದಗಿರಿ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಕೆರೆಯಲ್ಲಿ ಈಜಾಡಲು ತೆರಳಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗನೂರು ಗ್ರಾಮದ ಹೈಯಾಳಪ್ಪ(11), ಶರಣಬಸವ(10) ಹಾಗೂ ಅನಿಲ್(10) ಮೃತ ಬಾಲಕರಾಗಿದ್ದಾರೆ. ಗ್ರಾಮದ ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ಕೆರೆಯಲ್ಲಿ ಕೆಸರಿನಲ್ಲಿ ಸಿಲುಕಿ ಬಾಲಕರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಗ್ರಾಮಸ್ಥರು ಮೃತ ಬಾಲಕರ ಮೃತದೇಹ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸರಗೂರು: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು, ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು, ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು, ನಮ್ಮ ತಂದೆಗೊಂದು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜುರವರ ಮಗನಾದ ಯೊಗಾಂಶು ಬಾಲರಾಜು ಮನವಿ ಮಾಡಿದರು. ತಾಲೂಕಿನ ಮುಳ್ಳೂರು ಮತ್ತು ಹಂಚೀಪುರ ಶಕ್ತಿ ಕೇಂದ್ರಗಳಲ್ಲಿ ಮಂಗಳವಾರದಂದು, ಭಾರತೀಯ ಜನತಾ ಹಾಗೂ ಜನತಾದಳ ಪಕ್ಷದ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು. ಇವೆಲ್ಲವನ್ನು ಪ್ರಬುದ್ದ ಮತದಾರರು ಅರ್ಥೈಸಿಕೊಂಡಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂದೆ ಕೊಳ್ಳೇಗಾಲ ತಾಲ್ಲೂಕಿನ ಆಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ತಾತನ ಕಾಲದಿಂದಲೂ ಜನರು ಸೇವೆ ಮಾಡಿಕೊಂಡು ಇವಾಗಲೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು. ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡಲು ಸಿದ್ಧರಿದ್ದಾರೆ. ಸದಾ ನಿಮ್ಮೊಂದಿಗೆ ಬೆರೆತು ಕ್ಷೇತ್ರದ ಅಭಿವೃದ್ದಿಗೆ ದುಡಿಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಗೂ…

Read More

ಪಾವಗಡ: ಈ ಲೋಕಸಭಾ ಚುನಾವಣೆಯು ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ ಎಂದು ಮದುಗಿರಿ ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ಎಸ್. ಶಿವಪ್ರಸಾದ್ ತಿಳಿಸಿದ್ದಾರೆ. ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ಬಿಜೆಪಿ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಮನೆಮನೆ ಪ್ರಚಾರ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆ ಪ್ರತಿ ಮನೆಗೂ ತಲುಪಿದೆ ಉಜ್ವಲ ಯೋಜನೆ ಅನಿಲ ಗ್ಯಾಸ್, ಗರೀಬ್ ಕಲ್ಯಾಣ್ ಅಕ್ಕಿ ಯೋಜನೆ, ಸ್ವಚ್ಛ ಭಾರತ ಅಡಿಯಲ್ಲಿ ಶೌಚಾಲಯ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ, ಆಯುಷ್ಮಾನ್ ಭಾರತ್, ಬ್ಯಾಂಕಿನಲ್ಲಿ ಜನಧನ ಖಾತೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹಳ್ಳಿಗಳಿಗೆ ರಸ್ತೆ, ನೂತನ ರಾಷ್ಟ್ರೀಯ ಹೆದ್ದಾರಿಗಳನಿರ್ಮಾಣ, ಸೇರಿದಂತೆ ಅನೇಕ ಜನಪರ ಯೋಜನೆಗಳು ದೇಶದ ಜನತೆಗೆ ತಲುಪಿವೆ. ಹತ್ತು ವರ್ಷಗಳಲ್ಲಿ ದೇಶ ಕಾಯುವ ಸೈನ್ಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ದೇಶದ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ…

Read More

ಸರಗೂರುತಾಲ್ಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯ ಮಟಕೆರೆ ಗ್ರಾಮದ ಮೊಳೆಯೂರು ಸರ್ಕಲ್ ಬಳಿ ಬೈಕ್ ಹಾಗೂ ಗೂಡ್ಸ್ ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಂಗ್ರೆಸ್ ಪಕ್ಷದ ಸೇವಾದಳ ತಾಲ್ಲೂಕು ಮಠದಕಟ್ಟೆ ಮಣಿಕಂಠ (32) ವರ್ಷ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರವಾಗಿ ಮತಯಾಚನೆ ಮಾಡಲು, ವಿವಿಧ ಗ್ರಾಮಗಳಿಗೆ ಬೈಕ್ ಮೂಲಕ ಮತಯಾಚನೆ ನಡೆಸುತ್ತಿದ್ದು, ಮೊಳೆಯೂರು ಸರ್ಕಲ್ ಬಳಿ ಎದುರುಗಡೆಯಿಂದ ಗೂಡ್ಸ್ ಆಟೋ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅವರ ತಲೆ ಮತ್ತು ಕಾಲುಗೆ ಗಾಯಗಳಾಗಿದ್ದು, ಅವರಿಗೆ ಪಟ್ಟಣದ ವಿವೇಕಾನಂದ ಯೂತ್ ಮೊಮೆಂಟ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಣಿಕಂಠ ಕಾಂಗ್ರೆಸ್ ಪಕ್ಷದ ಅಪ್ಪಟ ಕಾರ್ಯಕರ್ತನಾಗಿದ್ದಾರೆ. ಇವರು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಲು ಬೈಕ್ ಮೂಲಕ ವಿವಿಧ ಗ್ರಾಮಗಳಿಗೆ ಹೋಗಿದ್ದರು. ಮತಯಾಚನೆಗಾಗಿ ಮಠದಕಟ್ಟೆ ಗ್ರಾಮದಿಂದ ಬಿ ಮಟಕೆರೆ ಗ್ರಾಪಂ ವ್ಯಾಪ್ತಿಯ…

Read More

ಸರಗೂರು: ನಮಗೆ ಸಮಾಜಕ್ಕೆ ಬೆಂಬಲ ನೀಡುವ ಪಕ್ಷಕ್ಕೆ ಬೆಂಬಲ ನೀಡಿ ಎಂದು ಟೌನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆರ್ಯ ಈಡಿಗ ಸಮಾಜದ ಮುಖಂಡ ನಾಗರಾಜು ಕರೆ ನೀಡಿದರು. ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಸಮಯದಲ್ಲಿ ಸಾರಾಯಿ, ಶೇಂದಿ ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರು. ಇದರಿಂದಾಗಿ ಆರ್ಯ ಈಡಿಗ ಸಮುದಾಯದ ಮುಖಂಡರು ಬೀದಿ ಪಾಲಾಗಿದ್ದಾರೆ. ಅವರಿಗೆ ಏನು ಪರಿಹಾರ ಕೊಟ್ಟಿದ್ದೀರಿ ಹೇಳಿ  ಸ್ವಾಮಿಜೀಗಳೇ ಎಂದು ಪ್ರಶ್ನಿಸಿದ್ದಾರೆ. ಸರಗೂರು ತಾಲ್ಲೂಕಿನ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಮಾತನಾಡಿದ ಟೌನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಆರ್ಯ ಈಡಿಗ ಸಮಾಜದ ಮುಖಂಡ ನಾಗರಾಜು ಮಾತನಾಡಿ,  ನಾನು ನನ್ನ ಸಮುದಾಯದ ಪರವಾಗಿ ಮುಂದೆ ಹೋಗುತ್ತಿರುವಾಗ ನಿಮ್ಮ ಗಮನಕ್ಕೆ ಬಂದ ಕೂಡಲೇ ಸ್ವಾಮೀಜಿಗಳೇ ನನ್ನ ಮೇಲೆ  ದೂರು ದಾಖಲಾಗಿಸಿದ್ದೀರಿ. ಇದು ನ್ಯಾಯವೇ? ನಮ್ಮ ಸಮುದಾಯಕ್ಕೆ ಬೆಂಬಲವಾಗಿ ನಿಂತ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದರು. ಮೊದಲು ನಮ್ಮ ಸಮಾಜ ಯುವಕರು ಸಾರಾಯಿ…

Read More

ತುಮಕೂರು: ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ತುಂಬ ಚೆನ್ನಾಗಿದೆ. ನಾನು ಇವತ್ತು ಶಿವಮೊಗ್ಗಕ್ಕೆ ಹೋಗಿ, ನಂತರ ಬೀದರ್ ಕಡೆಗೆ ಹೋಗ್ತೀನಿ. ಎಲ್ಲಾ ಕಡೆ ನಿರೀಕ್ಷೆ ಮೀರಿ ಜನ ಬೆಂಬಲ ಸಿಗ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ತಿಪಟೂರಿನಲ್ಲಿ ವಿ. ಸೋಮಣ್ಣ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೋದಿ ಮತ್ತೆ ಅಮಿತ್ ಷಾ ಗಾಳಿ ಎಲ್ಲಾ ಕಡೆ ಬೀಸ್ತಿದೆ. ಇದೆಲ್ಲದರ ಆಧಾರದ ಮೇಲೆ‌ ಹೇಳ್ತಿನಿ, ಸೋಮಣ್ಣನವರು ಬಹಳ ಅಂತರದಿಂದ ಗೆಲ್ತಾರೆ ಎಂದರು. ತುಮಕೂರಿನಲ್ಲಿ ಸೋಮಣ್ಣ ಅವರು, ಬಹಳ ಅಂತರದಿಂದ ಗೆಲ್ತಾರೆ. ಎಷ್ಟು ಲಕ್ಷ ಅಂತರದಲ್ಲಿ ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕು ಎಂದರು. ರಾಜ್ಯದಲ್ಲಿ 28 ಕ್ಕೆ 28 ನಾವು ಗೆಲ್ತೀವಿ. ಕುಮಾರಸ್ವಾಮಿ ಪರ ಸುಮಲತಾ ಪ್ರಚಾರಕ್ಕೆ ಹೋಗದ ವಿಚಾರದಲ್ಲಿ, ಕುಮಾರಸ್ವಾಮಿ ಪರ ಸುಮಲತಾರನ್ನ ಪ್ರಚಾರಕ್ಕೆ ಕರೆದರೆ ಹೋಗ್ತಿನಿ ಅಂತ ಸುಮಲತಾ ಹೇಳಿದ್ದಾರೆ. ಸುಮಲತಾ ಪ್ರಚಾರಕ್ಕೆ ಹೋಗ್ತಾರೆ ಎಂದರು. ದೇವೇಗೌಡರ ಮತ್ತು ಪ್ರಧಾನಿ ಅವರ ಸಂಬಂಧ ಹೇಗಿದೆ…

Read More

ಸರಗೂರು: ಮಂಗಳವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಪುತ್ರ ಸುನೀಲ್ ಬೋಸ್ ಪರ ರೋಡ್ ನಡೆಸಿ ಸಚಿವ ಎಚ್.ಸಿ. ಮಹದೇವಪ್ಪ ಮತಯಾಚನೆ ಮಾಡಿದರು. ಸರಗೂರು ಪಟ್ಟಣದ ಮಹಾವೀರ ಸರ್ಕಲ್ ಬಳಿ ಸಾಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಹೂವಿನ ಹಾರ ಹಾಕಿ ಹೂ ಚೆಲ್ಲಿ, ನಂತರ ರೋಡ್ ಶೋ ನಲ್ಲಿ ಒಂದನೇ ಮುಖ್ಯ ರಸ್ತೆ ಹಾಗೂ ಎರಡನೇ ಮುಖ್ಯ ಮೆರವಣಿಗೆ ಮೂಲಕ ಮತಯಾಚನೆ ಮಾಡಿ, ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ನನ್ನನ್ನು ಹತ್ತಿರದಿಂದ ಬಲ್ಲ ಜನರಿಗೆ, ಎಲ್ಲರನ್ನೂ ಪ್ರೀತಿಸುವ ನನ್ನ ಸ್ವಭಾವ ಗೊತ್ತು. ಈ ಕ್ಷೇತ್ರಕ್ಕೆ ಒಳ್ಳೆಯ, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ನಿಸ್ವಾರ್ಥವಾಗಿ ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕೆಲಸ ಮಾಡಬೇಕೆಂಬ ಆಶಯ ಹೊಂದಿದ್ದೇನೆ ಎಂದರು. ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರು ಬಿಜೆಪಿ ಸರ್ಕಾರದ ವಿರೋದಿಯಾಗಿದ್ದಾರೆ.. ಬಡಜನರಿಗೆ ಅನ್ಯಾಯವಾಗಿದೆ. ಬಡವರ ಪರ ಮುಖ್ಯಮಂತ್ರಿಯವರ ಬಜೆಟ್,…

Read More