Author: admin

ಗುಜರಾತ್‌ ನಲ್ಲಿ ಮದುವೆ ಮೆರವಣಿಗೆಯಲ್ಲಿ ದಲಿತ ವರನ ಮೇಲೆ ಕುದುರೆಯ ಮೇಲೆ ಏರಿದಕ್ಕೆ ಅಮಾನುಷವಾಗಿ ಥಳಿಸಲಾಗಿದೆ. ಗಾಂಧಿನಗರ ಜಿಲ್ಲೆಯ ಚಡಸಾನ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಿಕಾಸ್ ಚಾವ್ಡಾ ಎಂಬ ಯುವಕನನ್ನು ಅಮಾನುಷವಾಗಿ ಥಳಿಸಲಾಗಿದೆ. ವರ ಮತ್ತು ತಂಡ ವಧುವಿನ ಮನೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ನಲ್ಲಿ ಬಂದ ಗುಂಪು ಯುವಕನನ್ನು ತಡೆದು ಥಳಿಸಿದ್ದಾರೆ. ಮೇಲ್ವರ್ಗಕ್ಕೆ ಸೇರಿದವರು ಮಾತ್ರ ಕುದುರೆ ಸವಾರಿ ಮಾಡಬಹುದು ಎಂದು ದಾಳಿ ನಡೆಸಲಾಗಿದೆ. ಆರೋಪಿಗಳು ಯುವಕರ ಮೇಲೆ ಜಾತಿ ನಿಂದನೆ ಮಾಡಿ  ಥಳಿಸಿದ್ದಾರೆ. ಪೊಲೀಸರು  ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಒಬಿಸಿ ವರ್ಗಕ್ಕೆ ಸೇರಿದ ಸೈಲೇಶ್ ಠಾಕೂರ್, ಜಯೇಶ್ ಠಾಕೂರ್, ಸಮೀರ್ ಠಾಕೂರ್ ಮತ್ತು ಅಶ್ವಿನ್ ಠಾಕೂರ್ ಬಂಧಿತರು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504, 114 ಮತ್ತು 506 (2) ಮತ್ತು ಎಸ್‌ಸಿ/ಎಸ್‌ ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ…

Read More

ಶಾಸಕ ಕೆ. ಗೋಪಾಲಯ್ಯಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್​​​​​​​​​​​​​​ ಪದ್ಮರಾಜ್​ ನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ  ಪಡೆದಿದ್ದಾರೆ. ಪದ್ಮರಾಜ್ ಬಳಿಯಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಜಿ ಸಚಿವ, ಬಿಜೆಪಿ ಶಾಸಕ ಕೆ. ಗೋಪಾಲಯ್ಯಗೆ  ಜೀವ ಬೆದರಿಕೆ  ಹಾಕಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯಗೆ ಕರೆ ಮಾಡಿದ್ದ ಪದ್ಮರಾಜು, ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್​ ಠಾಣೆಗೆ ಕೆ. ಗೋಪಾಲಯ್ಯ ದೂರು ನೀಡಿದ್ದರು. ಈ ಸಂಬಂಧ ಶಾಸಕ ಕೆ.ಗೋಪಾಲಯ್ಯ ಅವರು, ವಿಧಾನಸಭೆ ಸ್ಪೀಕರ್​ಗೆ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರಿ​ಗೂ ದೂರು ನೀಡಿದ್ದರು. ಪದ್ಮರಾಜು​​ ಬೆದರಿಕೆ ಹಾಕಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರಿಗೂ ದೂರು ನೀಡುತ್ತೇನೆ. ಪದ್ಮರಾಜುನನ್ನ ಗಡಿಪಾರು ಮಾಡುವಂತೆ ಆಗ್ರಹಿಸುತ್ತೇನೆ ಎಂದು ಗೋಪಾಲಯ್ಯ ಹೇಳಿದ್ದಾರೆ.

Read More

ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ ಸಾಕಷ್ಟು ಟ್ರೆಂಡ್​​ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ. ಇದರಿಂದ ಬೆಳ್ಳುಳ್ಳಿಯಿಂದ ತಯಾರಿಸುವ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳ್ಳುಳ್ಳಿ ಕಬಾಬ್​ ತಿನ್ನಬೇಕೆಂಬ ಆಸೆ ಇಟ್ಟುಕೊಂಡವರಿಗೆ ಬೆಲೆಯ ಬಿಸಿ ತಟ್ಟಲಿದೆ. ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೆಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ. ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ ಮಾತನಾಡಿ, ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 40 ಕೆಜಿ ತೂಕವಿರುವ 3,000 ಬೆಳ್ಳುಳ್ಳಿ ಚೀಲ ಬರುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿದೆ ಎಂದು…

Read More

ಸೋನಿಯಾ ಗಾಂಧಿ ಇಂದು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಸೋನಿಯಾ ಗಾಂಧಿ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕರು ಜೈಪುರಕ್ಕೆ ಆಗಮಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸಬಹುದು. ಸೋನಿಯಾ ಗಾಂಧಿ ಅವರು 2006 ರಿಂದ ರಾಯ್ ಬರೇಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದಾಗಲೂ ರಾಯ್ ಬರೇಲಿಯಲ್ಲಿ ಸೋನಿಯಾ ಗೆಲುವು ಸಾಧಿಸಿದ್ದರು. ಹಾಗಾಗಿ ಮಗಳು ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗ ರಾಯ್ ಬರೇಲಿ ಅವರಿಗೆ ಸೂಕ್ತ ಮತ್ತು ಸುರಕ್ಷಿತ ಸ್ಥಾನವಾಗಿದೆ. ರಾಯ್ ಬರೇಲಿ ಅವರ ಅಜ್ಜ ಫಿರೋಜ್ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. 2019 ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಗೋಡಾದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮೋದಿ ಮತ್ತು ಪ್ರಿಯಾಂಕಾ ಗಾಂಧಿ ನಡುವೆ ಬಹಿರಂಗ ಹೋರಾಟ ನಡೆಯಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಆದರೆ ಉತ್ತರ ಪ್ರದೇಶ ರಾಜ್ಯದ ನಾಯಕತ್ವವನ್ನು ಹಿಡಿದ ನಂತರ ಪ್ರಿಯಾಂಕಾ ಚುನಾವಣಾ ಕ್ಷೇತ್ರದಿಂದ ದೂರ ಉಳಿದಿದ್ದರು.

Read More

ಕ್ಯಾಲಿಫೋರ್ನಿಯಾದಲ್ಲಿ ಮಲಯಾಳಿ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಆರಂಭದಲ್ಲಿ ಎಸಿ ಅಥವಾ ಚಳಿಗಾಲದಲ್ಲಿ ಬಳಸುವ ಹೀಟರ್‌ ನಿಂದ ವಿಷಕಾರಿ ಅನಿಲವನ್ನು ಉಸಿರಾಡಿದ್ದೇ ಸಾವಿಗೆ ಕಾರಣ ಎಂಬ ಶಂಕೆಯನ್ನು ಸಂಬಂಧಿಕರು ಹಂಚಿಕೊಂಡಿದ್ದರು. ನಂತರ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿದೆ. ಕೇರಳದ ಕೊಲ್ಲಂನ ಒಂದೇ ಕುಟುಂಬದ ನಾಲ್ವರು ಕ್ಯಾಲಿಫೋರ್ನಿಯಾದ ತಮ್ಮ ಮನೆಯೊಳಗೆ ಕಳೆದ ದಿನ ಶವವಾಗಿ ಪತ್ತೆಯಾಗಿದ್ದಾರೆ. ಫಾತಿಮಾ ಮಾತಾ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಜಿ. ಹೆನ್ರಿ ಅವರ ಪುತ್ರ ಆನಂದ್ ಸುಜಿತ್ ಹೆನ್ರಿ(42) ಮತ್ತು ಅವರ ಪತ್ನಿ ಆಲಿಸ್ ಪ್ರಿಯಾಂಕಾ(40) ಮತ್ತು ಅವರ ಅವಳಿ ಮಕ್ಕಳಾದ ನೋಹ್ ಮತ್ತು ನೀಥಾನ್(4) ಮೃತರು. ಆನಂದ್ ಸುಜಿತ್ ಮತ್ತು ಅವರ ಪತ್ನಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಇಬ್ಬರ ಮೃತದೇಹಗಳು ಮನೆಯ…

Read More

ನಟ ಉಪೇಂದ್ರ ಅವರು ಯಾವುದೇ ಚಿತ್ರವನ್ನು ಹೊರ ತಂದರೂ ಅದರಲ್ಲೇನೋ ವಿಭಿನ್ನತೆ ಇರುತ್ತೆ. ಭರ್ಜರಿ ಮನರಂಜನೆ ಸಿಗುತ್ತೆ. ಹೀಗಾಗಿ ಅವರು ತುಂಬಾ ಸಮಯ ತೆಗೆದುಕೊಂಡು ಮಾಡುವ ಚಿತ್ರಗಳು ಪ್ರೇಕ್ಷಕರಿಗೂ ಅದು ತುಂಬಾ ಇಷ್ಟವಾಗುತ್ತೆ. ಸದ್ಯ ಉಪೇಂದ್ರ ಅಭಿನಯಿಸಿ, ನಿರ್ದೇಶಿಸುತ್ತಿರುವ “ಯುಐ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ “ಪ್ರೇಮಿಗಳ ದಿನ’ವಾಗಿರುವ ಫೆ. 14ರಂದು “ಯುಐ’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಸಿನಿಮಾದ ಟೀಸರ್‌ ಅನ್ನು ಬಿಡುಗಡೆಗೊಳಿಸಿತ್ತು. ಈ ಟೀಸರ್‌ ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ “ಯುಐ’ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಎರಡು ದಿನಗಳ ಮುಂಚೆಯೇ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸ್ವತಃ ಮಾಹಿತಿ ಹಂಚಿಕೊಂಡಿರುವ “ಯುಐ’ ಸಿನಿಮಾದ ನಾಯಕ ನಟ ಕಂ ನಿರ್ದೇಶಕ ಉಪೇಂದ್ರ, “ಪ್ರೇಮಿಗಳ ದಿನ’ದ ಅಂಗವಾಗಿ “ಯುಐ’ ಸಿನಿಮಾದ ಮೊದಲ ಹಾಡು ಫೆ.14 ರ ಬೆಳಿಗ್ಗೆ…

Read More

ಬಾಯ್ ​ಫ್ರೆಂಡ್​ ಜತೆ ಸೇರಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯೊಬ್ಬಳು ಇನ್ನೆಂದೂ ಬಾರದ ಲೋಕಕ್ಕೆ ಪ್ರಯಾಣಿದ್ದಾಳೆ. ಡ್ರಗ್ಸ್​ ನಿಂದ ಆಕೆಯ ಪ್ರಾಣ ಚೆಲ್ಲಿರಬಹುದೇ ಎಂಬ ಸಂಶಯ ಶುರುವಾಗಿ ಆಕೆಯ ಬಾಯ್ ​ಫ್ರೆಂಡ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಿತಿ ಏಂಜೆಲ್​(19) ಉಸಿರು ಚೆಲ್ಲಿದ ಯುವತಿಯೆಂದು ತಿಳಿದು ಬಂದಿದೆ. ಊಟಿಯ ಬಾಂಬೆ ಕ್ಯಾಸ್ಟ್ಲ್​ ಮೂಲದ ಬಾಯ್ ​ಫ್ರೆಂಡ್​ ಆಕಾಶ್​(20)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕಾಶ್​ ತಂದೆ-ತಾಯಿ ಬೇರೆ ಬೇರೆ ವಾಸಿಸುತ್ತಿದ್ದರು. ಹೀಗಾಗಿ ಆತ ತನ್ನ ಅಜ್ಜಿಯ ಜತೆ ನೆಲೆಸಿದ್ದ. ಯುವತಿ ರಿತಿ, ಊಟಿಯ ಪಿಂಕರ್​ ಪೋಸ್ಟ್​ ಮೂಲದವಳು. ಊಟಿಯ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು 10ನೇ ತರಗತಿಯವರೆಗೆ ಒಟ್ಟಿಗೆ ಓದಿದ್ದರು ಎನ್ನಲಾಗಿದೆ. ಇವರಿಬ್ಬರ ನಡುವೆ ಆತ್ಮೀಯತೆ ಕೊನೆಗೆ ಪ್ರೀತಿಗೆ ತಿರುಗಿತ್ತು. ರಿತಿ ಏಂಜೆಲ್​ ಕೊಯಮತ್ತೂರಿನಲ್ಲಿರುವ ಖಾಸಗಿ ನರ್ಸಿಂಗ್​ ಕಾಲೇಜು ಸೇರಿದ್ದು ಕೆಲಸ ನಿರ್ವಹಿಸುತ್ತಿದ್ದಳು. ಆಕಾಶ್​ ನೀಲಗಿರಿಯಲ್ಲಿ ಖಾಸಗಿ ಇಂಜಿನಿಯರಿಂಗ್​ ಕಾಲೇಜು ಸೇರಿದನು. ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಇದೇ ಭೇಟಿ ಇಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು…

Read More

ಗ್ರಾಮೀಣ ಪ್ರದೇಶಗಳ ಕಡೆ ಬಸ್ಸುಗಳಲ್ಲಿ ಓಡಾಡುವಾಗ ನಾಯಿ ಮರಿ, ಕೋಳಿ ಮರಿ , ಬೆಕ್ಕಿನ ಮರಿ ಹೀಗೆ ಕೊಂಡೊಯ್ಯುವವರ ಸಂಖ್ಯೆ ಹೆಚ್ಚಾಗಿರುತ್ತೆ. ಕೆಲವೊಂದು ಸಲ ರೊಚ್ಚಿಗೆದ್ದ ಕಂಡೆಕ್ಟರ್ ಇದನ್ನೆಲ್ಲ ಗಮನಿಸಿ ಬೈದಿದ್ದು ಇದೆ. ಇದಕ್ಕಾಗಿ ಪ್ರಯಾಣಿಕರು ಠಾಣೆ ಮೆಟ್ಟಿಲೇರಿದ್ದೂ ಇದೆ. ಇದೀಗ ಇಲ್ಲೊಬ್ಬರು ಮಹಿಳೆ ರಟ್ಟಿನ ಬಾಕ್ಸ್ ​​​​ನಲ್ಲಿ ಕೋಳಿಯನ್ನು ಮುಚ್ಚಿಟ್ಟುಕೊಂಡು ಪ್ರಯಾಣ ಬೆಳೆಸಿದ್ದಾರೆ. ಕೂಡ್ಲಿಗಿಯಿಂದ ಜಗಳೂರು ಕಡೆ ಪ್ರಯಾಣಿಸುತ್ತಿದ್ದಾಗ ಬಾಕ್ಸ್​​​​ ನಲ್ಲಿದ್ದ ಕೋಳಿ ಕೋ ಕೋ ಕೋ ಎಂದು ಕೂಗಲಾರಂಭಿಸಿದೆ. ಕೋಳಿ ಕೂಗು ಕೇಳಿ ಬಸ್ ಕಂಡಕ್ಟರ್ “ಕೋಳಿ ಯಾರದು”? ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆ ಕೋಳಿ ಮಾಲೀಕರಾದ ಮಹಿಳೆಯ ಬಳಿ ಕೋಳಿಗೆ ಟಿಕೆಟ್ ಕೇಳಿದಾಗ “ಟಿಕೆಟ್ ತಗೋತಿನಿ ಆದ್ರೆ ಅದಕ್ಕೂ ಬಸ್ಸಿನಲ್ಲಿ ಸೀಟು ಕೊಡಬೇಕು” ಎಂದು ವಾಗ್ವಾದಕ್ಕಿಳಿದಿದ್ದಾರೆ..! ಈ ಅಪರೂಪದ ಘಟನೆ ಕೂಡ್ಲಿಗಿ ಬಸ್ ನಿಲ್ದಾಣದ ಹಗರಿಬೊಮ್ಮನಹಳ್ಳಿ ಸಾರಿಗೆ ಸಂಸ್ಥೆ ಘಟಕದ ಧರ್ಮಸ್ಥಳ ಕಡೆ ಹೋಗುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ಘಟಕದಿಂದ ಹೊಸಪೇಟೆ ಮೂಲಕ ಕೂಡ್ಲಿಗಿ, ಕೊಟ್ಟೂರು,…

Read More

ಭಾರತ ದೇಶಕ್ಕೆ ಕರಾಳ ದಿನ ಫೆ.14 ಈ ದಿನವನ್ನು ಪ್ರೇಮಿಗಳ ದಿನ ಎಂದು ಕರೆದರೂ, ಭಾರತ ದೇಶಕ್ಕೆ ಕರಾಳ ದಿನವೂ ಹೌದು. ಏಕೆಂದರೆ ಇದೇ ದಿನ 5 ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು. ಕರ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನವೊಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(CRPF) ಯೋಧರನ್ನು ಕೂರಿಸಿಕೊಂಡು ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ನಂತರ 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ಹಲವಾರು ಯೋಧರು (Warriors) ಗಾಯಗೊಂಡರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಈ ಭಯೋತ್ಪಾದಕ ದಾಳಿ ನಡೆದಿತ್ತು. ವರದಿಗಳ ಪ್ರಕಾರ, ವಾಹನವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳ ಬೆಂಗಾವಲು ಪಡೆಯಲ್ಲಿ 70 ಕ್ಕೂ ಹೆಚ್ಚು ವಾಹನಗಳು ಇದ್ದವು. ಈ ವಾಹನವನ್ನು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಓಡಿಸುತ್ತಿದ್ದರು. ನಂತರ ಅವರನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು. ಈ ವಾಹನವು…

Read More

ಈ ಬಾರಿ ಅರಬ್ಬೀ ಸಮುದ್ರದಲ್ಲಿ 100 ಕೆಜಿಗೂ ಅಧಿಕ ಭಾರದ ಹರಳಿನ ಶಿವಲಿಂಗವೊಂದು ಮೀನುಗಾರರ ಬಲೆಗೆ ಬಿದ್ದಿದ್ದು ನೆರೆದವರು ಒಂದು ಕ್ಷಣ ಗಾಬರಿಯಾದರು. ಇಂತಹ ಘಟನೆ ನಡೆದಿದ್ದು ಭರೂಚ್ ಜಿಲ್ಲೆಯ ಜಂಬೂಸರ್ ತಾಲೂಕಿನ ಕವಿ ಗ್ರಾಮದಲ್ಲಿ. ಮೀನುಗಾರರ ಬಲೆಯಲ್ಲಿ 100 ಕೆಜಿಗೂ ಅಧಿಕ ತೂಕದ ಎರಡೂವರೆ ಅಡಿ ಎತ್ತರದ ಶಿವಲಿಂಗ ಕಂಡು ಅಲ್ಲಿನ ಜನ ತೀವ್ರ ಆಶ್ಚರ್ಯಕ್ಕೊಳಗಾದರು. ಛಗನ್ ಸೋಮ ವಘೇಲಾ ಅವರಿಗೆ ಸೇರಿದ ದೋಣಿಯಲ್ಲಿ ಕಾಳಿದಾಸ್ ವಘೇಲಾ, ಮಂಗಲ್ ಕಾಳಿದಾಸ್ ಫಕೀರಾ ಸೇರಿದಂತೆ ಸುಮಾರು 12 ಮಂದಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಬಲೆ ಹಾಕಿದ್ದರು. ಈ ವೇಳೆ ಬಲೆಗೆ 100 ಕೆಜಿ ತೂಕದ ವಸ್ತುವೊಂದು ಸಿಕ್ಕಿಹಾಕಿಕೊಂಡಿತ್ತು. ಮೇಲಕ್ಕೆತ್ತಿ ನೋಡಿದಾಗ ಶಿವಲಿಂಗ ಸಿಲುಕಿದೆ. ಮೀನುಗಾರರು ಬಲೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಹೆಚ್ಚಿನ ಭಾರ ಇರುವುದು ಕಂಡುಬಂದಿದ್ದು, 100 ಕೆಜಿ ತೂಕದ ಮೀನ ಸಿಕ್ಕಿರಬಹುದೇ ಎಂದು ಅನುಮಾನಗೊಂಡರು.ಕಠಿಣ ಪರಿಶ್ರಮದ ಬಳಿಕ ಬಲೆಯನ್ನು ಸಮುದ್ರ ದಡಕ್ಕೆ ತಂದು ನೋಡಿದಾಗ ಬಲೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.…

Read More