Author: admin

ಸರಗೂರು:  ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ಮೆಲುಕು ಹಾಕಲು ಹಿಂದೂ ಹೈಸ್ಕೂಲ್‌ನ 1988–89ರ ಬ್ಯಾಚ್‌ ವಿದ್ಯಾರ್ಥಿಗಳು 36 ವರ್ಷಗಳ ನಂತರ ಜೀವನಕ್ಕೆ ಆದರ್ಶ ಮಾರ್ಗ ತೋರಿಸಿದ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸುತ್ತಿರುವುದು ಶ್ಲಾಘನೀಯವಾಗಿದ್ದು ಎಂದು   ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪಡುವಲ ವಿರಕ್ತ ಮಠದ ಮಹದೇವಸ್ವಾಮಿಗಳು ಹೇಳಿದರು. 1988–89 ಸಾಲಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನ ಕಾರ್ಯಕ್ರಮ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯ ವಹಿಸಿ  ಉದ್ಘಾಟಿಸಿ ಮಾತನಾಡಿದರು. 1988 ರಲ್ಲಿ 8ನೇ ತರಗತಿ ಸೆರಿ ಎಸ್ ಎಸ್ ಎಲ್ಸಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ತಾವು ಓದಿದ ಸಾಲಿನಲ್ಲಿ ಸೇರಿ ಅಕ್ಷರ ಕಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಿದರು. ಹಳೆ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಯನ್ನು ಹಂಚಿಕೊಂಡರು. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ…

Read More

ತುಮಕೂರು ಜಿಲ್ಲೆಯ ಹೆಮ್ಮೆಯ ಗುರುತಾಗಿರುವ ಸಿದ್ಧಗಂಗಾ ಮಠದ ಮಹಾಸ್ವಾಮೀಜಿ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಕೇವಲ ಒಂದು ಪೀಠದಾಧಿಪತಿಯಾಗಿರಲಿಲ್ಲ; ಅವರು ಸಮಾಜದ ಅಂತಃಕರಣವಾಗಿದ್ದರು. “ನಡೆದಾಡುವ ದೇವರು” ಎಂಬ ನಾಮಧೇಯ ಅವರಿಗೆ ಜನರು ನೀಡಿದ್ದು ಭಕ್ತಿಯಿಂದ ಮಾತ್ರವಲ್ಲ, ಅವರು ಬದುಕಿದ ರೀತಿಯಿಂದ. ಶಿಕ್ಷಣವೇ ಸಾಮಾಜಿಕ ನ್ಯಾಯದ ಬಲವಾದ ಅಸ್ತ್ರ ಎಂಬ ನಂಬಿಕೆಯನ್ನು ಜೀವನಪೂರ್ತಿ ಅನುಸರಿಸಿದವರು ಶಿವಕುಮಾರ ಮಹಾಸ್ವಾಮೀಜಿಗಳು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಎಂಬ ಎಲ್ಲ ಬೇಧಗಳನ್ನು ಮೀರಿ ಅನ್ನದಿಂದ ಅಕ್ಷರವರೆಗೆ ಎಂಬ ಮಹಾಮಂತ್ರವನ್ನು ಕಾರ್ಯರೂಪಕ್ಕೆ ತಂದರು. ಲಕ್ಷಾಂತರ ಬಡ, ಅನಾಥ ಮತ್ತು ಗ್ರಾಮೀಣ ಮಕ್ಕಳಿಗೆ ಸಿದ್ಧಗಂಗಾ ಮಠ ಆಶ್ರಯವಾಯಿತು; ಅಕ್ಷರಾಭ್ಯಾಸದಿಂದ ಜೀವನಾಭ್ಯಾಸದವರೆಗೆ ಅವರ ಕೈ ಹಿಡಿದಿತು. ಐಶ್ವರ್ಯ, ಅಧಿಕಾರ, ಪ್ರಚಾರ—ಇವೆಲ್ಲಕ್ಕೂ ದೂರವಿದ್ದ ಸರಳ ಜೀವನವೇ ಅವರ ಶಕ್ತಿ. ರಾಜಕೀಯ ಒತ್ತಡಗಳ ನಡುವೆಯೂ ಅವರು ಸಮಾಜದ ಹಿತವನ್ನೇ ಮೊದಲಿಗರನ್ನಾಗಿ ನೋಡಿದರು. ಅಧಿಕಾರಸ್ಥರಿಗೆ ಸತ್ಯ ಹೇಳುವ ಧೈರ್ಯ, ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಸಂವೇದನೆ—ಇವುಗಳ ಸಮನ್ವಯವೇ ಅವರ ವ್ಯಕ್ತಿತ್ವ. ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರವಾಗುತ್ತಿರುವುದು, ಸೇವೆ…

Read More

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿ ಸಮಾರೋಪ ಕಂಡಿದೆ. ಹಲವು ವಾರಗಳ ತೀವ್ರ ಪೈಪೋಟಿ, ಸವಾಲುಗಳು ಮತ್ತು ಮನರಂಜನೆಯ ನಂತರ, ‘ಗಿಲ್ಲಿ ನಟ’ ಈ ಬಾರಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿಜೇತರು: ಅಂತಿಮ ಹಣಾಹಣಿಯಲ್ಲಿ ಗಿಲ್ಲಿ ನಟ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇವರಿಗೆ ಬಿಗ್ ಬಾಸ್ ಟ್ರೋಫಿಯೊಂದಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ. ರನ್ನರ್ ಅಪ್: ಪ್ರಬಲ ಸ್ಪರ್ಧಿಯಾಗಿದ್ದ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಟಾಪ್ 6 ಸ್ಪರ್ಧಿಗಳು: ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯ ಶೈವ, ಮ್ಯೂಟೆಂಟ್ ರಘು ಮತ್ತು ಧನುಷ್ ಗೌಡ ಅವರು ಅಂತಿಮ ಹಂತ ತಲುಪಿದ್ದರು. ಅಂತಿಮ ಹಂತದ ಎಲಿಮಿನೇಷನ್ ವಿವರ: ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಒಂದೊಂದಾಗಿ ಸ್ಪರ್ಧಿಗಳನ್ನು ಹೊರಹಾಕುತ್ತಾ ಬಂದರು. ಧನುಷ್ ಗೌಡ 6ನೇ ಸ್ಥಾನ ಪಡೆದರೆ, ಮ್ಯೂಟೆಂಟ್ ರಘು 5ನೇ ಸ್ಥಾನಕ್ಕೆ…

Read More

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಜರುಗಲಿರುವ 33ನೇ ವರ್ಷದ ಹೊನಲು ಬೆಳಕಿನ ‘ಕೋಟಿ ಚೆನ್ನಯ’ ಜೋಡುಕೆರೆ ಕಂಬಳದಲ್ಲಿ, ಕೃಷಿ ಮತ್ತು ಸಾಹಿತ್ಯ ಕ್ಷೇತ್ರದ ಅಪ್ರತಿಮ ಸಾಧಕ ಕುಮಾರ್ ಪೆರ್ನಾಜೆ ಅವರನ್ನು ಸನ್ಮಾನಿಸಲು ಆಯ್ಕೆ ಮಾಡಲಾಗಿದೆ. ಕಂಬಳ ಸಮಿತಿಯ ಪರವಾಗಿ ಸಂಚಾಲಕರಾದ ವಸಂತ ಕುಮಾರ್ ರೈ ದುಗ್ಗಲ ಅವರು ಕುಮಾರ್ ಪೆರ್ನಾಜೆ ಅವರಿಗೆ ಅಧಿಕೃತ ಆಮಂತ್ರಣ ಪತ್ರ ನೀಡಿ,  ಜ.24ರಂದು ನಡೆಯುವ ಅದ್ಧೂರಿ ಸಮಾರಂಭಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಿದರು. ಈ ಕಾರ್ಯಕ್ರಮವು ನಾಡಿನ ಗಣ್ಯ ಅತಿಥಿಗಳು ಹಾಗೂ ಖ್ಯಾತ ಚಲನಚಿತ್ರ ನಟ-ನಟಿಯರ ಸಮ್ಮುಖದಲ್ಲಿ ಜರುಗಲಿದೆ. ಅಪೂರ್ವ ಸಾಧನೆಗಳ ಸರದಾರ: ಕುಮಾರ್ ಪೆರ್ನಾಜೆ ಅವರು ಕೇವಲ ಕೃಷಿಕರಷ್ಟೇ ಅಲ್ಲದೆ, ಜೇನು ಕೃಷಿ, ಪರಿಸರ ಸಂರಕ್ಷಣೆ ಮತ್ತು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಅವರ ಸಾಧನೆಗಳ ಮೈಲಿಗಲ್ಲುಗಳು ಹೀಗಿವೆ: ಜೇನು ಕೃಷಿ ಸಂಶೋಧನೆ: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಪರಿಸರ ಸ್ನೇಹಿ ‘ಸಿಮೆಂಟ್ ಶೀಟಿನ ಜೇನು ಪೆಟ್ಟಿಗೆ’ಯನ್ನು…

Read More

ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ 2025–26 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆ (ಲೋಯರ್ ಗ್ರೇಡ್) ಫಲಿತಾಂಶ ಹೊರಡಿಸಲಾಗಿದ್ದು, ಗುಬ್ಬಿ ತಾಲೂಕಿನ  ಮಾವಿನಹಳ್ಳಿ, ಡಾ.ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಭಾರೀ ಸಾಧನೆ ಮಾಡಿದ್ದಾರೆ ಒಟ್ಟು ಫಲಿತಾಂಶ ಪರೀಕ್ಷೆಗೆ ಹಾಜರಾದವರು: 12 ಡಿಸ್ಟಿಂಕ್ಷನ್ ಪಡೆದವರು: 9 ಪ್ರಥಮ ದರ್ಜೆ ಪಡೆದವರು: 3 ಪೂರ್ಣ ಫಲಿತಾಂಶ: 100% ಸಾಧಕ ವಿದ್ಯಾರ್ಥಿನಿಯರು:  ವಿಶಿಷ್ಟ ಸಾಧನೆ: ಈ ವರ್ಷದ ಡ್ರಾಯಿಂಗ್ ಗ್ರೇಡ್ ಪರೀಕ್ಷೆನಲ್ಲಿ ಶಾಲೆಯ ಸಂದರ್ಶನ ಮತ್ತು ಕಲಾತ್ಮಕ ವಿಷಯಗಳಲ್ಲಿ ವಿದ್ಯಾರ್ಥಿನಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೆಚ್ಚಿನ ಸಂಖ್ಯೆ ಡಿಸ್ಟಿಂಕ್ಷನ್ ಪಡೆದು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.  ಪ್ರಾಂಶುಪಾಲರು ಎಲ್ಲ ವಿದ್ಯಾರ್ಥಿನಿಯರ ಶ್ರಮ ಮತ್ತು ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ವರ್ಷವೂ ಉತ್ತಮ ಸಾಧನೆಗಾಗಿ ಹಾರೈಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ತುಮಕೂರು: KPS–ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸಿರಾ ತಾಲೂಕಿನ ಜೋಡಿದೇವರಹಳ್ಳಿ ಮತ್ತು ನಾಗೇನಹಳ್ಳಿಯ ಸರ್ಕಾರಿ ಶಾಲೆ ಉಳಿಸಲು ಊರಿನ ವಿದ್ಯಾರ್ಥಿಗಳು ,ಪೋಷಕರು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ಗ್ರಾಮದಲ್ಲಿ ಇರುವಂತ ಸರ್ಕಾರಿ ಶಾಲೆಗಳನ್ನ ಮುಚ್ಚಿ ವಿಲೀನ ಮಾಡುವಂತ ಕ್ರಮ ಸರಿಯಲ್ಲ. ಹಳ್ಳಿಗಾಡಿನಲ್ಲಿ ಇರುವಂತ ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಿ ಮನೆಗೆ ಬರುತ್ತಾರೆ. ಈ ವ್ಯವಸ್ಥೆಯನ್ನು ಬದಲಾಯಿಸಿ, ಕರ್ನಾಟಕ ಪಬ್ಲಿಕ್ ಶಾಲೆ ಮ್ಯಾಗ್ನೆಟ್ ಹೆಸರಿನಲ್ಲಿ  5 ಕಿ.ಮೀ. ವ್ಯಾಪ್ತಿಯ ಒಳಗಿನ ಶಾಲೆಗಳನ್ನು ಮುಚ್ಚುವುದು ತುಂಬಾ ಖಂಡನೀಯ. ಇದರ ಬದಲು ಕೆಪಿಎಸ್ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊಟ್ಟು ಒಳ್ಳೆಯ ಶಿಕ್ಷಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಅದನ್ನು ನಮ್ಮ ಶಾಲೆಯಲ್ಲಿ ಕೊಟ್ಟು ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ಹೇಳಿದರು. ಪ್ರತಿಭಟನೆಯನ್ನ ಉದ್ದೇಶಿಸಿ  ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ,  ಸರ್ಕಾರ KPS– ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆ ಎಂದು ಹೇಳಿ 40,000 ಕ್ಕಿಂತ ಹೆಚ್ಚು ಸರ್ಕಾರಿ…

Read More

ತುಮಕೂರು: ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 5–16 ವಯೋಮಾನದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಮತ್ತು 5–12 ವಯೋಮಾನದ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳ ಪೋಷಕರು ಜನವರಿ 20ರ ಸಂಜೆ 4 ಗಂಟೆಯೊಳಗೆ ಜಿಲ್ಲಾ ಬಾಲಭವನ ಕಚೇರಿ, ಮಹಾತ್ಮ ಗಾಂಧಿ ರಸ್ತೆ, ತುಮಕೂರು ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. 9901890079ನ್ನು ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುರುವೇಕೆರೆ:  6.5 ಟಿಎಂಸಿ ನೀರು ಕುಣಿಗಲ್ ಕಡೆ ಹರಿಯುತ್ತಿದೆ, ಈ ನೀರು ಎಲ್ಲಿಗೆ ಹೋಗುತ್ತೆ ಮೊದಲು ರಾಜ್ಯದ ಜನತೆ ಮುಂದೆ ಹೇಳಿ, ಕೇವಲ ಕೃಷ್ಣಪ್ಪ ಸುರೇಶ್ ಗೌಡ ಮಾತ್ರ ಹೋರಾಟ ಮಾಡುತ್ತಿಲ್ಲ ಡಿಕೆಶಿ ಅವರೇ,  ಇದು ಈ ಜಿಲ್ಲೆಯ 24 ಲಕ್ಷ ಜನತೆಯ ಹೋರಾಟ, ನಿಮಗೆ ಇದು ತಿಳಿದಿರಲಿ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಕುಣಿಗಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕುರಿತು ಡಿ.ಕೆ.ಶಿವಕುಮಾರ್ ರವರು ಪ್ರಸ್ತಾಪಿಸಿ, ಅಂದಾಜು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಕುಣಿಗಲ್ ಕೆರೆಗೆ ಹೇಮಾವತಿ ಕೆನಾಲ್ ಮೂಲಕ ನೀರು ತರಲು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಸುರೇಶ್ ಗೌಡ ಇದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಉತ್ತರಿಸಿದರು. ಹೌದು ಸ್ವಾಮಿ ಡಿಕೆಶಿ ಅವರೇ ನಾವು ವಿರೋಧ ಮಾಡುತ್ತೇವೆ ಇದು ನೂರಕ್ಕೆ ನೂರು ಸತ್ಯ ಇದರಲ್ಲಿ ಯಾವುದೇ ರಾಜಕೀಯ ಅಥವಾ ರಾಜಿ…

Read More

ಪಾವಗಡ : ಸ್ಥಳೀಯ ಇತಿಹಾಸ ಅಧ್ಯಯನದ ಪೂರ್ಣವಾಗದಿದ್ದರೆ ರಾಷ್ಟ್ರೀಯ ಇತಿಹಾಸ ಕಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು. ತಾಲ್ಲೂಕಿನ ಅರಸೀಕೆರೆ ಗ್ರಾಮದ ಶತಮಾನ ಸೇವೆ ಪೂರೈಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಹೊ.ಮ.ನಾಗರಾಜು ರವರ ನಿಡುಗಲ್ಲು ಸೀಮೆಯ ಅರಸೀಕೆರೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,  ಸ್ಥಳೀಯ ಐತಿಹಾಸಿಕ ಅಂಶಗಳು ರಾಷ್ಟ್ರೀಯ ಇತಿಹಾಸಕ್ಕೆ ಪೂರಕವಾಗಿರುತ್ತವೆ. ಸೂಕ್ಷ್ಮ ತರಹದ ಅಧ್ಯಯನಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿವೆ. ಸೂಕ್ಷ್ಮ ಅಧ್ಯಯನಗಳಲ್ಲಿ ಸಂಶೋಧಕ ಆಕರಗಳ ಸಮಸ್ಯೆ, ಕತೆ ಕವನ ಇತ್ಯಾದಿ ಮೌಖಿಕ ಸಾಹಿತ್ಯದಿಂದ ಐತಿಹಾಸಿಕ ಅಂಶಗಳನ್ನು ಹೆಕ್ಕಿ ತೆಗೆಯುವ ಸಮಸ್ಯೆಗಳಿಗೆ ಗುರಿಯಾಗುವುದು ಸಹಜ. ಆದಾಗ್ಯೂ ಅವುಗಳನ್ನು ಮೀರಿ ನಿಖರವಾದ ವಿಷಯಗಳನ್ನು ಕಟ್ಟಿಕೊಡುವವರೆ ಸಂಶೋಧಕ ಎಂದರು. ಹೊ.ಮ.ನಾಗರಾಜು ರವರು ಇತಿಹಾಸ ಅಕಾಡೆಮಿಯ ಸದಸ್ಯರಾದ ನಂತರ ದಾಖಲಾಗದ ಐತಿಹಾಸಿಕ ವಿಷಯಗಳನ್ನು ಪ್ರಬಂಧಗಳ ರೂಪದಲ್ಲಿ ಮಂಡನೆ ಮಾಡುತ್ತಿದ್ದು, ನಿಖರವಾದ ಅಂಶಗಳು ಕಂಡುಬರುತ್ತಿವೆ. ಇವರು  ನಿಡುಗಲ್ಲು ಸೀಮೆಯ ಅರಸೀಕೆರೆ ಎನ್ನುವ ಪ್ರಸ್ತುತ ಕೃತಿಯಲ್ಲಿ ಸ್ಥಳೀಯ ಇತಿಹಾಸವನ್ನು ಕಟ್ಟಿಕೊಡುವಲ್ಲಿ…

Read More

ಪಾವಗಡ: ಪಾವಗಡದಿಂದ ಮಧುಗಿರಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವೇಳೆ ಎದುರಿಗೆ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸಾವನ್ನಪ್ಪಿ,  ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪಾವಗಡ ತಾಲೂಕಿನ ರಾಜವಂತಿ ಸಮೀಪದ ರಿಲ್ಯಾಕ್ಸ್ ಬಾರ್ ಸಮೀಪ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಪಾವಗಡ ಪಟ್ಟಣದ ಕನುಮನಕೆರೆಯ ನಾಗಮ್ಮ ಈರದಾಸಪ್ಪ ಎಂಬವರ ಪುತ್ರ 25 ವರ್ಷದ ಅಂಬರೀಶ್ ಎಂದು ಗುರುತಿಸಲಾಗಿದ್ದು ,  ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ. ಇನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವರದಿ:  ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More