Author: admin

ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಆಡಳಿತಾರೂಢ ಬಿಜೆಪಿ ಜುಲೈ ೧೭ ಮತ್ತು ೧೮ ರಂದು ಮತದಾರರ ಶಾಸಕರ ಮೇಲೆ ಲಂಚ ಮತ್ತು ಇತರ ಪ್ರಚೋದನೆ ನೀಡುವ ಮೂಲಕ ಪ್ರಭಾವ ಬೀರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಮತದಾರ ಶಾಸಕರಿಗೆ ಪಂಚತಾರಾ ಹೋಟೆಲ್‌ನಲ್ಲಿ ಐಷಾರಾಮಿ ವಸತಿ ಕಲ್ಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮುರ್ಮು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಸಚಿವರು ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಕುರಿತು…

Read More

ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪ್ರಶ್ನಿಸಿದ್ದಕ್ಕೆ ಹರಿಯಾಣದಲ್ಲಿ ಡಿಎಸ್‌ಪಿ ಮೇಲೆ ವಾಹನ ಹರಿಸಿ ಕೊಲೆ ಮಾಡಿದ ಘಟನೆ ನಡುವೆಯೇ ಅಂಥಹದ್ದೇ ಇನ್ನೊಂದು ಕೃತ್ಯ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ.ಜಾರ್ಖಂಡ್‌ ನಲ್ಲಿ ನಿನ್ನೆ ತಡರಾತ್ರಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ನನ್ನು ಕೊಲೆ ಮಾಡಲಾಗಿದೆ. ವಾಹನ ತಪಾಸಣೆಯ ಸಂದರ್ಭದಲ್ಲಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಸಾವನ್ನಪ್ಪಿದ್ದಾರೆ. ಇವರನ್ನು ತೂಪುದಾನ ಪ್ರದೇಶದ ಪ್ರಭಾರಿಯಾಗಿ ನೇಮಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ. ಹರಿಯಾಣದಲ್ಲಿ ನಿನ್ನೆ ಅಕ್ರಮವಾಗಿ ನಡೆಸಲಾಗುತ್ತಿದ್ದ ಗಣಿ ಪ್ರದೇಶಕ್ಕೆ ತೆರಳಿ ತಪಾಸಣೆ ನಡೆಸುತ್ತಿದ್ದಾಗ ಪೊಲೀಸ್ ವಾಹನದ ಮೇಲೆ ಟ್ರಕ್ ಹತ್ತಿಸಿ ಡಿಎಸ್‌ಪಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಗೂಗಲ್ ವೆಬ್‌ಸೈಟ್ ಅನ್ನೇ ಬಂಡವಾಳ ಮಾಡಿಕೊಂಡು ಹಣ ವಂಚಿಸುತ್ತಿದ್ದ ನಾಲ್ವರು ಗ್ಯಾಂಗ್‌ ನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಪರನ್ ಸಿಂಗ್ ಚೌಹಾಣ್ (೨೫), ನರೇಂದ್ರ (೩೨), ಧರ್ಮೇಂದರ್  ಹಾಗೂ ಹರಿಯಾಣ ಮೂಲದ ಧರ್ಮವೀರ್ ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ. ಆರೋಪಿಗಳು ವಾಹನ ಟ್ರಾನ್ಸ್ ಪೋರ್ಟ್ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದರು. ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡುತ್ತಿದ್ದರು. ಜಾಹಿರಾತಿನಲ್ಲಿ ತಮ್ಮ ಫೋನ್ ನಂಬರ್ ಹಾಕಿಕೊಳ್ಳುತ್ತಿದ್ದರು. ಟ್ರಾನ್ಸ್ ಪೋರ್ಟ್ ಮಾಡುವ ಮೊದಲು ಹಣ ಪಡೆಯುತ್ತಿದ್ದರು. ವಾಹನ ತೆಗೆದುಕೊಂಡು ತಮ್ಮ ಅಸಲಿ ಆಟ ಶುರು ಮಾಡುತ್ತಿದ್ದರು. ಮೊದಲೇ ಹಣ ಪಡೆಯುತ್ತಿದ್ದ ಆರೋಪಿಗಳು, ತಿಂಗಳು ಕಳೆದರೂ ವಾಹನ ಡೆಲಿವರಿ ಮಾಡದೇ ಕಳ್ಳಾಟವಾಡುತ್ತಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ವಂಚನೆಗೊಳಗಾಗಿದ್ದ ವ್ಯಕ್ತಿ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರುದಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಬೈಕ್…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಿರಿಯೂರು ನಗರದಿಂದ ಹೊರವಲಯದಲ್ಲಿರುವ ಶಾಲಾ  ಕಾಲೇಜಿನ ವಿದ್ಯಾರ್ಥಿಗಳಿಗೆ  ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಹಿರಿಯೂರು ನಗರದ ಸಾರಿಗೆ ಸಂಸ್ಥೆಯ ಮುಂಭಾಗದಲ್ಲಿ ವಿದ್ಯಾರ್ಥಿಗಳು  ಬಸ್‌ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ-ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪಟ್ಟಣ ಪ್ರದೇಶಗಳ ವಿದ್ಯಾಭ್ಯಾಸಕ್ಕೆ ತೆರಳಲು ಸಕಾಲಿಕ ಬಸ್‌ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಸಂಸ್ಥೆಯ ಆಡಳಿತ ಅಧಿಕಾರಿಗಳ ಮೇಲೆ  ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ ಹಾಗೂ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಿದ್ದು, ಈ ಕಾಲೇಜು ಹಿರಿಯೂರು ನಗರದಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿದ್ದು, ಈ ವಿದ್ಯಾಸಂಸ್ಥೆಗೆ ಸುಮಾರು ಐದುನೂರಕ್ಕಿಂತಲೂ ಹೆಚ್ವು ವಿದ್ಯಾರ್ಥಿಗಳು ಬರುತ್ತಿದ್ದು , ಅದರಲ್ಲೂ ಸಹ ಅತಿ ಹೆಚ್ಚಾಗಿ ಹಿರಿಯೂರು ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಹಾಗೂ ಚಿತ್ರದುರ್ಗದಿಂದಲೂ ಸಹ ವಿದ್ಯಾರ್ಥಿಗಳು ಅತಿ ಹೆಚ್ವಿನ ಸಂಖ್ಯೆಯಲ್ಲಿಕಾಲೇಜಿಗೆ ಬರುವ…

Read More

ತುರುವೇಕೆರೆ: ತಾಲೂಕು ಕಸಬಾ ಹೋಬಳಿ ಬುಗುಡನಹಳ್ಳಿ ಗ್ರಾಮದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ನಾಮಕರಣ ಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಎಪಿಎಂಸಿ ಅಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ನರಸಿಂಹರಾಜು ಅವರು ವಹಿಸಿದ್ದರು. ಅಂಬೇಡ್ಕರ್ ವೃತ್ತದ ನಾಮಫಲಕ ಉದ್ಘಾಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತುರುವೇಕೆರೆ ತಾಲೂಕು ಸಂಚಾಲಕರಾದ ಡಾ.ಟಿ.ಆರ್.ಚಂದ್ರಯ್ಯನವರು ನೆರವೇರಿಸಿದರು. ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಕುಮಾರ್  ಕ್ರಾಂತಿ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕಿರಣ್ ಕುಮಾರ್ ಸ್ವಾಗತವನ್ನ ಕೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚಂದ್ರಯ್ಯ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಶಕ್ತಿ. ಆ ವ್ಯಕ್ತಿಯು ಅಸ್ಪೃಶ್ಯತೆಯ ನೋವಿನಲ್ಲಿ ನೊಂದು ನಾವು ಜಾತಿಯಿಂದ ವಿಮುಕ್ತಿ ಹೊಂದಲು ಹೋರಾಟ ನಡೆಸಿದರು. ಶಾಲೆಯ ಮೆಟ್ಟಿಲನ್ನೇ  ನೋಡದವರು ಇಂದು ಬಾಬಾ ಸಾಹೇಬರ ಹೋರಾಟದಿಂದ ವಿದ್ಯಾವಂತರಾಗುವ ಕಾಲ ಬಂತು ಎಂದರು. ಅಂಬೇಡ್ಕರ್…

Read More

ಪಾವಗಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 390ನೇ  ನಮ್ಮೂರು ನಮ್ಮ ಕೆರೆ ಹಸ್ತಾಂತರ ಮತ್ತು ಕೆರೆ ಅಂಗಳದಲ್ಲಿ ಅರಣ್ಯ ಸಸಿನಾಟಿ ಕಾರ್ಯಕ್ರಮ ನ್ಯಾಯದಗುಂಟೆ ಗ್ರಾಮ ಪಂಚಾಯತಿಯ ಕೊಡಿಗೆಹಳ್ಳಿ ಗ್ರಾಮದ ದೊಡ್ಡಕಟ್ಟೆಕೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಾಸಕ  ವೆಂಕಟರಮಣಪ್ಪರವರು ಕೆರೆಯ ಹಸ್ತಾಂತರ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೀನಪ್ಪ ಎಂ. ಕೆರೆಯ ನಾಮಫಲಕ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ  ಶೀನಪ್ಪ ಎಂ.,  2021- 22 ನೇ ಸಾಲಿನಲ್ಲಿ ಕೋಡಿಗೆಹಳ್ಳಿ ದೊಡ್ಡಕಟ್ಟೆ ಕೆರೆಯಲ್ಲಿ 12 ಲಕ್ಷ ಖರ್ಚು ಮಾಡಿ ಹೂಳೆತ್ತಲಾಗಿದೆ.  ತಾಲೂಕಿನಲ್ಲಿ 5 ಕೆರೆಗಳಿಗೆ 51.98 ಲಕ್ಷ ಮೊತ್ತವನ್ನು ವಿನಿಯೋಗ ಮಾಡಿ ಹೊಳು ಎತ್ತಲಾಗಿದೆ  ಎಂದು ತಿಳಿಸಿದರು. ದೊಡ್ಡ ಕಟ್ಟೆಕೆರೆಯಲ್ಲಿ 33 ದಿನಗಳು ಕಾಮಗಾರಿ ಮಾಡಿದ್ದು, 22,698 ಲೋಡು ಫಲವತ್ತಾದ ಮಣ್ಣನ್ನು ಸುತ್ತಮುತ್ತಲಿನ ಜಮೀನುಗಳಿಗೆ ಹಾಕುವ ಮೂಲಕ ಜಮೀನಿನ ಫಲವತ್ತತೆಯನ್ನು ಹೆಚ್ಚಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತುಮಕೂರು  ಜಿಲ್ಲಾ ನಿರ್ದೇಶಕ ದಿನೇಶ್ ಡಿ.,  ವಲಯದ ಮೇಲ್ವಿಚಾರಕ ಮುಹ್ಮದ್,   ಕೃಷಿ ಮೇಲ್ಕ್ಚಾರಕ ಬೋರಣ್ಣ, …

Read More

ಬೈಂದೂರು:  ಅತೀ ವೇಗದಿಂದ ಬಂದ ಆ್ಯಂಬುಲೆನ್ಸ್ ವೊಂದು ಟೋಲ್ ಗೇಟ್ ನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟರು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಜೆ ಶಿರೂರಿನ ಟೋಲ್ ಗೇಟ್ ನಲ್ಲಿ ನಡೆದಿದೆ. ವಿಡಿಯೋದಲ್ಲಿ ಕಂಡು ಬಂದಂತೆ, ಆಂಬುಲೆನ್ಸ್ ಶಬ್ಧ ಕೇಳಿ ಟೋಲ್ ಗೇಟ್ ಸಿಬ್ಬಂದಿ ಆತುರಾತುರವಾಗಿ ರಸ್ತೆಯಲ್ಲಿರುವ ಬ್ಯಾರಿಕೇಡ್ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಆಂಬುಲೆನ್ಸ್ ಮುನ್ನುಗ್ಗಿ ಬಂದಿದ್ದು, ಸಿಬ್ಬಂದಿ ರಸ್ತೆಯಲ್ಲಿರುವ ಕಾರಣ ಏಕಾಏಕಿ ಬ್ರೇಕ್ ಹಾಕಿದ್ದು, ಈ ವೇಳೆ ಆಂಬುಲೆನ್ಸ್ ರಸ್ತೆಗೆ ಅಡ್ಡವಾಗಿ ಜಾರಿ,  ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ಆಂಬುಲೆನ್ಸ್ ನ ಹಿಂದಿನ ಬಾಗಿಲು ತೆರೆದುಕೊಂಡಿದ್ದು, ಆಂಬುಲೆನ್ಸ್ ನಲ್ಲಿದ್ದವರು ಹೊರಗೆ ಎತ್ತಿ ಎಸೆಯಲ್ಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ತುಮಕೂರು: ಹಾಲು ಹಾಗೂ ಮೊಸರಿನ ಮೇಲೆ ಹಾಕಲಾಗಿರುವ ಜಿಎಸ್ ಟಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಹೇಳಿಕೆ ನೀಡಿದ್ದಾರೆ. ದಿನ ಬಳಕೆ ವಸ್ತುಗಳ ಮೇಲೆ ಜಿಎಸ್ ಟಿ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನು ಈ ಬಗ್ಗೆ ಕಾಮೆಂಟ್ ಮಾಡಿದ್ರೆ ಒಂದು ಪಕ್ಷದ ಎಂಎಲ್ ಎ ಎಂಬ ಭಾವನೆ ಬರುತ್ತದೆ. ಮುಂದಿನ ಚುನಾವಣೆಯಲ್ಲಿ 100 ಪರ್ಸೆಂಟ್ ಮನೆಗೆ ಕಳುಸುತ್ತಾರೆ ಎಂದರು. ಹಾಲು, ಮೊಸರಿನ ಮೇಲೆ ಜಿಎಸ್ಟಿ ಹಾಕುವುದು ಅವಮಾನ ಅಲ್ವಾ? ಮಕ್ಕಳು ಕುಡಿಯುವ ಹಾಲಿಗೂ ಜಿಎಸ್ ಟಿ ಹಾಕ್ತಾರೆ ಅಂದ್ರೆ ಏನ್ ಹೇಳೋದು? ರೈತರಿಗೆ ಪ್ರೋತ್ಸಾಹ ಧನ ಕೊಡಿ, ಆಮೇಲೆ ಜಿಎಸ್ ಟಿ ಹಾಕಿ ಎಂದು ಅವರು ಒತ್ತಾಯಿಸಿದರು. ಹಾಲು ಮೊಸರಿನ ಮೇಲೆ ಜಿಎಸ್ಟಿ ಹಾಕುವುದು ಸೂಕ್ತ ಅಲ್ಲ. ಇದು ತಪ್ಪು ನಿರ್ಧಾರ, ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು. ಜಿಎಸ್ ಟಿ ಬಗ್ಗೆ ಕುಮಾರಸ್ವಾಮಿಯವರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಶೀಘ್ರದಲ್ಲಿ ಜಿಲ್ಲಾ…

Read More

ಹಿರಿಯೂರು: ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಸಬಾ ಹೋಬಳಿಯ ಕೂನಿಕೆರೆ ಎಂಬಲ್ಲಿ ನಡೆದಿದ್ದು, ಇದೀಗ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ವರ್ಷಗಳ ಹಿಂದೆ ತಾಲ್ಲೂಕಿನ ಕಸಬಾ ಹೋಬಳಿಯ ಕೂನಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೂನಿಕೆರೆ ಗ್ರಾಮದ ಕರಿಯಪ್ಪ ಮತ್ತು ಲಕ್ಷ್ಮಮ್ಮ ಅವರ ಮಗನಾದ ಅಂಜಿನಪ್ಪ ಜೊತೆಗೆ ಸಂತ್ರಸ್ತೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಂಟನಗವಿ ಹಟ್ಟಿಯ ಮಹೇಶಮ್ಮ ಹಾಗೂ ರಾಮಪ್ಪ ಅವರ ಮಗಳಾದ ಅಂಜಲಿ ವಿವಾಹವಾಗಿದ್ದು, 6 ತಿಂಗಳುಗಳ ಕಾಲ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದಾರೆ. ಬಳಿಕ ವರದಕ್ಷಿಣೆ ತರುವಂತೆ ಒತ್ತಾಯಿಸಿ ಅಂಜಲಿಯವರಿಗೆ ನಿರಂತರವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಮದುವೆ ವೇಳೆ 20 ಸಾವಿರ ರೂಪಾಯಿ ವರದಕ್ಷಿಣೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ವರದಕ್ಷಿಣೆ ನಾವು ಕಡಿಮೆ ಪಡೆದುಕೊಂಡಿದ್ದೇವೆ. ಹೆಚ್ಚು ವರದಕ್ಷಿಣೆ ತರುವಂತೆ ಗಂಡನ ಮನೆಯವರು ಒತ್ತಾಯಿಸಿದ್ದು, ಸಂತ್ರಸ್ತೆ ಅಂಜಲಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾನುವಾರ ಬೆಳಿಗ್ಗೆ…

Read More

ಸರಗೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಬಾಬು ಜಗಜೀವನರಾಂ ವಿಚಾರ ವೇದಿಕೆ ನೂತನ ಅಧ್ಯಕ್ಷರಾಗಿ ಕೊತ್ತೇಗಾಲ ತಿಮ್ಮಯ್ಯರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೆಚ್.ಡಿ.ಕೋಟೆ ತಾಲ್ಲೂಕಿನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಮುಖಂಡರ ಸಮ್ಮುಖದಲ್ಲಿ ಬಾಬು ಜಗಜೀವನರಾಂ ವಿಚಾರ ವೇದಿಕೆ ನೂತನ ಅಧ್ಯಕ್ಷರಾಗಿ ಕೊತ್ತೇಗಾಲ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಕೊತ್ತೆಗಾಲ ತಿಮ್ಮಯ್ಯ ಮಾತನಾಡಿ, ಹೆಚ್. ಡಿ.ಕೋಟೆ ಮತ್ತು ಸರಗೂರು ಎರಡು ತಾಲ್ಲೂಕಿನ ನಮ್ಮ ಜನಾಂಗದ ಸಮುದಾಯ ಭವನಗಳನ್ನು ಹಾಗೂ ಜನಾಂಗದ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತೇನೆ ಎಂದರು. ಸಭೆಯಲ್ಲಿ ಮುಖಂಡರಾದ ಶಿವಯ್ಯ, ಪ್ರಕಾಶ್ ಹೀರಹಳ್ಳಿ, ಸೋಮುಪಾಟಿಲ್, ಗ್ರಾ.ಪಂ . ಸದಸ್ಯರಾದ ಮಹಾದೇವ, ನಾಗರಾಜು, ಚಲುವರಾಜು, ಬೆಟ್ಟಸ್ವಾಮಿ, ಕಾರ್ಯದರ್ಶಿಮಹೇಶ್, ಮಂಜುನಾಥ, ಜಯಕುಮಾರ್, ದೇವರಾಜು, ಸ್ವಾಮಿ, ಗೊವಿಂದರಾಜು, ಕರಿಯಯ್ಯ, ಮಹದೆವಯ್ಯ, ಕೆ.ಟಿ.ಸ್ವಾಮಿ, ಎಡತ್ತೊರೆ ಶಿವರಾಜು, ಮುಳ್ಳೂರು ಸಿದ್ದಪ್ಪ, ಶಿಶರಾಜು, ಶ್ರೀನಿವಾಸ, ರಾಜಣ್ಣ ಇನ್ನೂ ಮುಖಂಡರು ಭಾಗಿಯಾಗಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More