Author: admin

ನೀವು ಒಳ್ಳೆ ಕಥೆ ಬರೀತಿರಾ? ಎಲ್ಲಿ ಪಬ್ಲಿಷ್ ಮಾಡ್ಬೇಕು ಅಂತ ಗೊತ್ತಿಲ್ವಾ? ಹಾಗಾದ್ರೆ ಚಿಂತೆಬೇಡಿ. ‘ಕಾಂಗರೂ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಆರೋಹ ಪ್ರೊಡಕ್ಷನ್ಸ್ ಹೊಸ ಚಿತ್ರದ ಕಥೆ ಬರೆಯಲು ಪ್ರತಿಭಾವಂತ ಬರಹಗಾರರಿಗೆ ಆಹ್ವಾನ ನೀಡಿದೆ. ಒಳ್ಳೆ ಕಥೆ ಬರೆದವವರಿಗೆ ಸೂಪರ್ ಬಹುಮಾನ ಗೆಲ್ಲವ ಅವಕಾಶ ಕೂಡ ಇದೆ. ಮೊದಲನೇ ಬಹುಮಾನ ₹1 ಲಕ್ಷ ಮತ್ತು ಎರಡನೇ ಬಹುಮಾನವಾಗಿ ₹50,000 ನೀಡಲಾಗುವುದು. ಟಾಪ್ 10 ಉತ್ತಮ ಕಥೆಗಳಿಗೆ ತಲಾ ₹25,000 ಬಹುಮಾನ ಕೊಡಲಾಗುವುದು. ಸಿನಿಮಾ ಒಂದಕ್ಕೆ ಈ ಕಥೆಯನ್ನು ಬಳಸಿಕೊಳ್ಳಲಾಗುತ್ತದೆ. ನಿಮ್ಮ ಶಾಲೆ ಅಥವಾ ಕಾಲೇಜಿನ ಅನುಭವದ ಮೇಲೆ ಕಥೆಯನ್ನು ಬರೆಯಬೇಕು. ಈ ಕಥೆ ಮೂರು ಪುಟಗಳ ಒಳಗೆ ಇರಬೇಕು. ನೀವು ಬರೆದ ಕಥೆಯನ್ನು ಇಮೈಲ್(E-Mail) ಅಥವಾ ವಾಟ್ಸ್‌ ಅಪ್(WhatsApp) ಮೂಲಕ ಕಳುಹಿಸಬಹುದು. ಸೆಲೆಕ್ಟ್ ಆದ ಕಥೆ ಬಹುಮಾನ ಪಡೆಯಲಿದೆ. ಬೆಸ್ಟ್ ಕಥೆ ಬರೆಯುವ ಬರಹಗಾರರು ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಕೂಡ ಗಿಟ್ಟಿಸಿಕೊಳ್ಳಲಿದ್ದಾರೆ. ನಿಮ್ಮ ಲೇಖನವನ್ನ ಕಳುಹಿಸಬೇಕಾದ ನಂ. 9844460128 ಅಥವಾ…

Read More

ಬಿಗ್‌ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ಚಂದನ್‌ ಹಾಗೂ ನಿವೇದಿತಾ ಬಗ್ಗೆ ಯೂಟ್ಯೂಬ್ ಚಾನೆಲ್‌  ವೊಂದರ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ ʻʻನನಗೆ ಚಂದನ್‌ ಆತ್ಮೀಯ ಗೆಳೆಯ. ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್‌ ನಾಯಕ. ನಾನು ಅದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್‌ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್‌ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್‌ ಪವರ್‌ ಕಪಲ್‌. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್‌ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದರು. ʻʻಚಂದನ್‌ ದಸರಾದಲ್ಲಿ ಪ್ರಪೋಸ್‌ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ…

Read More

ಪೆಟ್ರೋಲ್​ ಬಂಕ್​ ಗಳಿಗೆ ಕೆಲವೊಂದು ಷರತ್ತುಗಳ ಆಧಾರದ ಮೇಲೆ ಲೈಸೆನ್ಸ್ ನೀಡಲಾಗುತ್ತದೆ. ಆ ಷರತ್ತುಗಳನ್ನು ಪೂರೈಸದಿದ್ದರೆ, ಅಂಥಹ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆ ಷರತ್ತುಗಳಲ್ಲಿ ಸಾಮಾನ್ಯ ನಾಗರಿಕರಿಗೆ ಹಲವು ಉಚಿತ ಸೇವೆಗಳನ್ನೂ ಸಹ ಸೇರಿಸಲಾಗಿದೆ. ಟೈರ್ ನಲ್ಲಿ ಏರ್ ಫಿಲ್ಲಿಂಗ್: ನೀವು ಪೆಟ್ರೋಲ್ ಪಂಪ್ ನಲ್ಲಿ ಯಾವುದೇ ಸೇವೆಯನ್ನು ತೆಗೆದುಕೊಳ್ಳದಿದ್ದರೂ ಸಹ, ನಿಮ್ಮ ಕಾರಿನ ಟೈರ್ ಗಳಲ್ಲಿ ಗಾಳಿಯನ್ನು ಉಚಿತವಾಗಿ ತುಂಬಿಸಬಹುದು. ಇದಕ್ಕಾಗಿ ಹಣವನ್ನು ಕೇಳಿದರೆ, ನೀವು ಪಂಪ್ ನಿರ್ವಹಣೆ ಅಥವಾ ಸಂಬಂಧಿತ ಕಂಪನಿಗೆ ದೂರು ನೀಡಬಹುದು. ಕುಡಿಯುವ ನೀರು: ಎಲ್ಲಾ ಪೆಟ್ರೋಲ್ ಪಂಪ್ ಗಳು ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಅಗತ್ಯವಿದ್ದರೆ, ನೀವು ಇಲ್ಲಿ ಕುಡಿಯುವ ನೀರನ್ನು ಕೇಳಬಹುದು ಅಥವಾ ನಿಮ್ಮ ಬಾಟಲಿಯನ್ನು ತುಂಬಿಸಬಹುದು. ವಾಶ್ ರೂಮ್: ನೀವು ಪೆಟ್ರೋಲ್ ಪಂಪ್ ನ ವಾಶ್ ರೂಮ್ ಅನ್ನು ಸಹ ಬಳಸಬಹುದು. ವಿಶೇಷವೆಂದರೆ ಶೌಚಾಲಯದ ಶುಚಿತ್ವದ ಬಗ್ಗೆ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಶೌಚಾಲಯದ ಬಾಗಿಲು…

Read More

ದೇಹ ಬಲಾಢ್ಯಗಾಗಿ ಪ್ರೋಟೀನ್​​ ಪೌಡರ್​ ಬಳಸುವ ಮುನ್ನ ಎಚ್ಚರ.. ICMR ವರದಿಯಲ್ಲಿ ಅಚ್ಚರಿ ವಿಷಯ ಬಹಿರಂಗವಾಗಿದೆ. 13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳನ್ನು ವರದಿ ನೀಡಿದೆ. ಜಿಮ್, ಸ್ಪೋರ್ಟ್​ ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ. ಅತಿಯಾದ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿ ಹೆಚ್ಚು ಚೀಪ್ ಪ್ರೋಟಿನ್ ಪೌಡರ್‌ಗಳು ಮಾರಟವಾಗುತ್ತಿದ್ದು ಅದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಹೆಚ್ಚಾಗಿ ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಭಾರತದಲ್ಲಿ ನೆಲೆಯೂರಿರುವ ಅನೇಕ ಚೀಪ್ ಬ್ರಾಂಡ್ ಪ್ರೋಟಿನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಅನೇಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಸಕ್ಕರೆ ಅಂಶಗಳು…

Read More

ಕಷ್ಟ ಬಂದಾಗ ನಿವಾರಣೆಯಾಗಲಿ ಎಂದು ದೇವರ ಮೊರೆ ಹೋಗುವುದು, ಹರಕೆ ಹೇಳುವುದು ಸಹಜ. ಆದರೆ ಕೆಲವೊಮ್ಮೆ ಅತಿಯಾದ ನಂಬಿಕೆ ಅನಾಹುತವನ್ನೇ ಸೃಷ್ಟಿಸುತ್ತದೆ. ಇಲ್ಲೊಬ್ಬ ಬಿಜೆಪಿ ಅಭಿಮಾನಿಯೋರ್ವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ತನ್ನ ಎಡಕೈ ಬೆರಳೊಂದನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ..! ಈ ಘಟನೆ ನಡೆದದ್ದು ಛತ್ತಿಸ್‌ಘಡದ ಬಲರಾಮ್‌ಪುರದಲ್ಲಿ. ಇಲ್ಲಿನ ಬಿಜೆಪಿ ಕಾರ್ಯಕರ್ತ ದುರ್ಗೇಶ್‌ ಪಾಂಡೆ (30 )ಎಂಬಾತ ಬೆರಳು ಕತ್ತರಿಸಿಕೊಂಡ ಯುವಕ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದುದನ್ನು ವೀಕ್ಷಿಸುತ್ತಿದ್ದ. ಆರಂಭದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ಮುನ್ನಡೆ ಕಾಯ್ದುಕೊಂಡಿತ್ತು. ಇದರಿಂದ ತೀರಾ ಖಿನ್ನತೆಗೊಳಗಾದ ಯುವಕ ಸಮೀಪದಲ್ಲಿದ್ದ ಕಾಳಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ. ಈ ಬಾರಿ ಬಿಜೆಪಿ ಗೆಲುವು ಸಾಧಿಸಿದರೆ ತನ್ನ ಒಂದು ಬೆರಳನ್ನು ಕಾಳಿ ದೇವಿಗೆ ಅರ್ಪಿಸುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾನೆ. ಕ್ರಮೇಣ ಫಲಿತಾಂಶ ಪ್ರಕಟವಾಗಿ ಎನ್‌ಡಿಎ ಗೆಲುವು ಸಾಧಿಸುತ್ತದೆ. ಯುವಕನ ಈ ಖುಷಿಗೆ ಪಾರವೇ ಇರಲಿಲ್ಲ. ತಕ್ಷಣ ಕಾಳಿ ದೇವಿಯ ದೇವಸ್ಥಾನಕ್ಕೆ ತೆರಳಿ…

Read More

ಆಂಧ್ರ ಪ್ರದೇಶ ವಿಧಾನ ಸಭೆ, ಲೋಕಸಭಾ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ‘ತೆಲುಗು ದೇಶಂ ಪಕ್ಷ’ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಚಂದ್ರ ಬಾಬು ನಾಯ್ಡು ಆಸ್ತಿ ಮೌಲ್ಯ ಒಂದೇ ವಾರಕ್ಕೆ 870 ಕೋಟಿ ರೂ. ಹೆಚ್ಚಳವಾಗಿದೆ. ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್ ಫಂಡ್ಸ್ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು. ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ ಬಂಡವಾಳ ಜೂ.7ಕ್ಕೆ 6,136 ಕೋಟಿ ರೂ.ಗೆ ಏರಿದೆ. ಈ ಮೂಲಕ ನಾಯ್ಡು ಕುಟುಂಬದ ನಿವ್ವಳ ಆಸ್ತಿ ಮೌಲ್ಯವೂ 870 ಕೋಟಿ ರೂ. ಏರಿ, 2,190 ಕೋಟಿ ರೂ.ಗೆ ತಲುಪಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಮತ್ತು ಪವನ್ ಕಲ್ಯಾಣ್ ಜನ ಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಮಾತ್ರವಲ್ಲ ಲೋಕ ಸಭಾ ಚುನಾವಣೆಯಲ್ಲೂ ಭರ್ಜರಿ ಬೇಟೆಯಾಡುವುದರ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ…

Read More

ಇಂದು 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಮಾರಂಭಕ್ಕೆ ನಾನು ಭಾಗಿಯಾಗುತ್ತಿಲ್ಲ ಎಂಬುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ರದಲ್ಲಿ ತಿಳಿಸಿದ್ದಾರೆ. ಯಾಕೆ ಗೊತ್ತೆ ? ಮೋದಿಗೆ ಪತ್ರ ಬರೆದಿರುವಂತ ದೇವೆಗೌಡರು, ಮೊದಲನೆಯದಾಗಿ, ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿ ಎಂದಿದ್ದಾರೆ. ಇದು ನಿಜವಾಗಿಯೂ ಐತಿಹಾಸಿಕ ಸಂದರ್ಭ. ನಾನು ಈ ಹಿಂದೆ ಅನೇಕ ಬಾರಿ ಹೇಳಿದಂತೆ, ಇದು ನಿಮ್ಮ ಮೇಲೆ ಸರ್ವಶಕ್ತನ ಅಸಾಧಾರಣ ಆಶೀರ್ವಾದದ ಫಲಿತಾಂಶವಾಗಿದೆ. ನೀವು ಭಗವಂತನ ಆಶೀರ್ವಾದವನ್ನು ಪಡೆಯುವುದನ್ನು ಮುಂದುವರಿಸುತ್ತೀರಿ ಮತ್ತು ಒಂದು ದಶಕದಿಂದ ನಮಗೆಲ್ಲರಿಗೂ ಪರಿಚಿತವಾಗಿರುವ ಸಂಪೂರ್ಣ ಸಮರ್ಪಣೆಯೊಂದಿಗೆ ನಮ್ಮ ಮಹಾನ್ ರಾಷ್ಟ್ರದ ಸೇವೆಯನ್ನು ಮುಂದುವರಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ. ಚುನಾವಣೆಗಳು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿವೆ. ಇದು ಭಾರತೀಯ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಸಾಬೀತುಪಡಿಸುತ್ತದೆ. ನೀವು ನಿಜವಾದ ಪ್ರಜಾಪ್ರಭುತ್ವವಾದಿ ಎಂದು ಇದು ಸಾಬೀತುಪಡಿಸಿದೆ. ನಮ್ಮ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು ಕಾಂಗ್ರೆಸ್…

Read More

ಬ್ರಾಂಡಿ ಮತ್ತು ವಿಸ್ಕಿಯ ನಡುವಿನ ವ್ಯತ್ಯಾಸವನ್ನ ತಿಳಿಯೋಣ.ಇವೆರಡರ ನಡುವಿನ ವ್ಯತ್ಯಾಸವೇನು.? ಇವೆರಡೂ ಬೇರೆ ಬೇರೆಯೇ.? ಎಂಬ ಸಂದೇಹಗಳೂ ಬರುತ್ತವೆ. ಬ್ರಾಂಡಿ ಮತ್ತು ವಿಸ್ಕಿ ಎರಡು ಜನಪ್ರಿಯ ಆಲ್ಕೊಹಾಲ್ಯುಕ್ತ ಪಾನೀಯಗಳಾಗಿವೆ. ಪ್ರಪಂಚದಾದ್ಯಂತ ಅನೇಕ ಜನರು ದಶಕಗಳಿಂದ ಬ್ರಾಂಡಿ ಮತ್ತು ವಿಸ್ಕಿಯನ್ನ ಕುಡಿಯುತ್ತಿದ್ದಾರೆ. ಎರಡು ಪಾನೀಯಗಳು ಕೆಲವು ಸಾಮ್ಯತೆಗಳನ್ನ ಹೊಂದಿದ್ದರೂ, ಅವುಗಳ ತಯಾರಿಕೆ, ವಿಷಯ ಮತ್ತು ರುಚಿಯ ಆಧಾರದ ಮೇಲೆ ಬ್ರಾಂಡಿ ಮತ್ತು ವಿಸ್ಕಿಯ ನಡುವೆ ಅನೇಕ ವ್ಯತ್ಯಾಸಗಳಿವೆ. ಬ್ರಾಂಡಿಯು ಹುದುಗಿಸಿದ ವೈನ್‌ ನಿಂದ ಬಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ. ಆದ್ರೆ, ವಿಸ್ಕಿಯು ಗೋಧಿ, ಬಾರ್ಲಿ, ಕಾರ್ನ್ ಮತ್ತು ರೈಗಳಂತಹ ಬ್ರೂ ಮಾಡಿದ ಮಾಲ್ಟೆಡ್ ಧಾನ್ಯಗಳಿಂದ ಬಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ. ಬ್ರಾಂಡಿ ದ್ರಾಕ್ಷಿಯಿಂದ ತಯಾರಿಸಿದ ಬಟ್ಟಿ ಇಳಿಸಿದ ಮದ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಬ್ರಾಂಡಿ ಬಟ್ಟಿ ಇಳಿಸಿದ ವೈನ್. ಬ್ರಾಂಡಿ ಎಂಬ ಹೆಸರು ಡಚ್ ಪದ ‘ಬ್ರಾಂಡ್ವಿಜ್ನ್’ ನಿಂದ ಬಂದಿದೆ. ಇದರ ಅರ್ಥ ‘ಸುಟ್ಟ ವೈನ್’. ಬ್ರಾಂಡಿಯ ಆಲ್ಕೋಹಾಲ್ ಅಂಶವು ಸುಮಾರು 35-60% ಆಗಿದೆ.…

Read More

ನಮ್ಮ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರಿಗೇ ಇಷ್ಟವಾಗಿಲ್ಲ , ಅವುಗಳನ್ನು ಬಂದ್ ಮಾಡುವುದೇ ಒಳ್ಳೆಯದು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ನಾಯಕ ಎಂ ಲಕ್ಷ್ಮಣ್ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೋತ ಬಳಿಕ ಮೊದಲ ಸಲ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡ್ತಿದ್ರೂ ಜನ ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಾನೇ ಅಲ್ವಾ? ಹೀಗಾಗಿ ಗ್ಯಾರಂಟಿ ಇಷ್ಟವಿಲ್ಲವೆಂದು ಫಲಿತಾಂಶ ಮೂಲಕ ತೋರಿಸಿದ್ದಾರೆ. ಆದ್ದರಿಂದ ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಮರು ಪರಿಶೀಲನೆ ಮಾಡಿ ಅವುಗಳನ್ನು ಬಂದ್ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ(Parliament election) ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದರೆ ಈ ಸಂಖ್ಯೆ 20 ಮುಟ್ಟಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ 9 ಕ್ಷೇತ್ರಗಳಲ್ಲಿ ಗೆದ್ದಿರುವುದು ಸಮಾಧಾನ…

Read More

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದು ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಇದೀಗ 9 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದೆ. ಆದರೆ ಈ ಬೆನ್ನಲ್ಲೇ ಬಳ್ಳಾರಿಯಲ್ಲಿ ಶ್ರೀರಾಮುಲು ವಿರುದ್ಧ ಜಯಭೇರಿ ಬಾರಿಸಿದ ಸಂಸದ ತುಕಾರಾಂ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವಿಚಾರವೊಂದು ಸದ್ದು ಮಾಡುತ್ತಿದೆ. ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿರುವ ತುಕಾರಾಂ ಅವರು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ, ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಆದರೀಗ ನೂತನ ಸಂಸದರಾಗಿ ಆಯ್ಕೆಯಾಗಿರುವ ಇ ತುಕಾರಾಂ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಹೋಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪದ ಮೇಲೆ ಸಿದ್ದರಾಮಯ್ಯ ಸಂಪುಟದಿಂದ ಬಿ ನಾಗೇಂದ್ರ(Nagendra)…

Read More