12 ವರ್ಷಗಳಿಂದ ಪ್ರೀತಿಸಿದ ಹುಡುಗನನ್ನು ಇಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ವಿವಾಹವಾಗಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಚೈತ್ರಾ ಕುಂದಾಪುರ ತಾವು ಪ್ರೀತಿಸಿದ ಯುವಕ ಶ್ರೀಕಾಂತ್ ಕಶ್ಯಪ್ ಜೊತೆಗೆ ವಿವಾಹ ಬಂಧನಕ್ಕೆ ಜಾರಿದ್ದಾರೆ.
ಚೈತ್ರಾ ಕುಂದಾಪುರ ಮದುವೆಗೆ ಆಗಮಿಸಿದ್ದ ಬಿಗ್ ಬಾಸ್ʼ ಸ್ಪರ್ಧಿ ರಜತ್ ಬುಜ್ಜಿ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳನ್ನು ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ತುಂಬಾ ಖುಷಿಯಾಗುತ್ತಿದೆ. ನಾನು ಸಾಮಾನ್ಯವಾಗಿ ಯಾವ ಹುಡುಗಿಯರಿಗೂ ಹೋಗಲೇ ಬಾರಲೇ ಅಂತ ಕರೆದಿಲ್ಲ. ಆದರೆ ಚೈತ್ರಾ ಮತ್ತು ನನ್ನ ಮಧ್ಯೆ ಅಣ್ಣ–ತಂಗಿ ಭಾಂದವ್ಯ ಬೆಳೆದು ಬಿಟ್ಟಿದೆ. ನಾವಿಬ್ಬರೂ ʻಬಿಗ್ ಬಾಸ್ʼನಿಂದಲೂ ಜಗಳವಾಡುತ್ತಲೇ ಬಂದಿದ್ದೇವೆ. ಅದು ಯಾವ ಋಣಾನುಬಂಧವೋ ಗೊತ್ತಿಲ್ಲ ಎಂದರು.
ಫೋನ್ ಮಾಡಿ ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಮದುವೆ ಮಾಡಿಕೊಡಿ ಎಂದಿದ್ದರು ತುಂಬಾನೇ ಖುಷಿಯಾಯ್ತು. ಅಣ್ಣನ ಜಾಗದಲ್ಲಿ ನಿಂತು ನಾನು ಕಾರ್ಯವನ್ನು ಮಾಡಿದ್ದು ನನಗೆ ಹೆಮ್ಮೆಯಾಯ್ತು. ಇನ್ನೊಂದು ಏನೆಂದರೆ ಫೈರ್ಬ್ರ್ಯಾಂಡ್ ಕಾಲಿಗೆ ಬಿತ್ತಲ್ವಾ ಅದೇ ಮಜಾ ಎಂದು ಚೈತ್ರಾ ಬಗ್ಗೆ ರಜತ್ ಮಾತನಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW