ತುಮಕೂರು/ತುರುವೇಕೆರೆ : ರಾಜ್ಯದಲ್ಲಿ ಜಾತಿ ವಿಷ ಬೀಜವನ್ನ ಬಿತ್ತಬೇಡಿ. ನಾವೆಲ್ಲಾ ಕಾವೇರಿ ತಾಯಿಯ ಮಕ್ಕಳು, ನಾವೆಲ್ಲಾ ಒಂದೇ. ನಿಮ್ಮ ಕುರ್ಚಿ ಉಳಿಸಿಕೊಳ್ಳೋಕೆ ಜಾತಿ ರಾಜಕೀಯ ಮಾಡಬೇಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ತುರುವೇಕೆರೆ ಬೃಹತ್ ಪ್ರತಿಭಟನಾ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿ ಮಾಡುವ ಅಧಿಕಾರ ಸಂವಿಧಾನದಡಿ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿರುವುದು ಆದರೆ ಜಾತಿ ಎಂಬ ವಿಷ ಬೀಜವನ್ನ ಬಿತ್ತಬೇಡಿ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಕೇವಲ ಎರಡು ವರ್ಷದಲ್ಲಿ ಭ್ರಷ್ಟಾಚಾರ, ದುರಾಡಳಿತ ವೈಫಲ್ಯಗಳೇ ಹೆಚ್ಚಾಗಿ ಕಾಣುತ್ತಿದೆ. ಗಾಳಿ ಒಂದನ್ನ ಹೊರತುಪಡಿಸಿ ಎಲ್ಲದಕ್ಕೂ ಬೆಲೆ ಏರಿಕೆ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು.
ರೈತರಿಗೆ ಸಿಗಬೇಕಾದ ಹಾಲಿನ ಪ್ರೋತ್ಸಾಹ ಧನವನ್ನ 600 ಕೋಟಿಗೂ ಹೆಚ್ಚು ಹಣವನ್ನ ಇನ್ನು ಬಿಡುಗಡೆ ಮಾಡಿಲ್ಲ. ಕೊಬ್ಬರಿಗೆ ಕ್ವಿಂಟಾಲ್ ಗೆ 18 ಸಾವಿರ ಹಣ ನಿಗದಿಯಾಗಲು ಕುಮಾರಣ್ಣ ಅವರು ಪ್ರಧಾನಿ ಮೋದಿ ಜೀ ಅವರು ಅಮಿತ್ ಶಾ ಅವರು, ಕೇಂದ್ರ ಕೃಷಿ ಸಚಿವರನ್ನ ಭೇಟಿ ಮಾಡಿ ಕೊಬ್ಬರಿಗೆ ನಿಗದಿತ ದರ ಹೆಚ್ಚಳ ಮಾಡಿಸಿದ್ದಾರೆ ಎಂದು ತಿಳಿಸಿದರು.
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಇವತ್ತು ರಾಜ್ಯದ ಜನ ಹೇಳ್ತಿದ್ದಾರೆ. ಐದು ಗ್ಯಾರಂಟಿಗಳನ್ನ ಸಮರ್ಪಕವಾಗಿ ಕೊಡುವುದಕ್ಕೆ ಆಗ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ 25 ಸಾವಿರ ವೊಟ್ ನಲ್ಲಿ ಸೋತ್ತಿದ್ದಾರೆ ಅಂತ ಹೇಳಿದ್ರು. ಚುನಾವಣೆ ವೇಳೆ ಏನು ಮಾಡಿದ್ರು, ಎಷ್ಟು ಹುನ್ನಾರ ಮಾಡಿದ್ರು ಅಂತ ನಾಡಿನ ಜನಕ್ಕೆ ಗೊತ್ತಿದೆ ಎಂದರು
ಚುನಾವಣಾ ಗೆಲುವಿಗಾಗಿ ಜನರನ್ನ ಯಾಮಾರಿಸಿಕೊಂಡು ಹೋಗ್ತಿದ್ದೀರಾ. ಇದು ಎಷ್ಟು ದಿನ ನಡೆಯುತ್ತೆ. ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್ ಚುನಾವಣೆಯನ್ನ ಇನ್ನು ಯಾಕೆ ಘೋಷಣೆ ಮಾಡಿಲ್ಲ. ನೀವು ಕೊಟ್ಟಿರುವ ಯೋಜನೆಗೆ ವಿಶ್ವಾಸವಿಲ್ಲ ಅದಕ್ಕೆ ಇಲ್ಲಿಯ ವರೆಗೂ ಯಾಕೆ ಘೋಷಣೆ ಮಾಡಿಲ್ಲ. ನಿಮಗೆ ಧೈರ್ಯವಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಇಡೀ ರಾಜ್ಯದ ಜನ ಕಾಯ್ತಿದ್ದಾರೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.
ಗಾಂಧಿ ಕುಟುಂಬದ ಕುಡಿ ಭಾರತ್ ಜೋಡೋ ಯಾತ್ರೆ ಮಾಡಿದ್ರು, ತುರುವೇಕೆರೆಗೂ ಬಂದಿದ್ರು, ಎಲ್ಲಾ ಸಮುದಾಯವನ್ನ ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಮಾಡಿದ್ದು, ಆದರೆ ರಾಜ್ಯ ಸರ್ಕಾರ ಜಾತಿ ಗಣತಿ ಮಾಡಿ ಜಾತಿ ವಿಷ ಬಿಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಟಿ ಕೃಷ್ಣಪ್ಪ ಅವರು, ಮಾಜಿ ಶಾಸಕರಾದ ಶಮಸಾಲೆ ಜಯರಾಮ್ ಅವರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ದೊಡ್ಡೇಗೌಡರು, ಬಿಜೆಪಿ ಮುಖಂಡರಾದ ಶ್ರೀ ಲಕ್ಷ್ಮೀನಾರಾಯಣ್ ಅವರು, ಚಂದ್ರೇಶ್, ನರಸಿಂಹಮೂರ್ತಿ ಅವರು,ವಿಜಯ್ ಕುಮಾರ್ ಅವರು, ಕೊಂಡಜ್ಜಿ ವಿಶ್ವಣ್ಣ ಅವರು ಸೇರಿದಂತೆ ಜೆಡಿಎಸ್ ಬಿಜೆಪಿ ಮೈತ್ರಿ ಕೂಟದ ಪ್ರಮುಖ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW