ತುಮಕೂರು: ನಾನು ಸಮಾಜಮುಖಿಯಾಗಿ ಕೆಲಸ ಮಾಡಲು ಮುಖ್ಯ ಕಾರಣ ಮಾಜಿ ಪ್ರಧಾನಿ ದೇವೇಗೌಡರು. ನಾನು ಈ ಕ್ಷೇತ್ರಕ್ಕೆ ಬರುವ ವೇಳೆ ಆನಂದ ಆಗುವ ಬದಲಾಗಿ ಸ್ವಲ್ಪ ಎಮೋಷನಲ್ ಆಗಿದೆ. 1996ರಲ್ಲಿ ದೇವೇಗೌಡರು ಪ್ರಧಾನಿ ಆಗಿರಲಿಲ್ಲ ಎಂದಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸ್ಸು, ನಿರಂತರವಾಗಿ 30 ವರ್ಷಗಳ ಮುಖ್ಯಮಂತ್ರಿಗಳು ಆಗಿದ್ದಂತೆ ದೇವೇಗೌಡರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿರುತ್ತಿದ್ದರು. ವಿಧಿ ನಿಯಮದಂತೆ ಯಾವ ಕಾಲದಲ್ಲಿ ಏನು ಆಗಬೇಕೋ ಅದು ಆಗಿದೆ ಎಂದು ಬಿಜೆಪಿ ಅಭ್ಯರ್ಥಿ ಸೋಮಣ್ಣ ತಿಳಿಸಿದರು.
ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬೇಕೆಂದ್ರೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗಬೇಕಿದೆ ಎಂಬ ಚಿಂತನೆಯನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಎಂಟು ಸೂಚನೆಗಳನ್ನು ನೀಡಿದ್ದು, ಅದನ್ನು ಎಲ್ಲರೂ ಪಾಲಿಸಬೇಕಿದೆ ಎಂದು ಹೇಳಿದರು.
ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಗೊಂದಲವಾದ್ರೆ ಅದನ್ನು ಎಂದಿಗೂ ನಾನು ಸಹಿಸಿಕೊಳ್ಳುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಅವರುಗಳು ನನ್ನನ್ನು ತುಮಕೂರು ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಗುರುತಿಸಿದರು. ಅದನ್ನು ಪುಷ್ಪೀಕರಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು. ಹೀಗಾಗಿ ಮೂರೂ ಜನರ ಆಶೀರ್ವಾದ ತುಮಕೂರು ಜನರ ಮೇಲೆ ಇರುತ್ತದೆ ಎಂದರು.
ಯಾರು ಏನೇ ಹೇಳಬಹುದು, ಸಾಮಾನ್ಯ ಜನರ ಜೀವನ ಮಟ್ಟ ಸುಧಾರಣೆ ಮಾಡಲು ಕಲ್ಪನೆ ಕೊಟ್ಟವರು ದೇವೇಗೌಡರು. ನಾವೆಲ್ಲರೂ ಒಂದು ಕುಟುಂಬದ ಸದಸ್ಯರಾಗಿ ಕೆಲಸ ಮಾಡೋಣ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದಂತೆ ಬೆಂಗಳೂರಿನ ಮತ್ತೊಂದು ಭಾಗವಾಗಿ ತುಮಕೂರಿನ ಲೋಕಸಬಾ ಕ್ಷೇತ್ರವನ್ನು ಮಾಡುತ್ತೇನೆ ಎಂದರು.
ಕಾಯಾ ವಾಚ ಮನಸ ದುಡಿಯುತ್ತೇನೆ. ಪ್ರಸ್ತುತ ತುಮಕೂರು ನಗರದ ಮಾರುತಿ ನಗರದಲ್ಲಿ ಮನೆ ಮಾಡಿದ್ದೇನೆ. ಮುಂದೆಯೂ ಇಲ್ಲಿಯೇ ಮನೆ ಮಾಡಿ ವಾಸ ಮಾಡುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296