nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026
    Facebook Twitter Instagram
    ಟ್ರೆಂಡಿಂಗ್
    • ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್
    • ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
    • ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ
    • ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
    • ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್
    • ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?
    • ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
    • ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದೇವರ ಲೆಕ್ಕಾಚಾರ…
    ಲೇಖನ January 10, 2025

    ದೇವರ ಲೆಕ್ಕಾಚಾರ…

    By adminJanuary 10, 2025No Comments3 Mins Read
    stoty

    ಬಹಳ ಹಿಂದೆ ಸುರಪುರವೆಂಬ ಊರಿನಲ್ಲಿ ಶಂಭು ಎಂಬ ಬಡವನಿದ್ದ. ಇವನು ಮಹಾನ್ ದೈವ ಭಕ್ತ. ಪ್ರತಿದಿನ ದೇವರನ್ನು ಪ್ರಾರ್ಥಿಸದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಇವನ ಭಕ್ತಿಗೆ ದೇವರೂ ಕೂಡ ಸಂಪ್ರೀತನಾಗಿದ್ದನು. ಶಂಭು ಮೇಕೆಗಳನ್ನು ಸಾಕಿದ್ದ, ಪ್ರತಿದಿನ ಕಾಡಿನ ಸಮೀಪ ಕರೆದುಕೊಂಡು ಹೋಗಿ ಮೇಯಿಸಿಕೊಂಡು, ಹೊಳೆಯಲ್ಲಿ ನೀರು ಕುಡಿಸಿಕೊಂಡು ಬರುತ್ತಿದ್ದ. ಇವನ ಬಳಿ ಮೇಕೆಕೊಳ್ಳಲು ಅಕ್ಕಪಕ್ಕದ ಜನರು ಬರುತ್ತಿದ್ದರು ವ್ಯಾಪಾರದಿಂದ ಬರುವ ಹಣದಿಂದ ತಕ್ಕಮಟ್ಟಿನ ಜೀವನ ನಡೆಸುತ್ತಿದ್ದ.

    ಹೀಗೆಯೇ ಹಲವು ದಿನಗಳು ಕಳೆದವು. ಶಂಭುವಿನ ಹಣೆಬರಹದಂತೆ ಕೆಟ್ಟದಿನಗಳು ಬರಲು ಪ್ರಾರಂಭವಾದವು. ಆಗ ವೈಕುಂಠದಲ್ಲಿ ದೇವಿ ದೇವನಲ್ಲಿ ಕೇಳುತ್ತಾಳೆ ಹೇ ದೇವ ಶಂಭು ನಿಮ್ಮ ಪರಮ ಭಕ್ತ ಅವನಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲ, ಅವನನ್ನು ಕಾಪಾಡುವ ಹೊಣೆ ನಿಮ್ಮದಲ್ಲವೇ ಎಂದಾಗ ದೇವನು ಹೌದು ದೇವಿ ನೀನು ಹೇಳುವುದು ಸರಿಯಾಗಿದೆ. ಆದರೆ ಅವನ ಹಣೆ ಬರಹ ಅವನು ಅನುಭವಿಸಲೇ ಬೇಕು ಅಲ್ಲವೇ ಎಂದಾಗ, ದೇವಿಯು ಆದರೂ ಕಡೆಯಪಕ್ಷ ಅವನಿಗೆ ಸಹಾಯ ಮಾಡಬಹುದಲ್ಲವೇ ಎಂದಾಗ ದೇವನು ಹಾಗಾದರೆ ಅವನಿಗೆ ಸಹಾಯ ಮಾಡುತ್ತೇನೆ, ಆದರೆ ಅದರ ಮುಂದಿನ ಘಟನೆಗಳನ್ನು ನೋಡುತ್ತಿರು ಅದು ನಿನಗೇ ತಿಳಿಯುವುದು ಎಂದಾಗ ದೇವಿ ಆಶ್ಚರ್ಯದಿಂದ  ನೋಡುತ್ತಾಳೆ.

    ಇತ್ತ ಸುರಪುರಕ್ಕೆ ಪಕ್ಕದ ಹಳ್ಳಿಯಂದ ದೊಡ್ಡ ದೊಡ್ಡ ಸಾಹುಕಾರರು ಬಂದು ಹಳ್ಳಿಯ ಜಾತ್ರೆಯ ನಿಮಿತ್ತ ಶಂಭುವಿನ ಬಳಿ ಇದ್ದ ಎಲ್ಲಾ ಮೇಕೆಗಳನ್ನು ಕೊಂಡುಕೊಂಡು ಹೋಗಿಬಿಟ್ಟರು. ಇದರಿಂದ ಶಂಭುವಿಗೆ ಪರಮಾಶ್ಚರ್ಯವಾಯಿತು. ಹೇ ದೇವ ಎಲ್ಲಿಯೋ ಒಂದೊಂದು ವ್ಯಾಪಾರವಾಗುತ್ತಿದ್ದ ನನಗೆ ನಿನ್ನ ಕರುಣೆಯಿಂದ ನನ್ನ ಬಳಿ ಇದ್ದ ಎಲ್ಲಾ ಮೇಕೆಗಳು ಒಟ್ಟಿಗೆ ವ್ಯಾಪಾರವಾದವು ನಿನಗೆ ಅನಂತ ಕೋಟಿ ನಮನಗಳು ಎಂದು ನಮಿಸುತ್ತಾ ಅತ್ಯಧಿಕ ಲಾಭ ಬಂದ ಸಂತೋಷದಲ್ಲಿ ಮತ್ತಷ್ಟು ಮೇಕೆಮರಿಗಳನ್ನು ಕೊಂಡುಕೊಳ್ಳಲು ಪಟ್ಟಣದ ಸಂತೆಗೆ ಹೋದನು. ಅಲ್ಲಿ ಸಾಕಷ್ಟು ಮೇಕೆಮರಿಗಳನ್ನು ಕೊಂಡುಕೊಂಡು ಊರಿಗೆ ಬಂದನು. ಅವನ ದುರಾದೃಷ್ಟವಶಾತ್ ಕೆಲವೇ ದಿನಗಳಲ್ಲಿ ಮೇಕೆ ಮರಿಗಳಿಗೆ ವಿಚಿತ್ರ ಖಾಯಿಲೆ ಬಂದು ಒಂದೊಂದೇ ಒಂದೊಂದೆ ಪ್ರಾಣ ಬಿಡಲು ಪ್ರಾರಂಭಿಸಿದವು. ಹೀಗೆಯೇ ಅವನು ತಂದಿದ್ದ ಎಲ್ಲಾ ಮರಿಗಳು ಪ್ರಾಣಬಿಟ್ಟವು.  ಇದರಿಂದ ದುಃಖಿತನಾದ ಶಂಭು ಊರ ಹೊರವಲದ ದೇವಾಲಯದ ಮೆಟ್ಟಿಲಮೇಲೆ ಕುಳಿತು ಹೇ ದೇವ ನಾನೇನು ಪಾಪ ಮಾಡಿದ್ದೆ, ಒಳ್ಳೆಯ ವ್ಯಾಪಾರ ಆಗಿತ್ತು, ಆದರೆ ಎಲ್ಲವೂ ಹೋಯಿತು, ಹೀಗೆ ಕೊಟ್ಟೆ ಹಾಗೆ ಕಸಿದುಕೊಂಡೆ, ನನಗೆ ಮಾತ್ರ ಹೀಗೇನಾ? ಚೆನ್ನಾಗಿರುವವರು ಚೆನ್ನಾಗಿಯೇ ಇದ್ದಾರೆ ನನಗೆ ಮಾತ್ರ ಏಕೆ ಹೀಗೆ, ನಾನು ನಿನ್ನ ಭಕ್ತ ನನಗೇಕೆ ಹೀಗೆ ಮಾಡಿದೆ; ಎಂದು ರೋದಿಸುತ್ತಿರುವಾಗ ಇತ್ತ ದೇವಿಯು ಹೌದು ಪ್ರಭು ಅವನು ಹೇಳುತ್ತಿರುವುದು ಸರಿಯಾಗಿಯೇ ಇದೆ ಹೀಗೆ ಕೊಟ್ಟು ಹಾಗೆ ಏಕೆ ಕಸಿದುಕೊಂಡಿರಿ ಎಂದಾಗ ದೇವನು ಮುಗುಳ್ನಕ್ಕು ನೋಡು ದೇವಿ ನೀನು ಹೇಳಿದಂತೆ ನಾನು ಅವನಿಗೆ ಸಹಾಯ ಮಾಡಿರುವೆನು. ಮುಂದಿನ ಕಷ್ಟ ಎದುರಿಸಲು ನಾನು ಅವನಿಗೆ ಮೊದಲೇ ಸಾಕಷ್ಟು ಹಣ ಸಿಗುವ ಹಾಗೆ ಮಾಡಿದೆ.

    ಎಲ್ಲವೂ ಒಟ್ಟಿಗೆ ವ್ಯಾಪಾರ ಆಗುವಂತೆ ಮಾಡಿ ಅವನಿಗೆ ಅತ್ಯಧಿಕ ಹಣ ದೊರಕುವಹಾಗೆ ಮಾಡಿದೆ. ಆದರೆ ಅವನ ಹಣೆಬರಹ ಅನುಭವಿಸಬೇಕಾಗಿತ್ತು ಅದಕ್ಕಾಗೆ ಅವನಿಗೆ ಎರಡನೇ ಬಾರಿ ಮರಿಗಳಿಗೆ ಖಾಯಿಲೆ ಬಂದು ನಷ್ಟವಾಯಿತು. ಆದರೂ ಕೆಲದಿನಗಳವರೆಗೆ ಅವನು ಜೀವನ ನಡೆಸುಷ್ಟು ಹಣ ಅವನಿಗೆ ನೀಡಿರುವೆನು. ಈ ಮೊದಲು ಅವನಿಗೆ ವ್ಯಾಪಾರದಲ್ಲಿ ಲಾಭ ಬರುವ ಹಾಗೆ ಮಾಡದೇ ಕೇವಲ ಅವನ ಬಳಿ ಇದ್ದ ಮೇಕೆಗಳಿಗೆ ಖಾಯಿಲೆ ಬಂದಿದ್ದರೆ, ಅವನಿಗೆ ಮತ್ತಷ್ಟು ಕಷ್ಟಗಳು ಬರುತ್ತಿದ್ದವು, ಜೀವನ ನಡೆಸುವುದೇ ದುಸ್ತರವಾಗುತ್ತಿತ್ತು. ಆದರೆ ಅವನು ಮಾನವ; ಕೇವಲ ನಾನು ಕೊಟ್ಟು ಕಿತ್ತುಕೊಂಡೆ ಎಂದಷ್ಟೇ ಯೋಚಿಸುತ್ತಿದ್ದಾನೆ. ನಾನು ಮೊದಲು ಕೊಡದೇ ಇರುವುದನ್ನೇ ಕಿತ್ತುಕೊಂಡಿದ್ದರೆ ಆಗ ಏನಾಗುತ್ತಿತ್ತು ನೀನೇ ಯೋಚಿಸು ದೇವಿ ಎಂದಾಗ ದೇವಿಗೆ ಎಲ್ಲವೂ ಅರ್ಥವಾಗಿ ಹೌದು ದೇವ ನೀವು ಸರಿಯಾಗಿ ಹೇಳಿದಿರಿ ಎಂದಳು.

    ವೇಣುಗೋಪಾಲ್

     

    ಪ್ರಿಯ ಓದುಗರೆ,

    ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕ್ಷಣವೂ ದೇವರ ಲೆಕ್ಕಾಚಾರದ ಒಂದು ಭಾಗ. ಯಶಸ್ಸು ಹಾಗೂ ವಿಫಲತೆಗಳ ನಡುವೆ ನಂಬಿಕೆ ಮತ್ತು ಧೈರ್ಯವನ್ನು ಕಳೆದುಕೊಳ್ಳದೇ ಮುಂದೆ ಸಾಗುವುದು ತುಂಬಾ ಮುಖ್ಯ. ಸಂಕಷ್ಟಗಳು ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿಸಲು ಬರುವುದೇ ಹೊರತು, ಕುಗ್ಗಿಸಲೆಲ್ಲ.

    ನಮ್ಮ ಜೀವನದಲ್ಲಿ ಏನೇ ಆಗಲಿ, ದೇವರು ನಮ್ಮ ಹಿತಕಾಯಿತಕ್ಕಾಗಿ ಯೋಜನೆಗಳನ್ನು ಹೊಂದಿದ್ದಾನೆ ಎಂಬ ನಂಬಿಕೆಯನ್ನು ಪೋಷಿಸೋಣ. ಪ್ರತಿಯೊಂದು ಸವಾಲು ಕೂಡ ಒಂದು ಹೊಸ ಅವಕಾಶವಾಗಿದೆ ಎಂಬ ದೃಢ ನಿಲುವು ಹೊಂದೋಣ.

    ನಂಬಿಕೆಯಿಂದ ಸಾಗಿದರೆ ಜೀವನ ಸಾರ್ಥಕವಾಗುತ್ತದೆ.

    ನಮ್ಮ ಕಥೆ ಓದಿ ಪ್ರೇರಣೆಯನ್ನು ಪಡೆದು, ಮುನ್ನಡೆಯಿರಿ!


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಗಣೇಶ ಚತುರ್ಥಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

    September 14, 2026

    ಗೌರಿ — ಗಣೇಶ ಹಬ್ಬ: ಸಂಭ್ರಮ, ಸಡಗರ ಹಾಗೂ ಪರಿಸರ ಕಾಳಜಿಯ ಹಬ್ಬ

    September 14, 2026

    ಹೀಗೂ ಉಂಟೆ …! | ಸಂಟ್ಯಾರು ಕಡೆಯುವ ಕಲ್ಲು…!

    September 2, 2026

    Comments are closed.

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ತುಮಕೂರು: ದೇಶದ, ಸಮಾಜದ ಬೆಳವಣಿಗೆಗೆ ನಿರ್ಮಾತೃಗಳಾಗಿ ಎಂಜಿನಿಯರ್‌ ಗಳು ಇಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾಗುವ ವ್ಯವಸ್ಥೆಯನ್ನು…

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026

    ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    September 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.