- ಆಂಟೋನಿ ಬೇಗೂರು
ಪ್ರತಿ ವರ್ಷ ಡಿಸೆಂಬರ್ 9 ರಂದು, UN ನಿಂದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಇಂದು ಆಚರಿಸಲಾಗುವ ಈ ವಿಶೇಷ ದಿನದ ಮಾಹಿತಿ.
ಅಕ್ಟೋಬರ್ 31, 2003 ರಂದು, ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ನಿರ್ಣಯವನ್ನು ಅಂಗೀಕರಿಸಿತು. ಕೌನ್ಸಿಲ್ ಡಿಸೆಂಬರ್ 9 ಅನ್ನು ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಘೋಷಿಸಿದೆ. ಅಂದಿನಿಂದ, ಈ ದಿನವನ್ನು ವಿಶ್ವಸಂಸ್ಥೆಯಿಂದ ವಾರ್ಷಿಕವಾಗಿ ಆಚರಿಸಲಾಗುತ್ತದೆ.
ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವಿಶ್ವದ 180 ದೇಶಗಳನ್ನು ಅಧ್ಯಯನ ಮಾಡಿದ ನಂತರ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಭಾರತವು 2016 ರಲ್ಲಿ 79 ನೇ, 2017 ರಲ್ಲಿ 81 ನೇ ಮತ್ತು 2018 ರಲ್ಲಿ 78 ನೇ ಸ್ಥಾನದಲ್ಲಿತ್ತು.
ಭ್ರಷ್ಟಾಚಾರವು ಒಂದು ದೇಶದ ಸಂಘಟನೆಯ ತಳದಿಂದ ನಾಯಕತ್ವ, ಆಡಳಿತಾತ್ಮಕ ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆಯವರೆಗೆ ಕ್ಯಾನ್ಸರ್ನಂತೆ ಹರಡುತ್ತದೆ. ಭ್ರಷ್ಟಾಚಾರವು ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುತ್ತದೆ ಮತ್ತು ಅನೇಕ ಅಗತ್ಯ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ.
ಭ್ರಷ್ಟಾಚಾರವು ಕಳಪೆ ಗುಣಮಟ್ಟದ ಕೆಲಸ, ಸಮಯ ಮತ್ತು ಸಾರ್ವಜನಿಕ ಆಸ್ತಿಗಳ ವ್ಯರ್ಥಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಭ್ರಷ್ಟಾಚಾರದಿಂದಾಗಿ ಕೆಲವೇ ಜನರು ಏಳಿಗೆ ಹೊಂದುತ್ತಾರೆ ಮತ್ತು ಹೆಚ್ಚಿನ ಜನರು ಬಡತನದಲ್ಲಿ ಬಳಲುತ್ತಿದ್ದಾರೆ. ಇದರಿಂದಾಗಿ ದೇಶದ ಆರ್ಥಿಕತೆ ಮತ್ತು ಆಡಳಿತದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಸಾಮಾಜಿಕ ಅಸಮಾನತೆಗಳು ಹೆಚ್ಚುತ್ತಿವೆ.
ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಭಾರತ ಮತ್ತು ಕರ್ನಾಟಕ…
ಸ್ವಾತಂತ್ರ್ಯಾ ನಂತರದ ಪ್ರತಿ ಅವಧಿಯಲ್ಲಿ ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ವಿವಿಧ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿ ವಿವಿಧ ಕಾಲಘಟ್ಟಗಳಲ್ಲಿ ಹಲವು ನಾಯಕರು ಭ್ರಷ್ಟಾಚಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ಆದರೆ, ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದು ಸತ್ಯ. ಮಾಹಿತಿ ಹಕ್ಕಿನಂತಹ ಕಾನೂನುಗಳು ಅನೇಕ ಭ್ರಷ್ಟಾಚಾರಗಳನ್ನು ಬೆಳಕಿಗೆ ತರಲು ಸಹಾಯ ಮಾಡಿದ್ದರೂ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಭಾರತವು ತನ್ನ ಪಯಣದಲ್ಲಿ ಬಹಳ ದೂರ ಸಾಗಬೇಕಾಗಿದೆ.
ಮೊದಲನೆಯದಾಗಿ, ಕಳೆದ ಕೆಲವು ದಿನಗಳಲ್ಲಿ ಯಾರು ಭ್ರಷ್ಟರಾಗಿದ್ದಾರೆ? ಕರ್ನಾಟಕದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದೆ. ಇದರಿಂದಾಗಿ ಎರಡೂ ಕಡೆಯವರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ಭ್ರಷ್ಟಾಚಾರದ ಆರೋಪ ಎಂದು ಆರಂಭವಾದ ಮಾತಿನ ಸಮರ ರಾಜಕೀಯ ಶಿಷ್ಟಾಚಾರದ ಮಾತುಗಳನ್ನು ಮೀರಿ ಪ್ರತಿಧ್ವನಿಸತೊಡಗಿದೆ. ಇಂದಿಗೂ ‘ಯಾರು ಭ್ರಷ್ಟ’ ಎಂಬ ಚರ್ಚೆ ಎರಡೂ ಕಡೆಯಿಂದ ಎದ್ದಿರುವುದು ಗಮನಾರ್ಹ.
ಯಾವುದೇ ರೀತಿಯಲ್ಲಿ ಭ್ರಷ್ಟಾಚಾರವು ಸಭ್ಯ, ಪ್ರಾಮಾಣಿಕ ಮತ್ತು ಸಮತೋಲಿತ ಸಮಾಜವನ್ನು ನಿರ್ಮಿಸಲು ದೊಡ್ಡ ರೋಗವಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ನಿಜವಾದ ಪ್ರಜಾಪ್ರಭುತ್ವಕ್ಕೆ ಪರ್ಯಾಯವಿಲ್ಲ.
ಎಲ್ಲಿ ಭ್ರಷ್ಟಾಚಾರ ಇಲ್ಲಾ ನೀವೇ ಹೇಳಿ?
ಸ್ಕೂಲಿಂದ ಹಿಡಿದು ಕಾಲೇಜ್ ಸೀಟ್, ಇಂಜಿನಿಯರಿಂಗ್ ಸೀಟ್, ಎಂಬಿಬಿಎಸ್ ಸೀಟ್, ಇತ್ಯಾದಿ ಡೊನೇಷನ್ ಮಾದರಿಯಲ್ಲಿ ಲಂಚ ಸ್ವೀಕರಿಸುತ್ತಾರೆ.
ಇನ್ನು ಕೆಲಸಕ್ಕೆ ಸೇರಬೇಕು ಅಂದರು ಸರ್ಕಾರಿ ಉದ್ಯೋಗ ಆಗಿರಬಹುದು. ಅಥವಾ ಖಾಸಗಿ ಕಂಪನಿಯಲ್ಲೂ ಸಹ ದುಡ್ಡು ಕೊಟ್ಟು ಕೆಲಸಕ್ಕೆ ಸೇರುವ ಪರಿ ಎಲ್ಲಾ ಕಡೆಯಲ್ಲೂ ರೂಢಿಯಾಗಿದೆ.
ಇನ್ನು ಬೀದಿ ವ್ಯಾಪಾರಿಗಳು ರಸ್ತೆಗಳಲ್ಲಿ ವ್ಯಾಪಾರ ಮಾಡಲು ಕೆಲವು ಪೊಲೀಸರಿಗೆ ಅಥವಾ ರೌಡಿಗಳಿಗೆ ಮಾಮೂಲು ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸವಾಗಲು ಸಹ ಲಂಚ ನೀಡಬೇಕಾಗಿದೆ. ಲಂಚ ಕೊಟ್ಟರೆ ಮಾತ್ರ ಮಂಚ ಅನ್ನುವ ಗಾದೆ ಸರಿಯಾಗಿಯೇ ಇದೆ.
ಜನನ ಪತ್ರದಿಂದ ಹಿಡಿದು ಮರಣ ಪತ್ರದವರೆಗೂ ಸಹ ಲಂಚ ಕೊಟ್ಟರೆ ಮಾತ್ರ ಸಿಗುತ್ತದೆ. ಇಂಥ ಭಾರತ ದೇಶದಲ್ಲಿ ಏನೇ ಬೇಕೆಂದರೂ ಲಂಚ ಕೊಟ್ಟು ಮಾತ್ರ ಪಡೆದುಕೊಳ್ಳಬೇಕಾಗಿರುವಂತಹ ಪರಿಸ್ಥಿತಿ ಎಲ್ಲೆಡೆ. ಹಾಗಾದರೆ ಇದನ್ನು ಕೇಳುವರು ಯಾರು? ಸಾರ್ವಜನಿಕರಿಗೆ ಒಂದು ಅಭ್ಯಾಸ ಆಗ್ಬಿಟ್ಟಿದೆ ಕೊಟ್ಟು ಕೊಟ್ಟು ರೂಢಿ ಆಗಿದೆ. ಸಮಯದ ಅಭಾವ ಸರಿ ಲಂಚ ಕೊಟ್ಟು ಬೇಗ ಮುಗಿಸಿಕೊಂಡು ಬಿಡೋಣ ಅಂತ ಕೊಟ್ಟು ಅವರ ಕೆಲಸ ಮುಗಿಸಿಕೊಂಡು ಹೋಗುತ್ತಾರೆ. ದುಡ್ಡಿರೋರು ಲಂಚ ಕೊಟ್ಟು ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೀರಿ? ದುಡ್ಡಿಲ್ಲದೇ ಇರುವವರು ಏನು ಮಾಡಬೇಕು?
ಲಂಚ ತಡೆಗಟ್ಟಲು ಒಂದೇ ಒಂದು ಮಾರ್ಗ
ಸಾರ್ವಜನಿಕರು ಕೊಡುವುದನ್ನು ನಿಲ್ಲಿಸಬೇಕು. ಆಗ ಅದೇ ಲಂಚಮುಕ್ತ ಊರು, ಜಿಲ್ಲೆ, ರಾಜ್ಯ, ದೇಶವಾಗಿ ಮಾರ್ಪಡುತ್ತದೆ. ಈ ಭ್ರಷ್ಟಾಚಾರ ದಿನದಂದು ನಾವು ಪ್ರತಿಜ್ಞೆಯನ್ನು ಮಾಡೋಣ. ಲಂಚ ಕೊಡುವುದನ್ನು ನಿಲ್ಲಿಸೋಣ, ಲಂಚ ತೆಗೆದುಕೊಳ್ಳುವವರನ್ನು ಲೋಕಾಯುಕ್ತ ಅಥವಾ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡೋಣ. ನಿಮ್ಮ ಬಳಿ ಅಥವಾ ಲಂಚ ತೆಗೆದುಕೊಳ್ಳುತ್ತಿರುವುದು ನಿಮಗೆ ಕಂಡು ಬಂದಲ್ಲಿ ಈ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ದೂರನ್ನು ನೀಡಿ. ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳಿದರೆ ದೂರು ನೀಡಿ. ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಹಾಗೂ ಅಕ್ರಮ ಆಸ್ತಿ ಸಂಪಾದಿಸಿದ್ದರ ಬಗ್ಗೆ ದೂರುಗಳಿಗಾಗಿ ಸಂಪರ್ಕಿಸಿ.
ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಹಾಗು ಅಕ್ರಮ ಆಸ್ತಿ ಸಂಪಾದಿಸಿದ್ದರ ಬಗ್ಗೆ ದೂರುಗಳಿಗಾಗಿ ಸಂಪರ್ಕಿಸಿ.
ಕರ್ನಾಟಕ ಲೋಕಾಯುಕ್ತ:
Dr. B.R. Ambedkar Road, MS Building, Bengaluru, Karnataka 560001
080 2225 7013
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz