ಮಾಯಸಂದ್ರ: ಇತ್ತೀಚಿಗಷ್ಟೇ ನಿಧನರಾದ ಕಲಾ ತಪಸ್ವಿ ರಾಜೇಶ್ ರವರಿಗೆ ಇಂದು ಮಾಯಸಂದ್ರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕ.ಸಾ.ಪ ಮಾಯಸಂದ್ರ ಘಟಕದ ಸ್ಥಾಪಕ ಅಧ್ಯಕ್ಷರಾದ ಎನ್.ಆರ್.ಜಯರಾಮ್, ರಾಜಕುಮಾರ್, ಕಲ್ಯಾಣ್ ಕುಮಾರ್ ರವರ ಸಮಕಾಲೀನ ನಟರಾದ ರಾಜೇಶ್ ರವರ ನಿಧನದಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ. ‘ದೇವರ ದುಡ್ಡು’ ಚಿತ್ರದಲ್ಲಿ ಅವರ ಅಭಿನಯ ನೆನೆದು ಇದೇ ವೇಳೆ ಅವರು ಭಾವುಕರಾದರು.
ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಮಾಯಸಂದ್ರ ಕ.ಸಾ.ಪ ಘಟಕದ ನೂತನ ಅಧ್ಯಕ್ಷರಾದ ಪಿ.ಎನ್ ಜವರೇಗೌಡ ರವರ ನೇತೃತ್ವದಲ್ಲಿ ನೂತನ ಸಮಿತಿಯ ರಚನೆಯಾಯಿತು.
ಈ ಕಾರ್ಯಕ್ರಮದಲ್ಲಿ CN ನಂಜುಂಡಯ್ಯ, ಶ್ರೀಧರ್ ಮೂರ್ತಿ, ಪ್ರಕಾಶ್ CP, ಶಿವಲಿಂಗೇಗೌಡರು, SDMC ಅಧ್ಯಕ್ಷರಾದ ಕರಿಬಸವಪ್ಪ, ಹನುಮಂತಯ್ಯ, ಮುನಿರಾಜು, ಲೀಲಾವತಿ ಗಿಡ್ಡಯ್ಯ, MS ಶಿವರಾಮಯ್ಯನವರು,ವೇಗಣ್ಣ, ಯತೀರಾಜು, ಗಿರಿಧರ್, ರವೀಂದ್ರ ಮುಂತಾದವರು ಭಾಗವಹಿಸಿದ್ದರು.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB