ಆರ್ ಸಿಬಿ 2008ರ IPL ಪಂದ್ಯಾವಳಿಯ ಆರಂಭದಿಂದಲೂ ಸಹ ಟ್ರೋಫಿ ಗೆಲ್ಲಲು ವಿಫಲವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರರೊಬ್ಬರು ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಐಪಿಎಲ್ 2024 ರ ಲಕ್ಕೋ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಅಂಬಟಿ ರಾಯುಡು ಆರ್ ಸಿ ಬಿ ಸೋಲಿಗೆ ಕಾರಣವೇನು ಎಂಬುದರ ಕುರಿತಾಗಿ ವಿಮರ್ಶೆ ಮಾಡಿದ್ದಾರೆ.
RCBಯ ದೊಡ್ಡ ಸಮಸ್ಯೆ ಎಂದರೆ ಆಟಗಾರರಿಗೆ ಸರಿಯಾದ ಬೆಂಬಲದ ಕೊರತೆ ಇರುವುದು. ಆರ್ ಸಿಬಿ ಆಯ್ಕೆ ಸಮಿತಿಯು ಶೇನ್ ವ್ಯಾಟ್ಸನ್, ಯುಜೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್ ಗಳಿಗೆ ಫ್ರಾಂಚೈಸಿಯನ್ನು ತೊರೆಯಲು ಅವಕಾಶ ಮಾಡಿಕೊಟ್ಟದ್ದು ಈ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೊಹ್ಲಿ ವರ್ಷಗಳ ಕಾಲ RCB ಯ ನಾಯಕರಾಗಿದ್ದರು. ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸುವ ಆಯ್ಕೆ ಇದ್ದರೂ ಕೊಹ್ಲಿಯವರು ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಬೋಲರ್ಗಳನ್ನ ಆಯ್ಕೆ ಮಾಡಲಿಲ್ಲ. ತಂಡವು ಗುಣಮಟ್ಟದ ಬೌಲರ್ ಗಳನ್ನು ಎಂದಿಗೂ ಖರೀದಿಸಲೇ ಇಲ್ಲ. ಬ್ಯಾಟಿಂಗ್ ನಲ್ಲಿಯೂ ಸಹ, ಕೊಹ್ಲಿ ಅವರು ಮಾತ್ರ ಅತಿ ಹೆಚ್ಚು ರನ್ ಗಳನ್ನು ಸಿಡಿಸಿದ್ದಾರೆ ಅವರ ಹೊರತಾಗಿ ಬೇರೆ ಇನ್ಯಾವ ಆಟಗಾರರು ಸಹ ಆ ರೀತಿಯ ಸ್ಪರ್ಧೆಯನ್ನು ನೀಡಿಯೇ ಇಲ್ಲ ಎಂದು ತಿಳಿಸಿದ್ದಾರೆ.
ದುರಂತವೆಂದರೆ ಆರ್ ಸಿಬಿ ಕೈ ಬಿಟ್ಟ ಆಟಗಾರರು ಇತರ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ತಂಡದಲ್ಲಿ ನಾಯಕನಾಗಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಸಹ ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296