ಮಧುಗಿರಿ : ಪಟ್ಟಣದಲ್ಲಿ ಅಮೃತ್ –02 ಯೋಜನೆ ನಡೆಯುತ್ತಿದ್ದು, ವಾಹನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿವೆ. ಕಂಡಕಂಡಲ್ಲಿ ಯುಜಿಡಿ ಪೈಪಿನ ಹಾಗೂ ಕುಡಿಯುವ ನೀರಿನ ಪೈಪಿನ ಗುಂಡಿಗಳನ್ನು ಮುಚ್ಚದ ಕಾರಣ ದ್ವಿಚಕ್ರ ವಾಹನಗಳು ಬೀಳುತ್ತಿವೆ. ಇತ್ತ ಪಾದಚಾರಿ ರಸ್ತೆಯನ್ನು ಬೀದಿ ಬದಿಯ ಅಂಗಡಿ ವ್ಯಾಪಾರಿಗಳು ಖಾಯಂ ಆಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಪುರಸಭೆ ಅಧಿಕಾರಿಗಳಿಗೆ ಮಾತ್ರ ಇದು ಕಣ್ಣಿಗೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಅನಧಿಕೃತವಾಗಿ ಅಂಗಡಿಯವರು ಮುಂಭಾಗದ ಫುಟ್ ಬಾತ್ ಜಾಗವನ್ನು ಕಬ್ಬಿಣದ ಸರಳುಗಳಿಂದ ಒತ್ತುವರಿ ಮಾಡಿಕೊಂಡಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈಗ ಸಾರಿಗೆ ವಿಭಾಗೀಯ ಕಚೇರಿಯೂ ಬಂದಿದ್ದು ಬಸ್ಸುಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಬಸ್ ನಿಲ್ದಾಣದ ಗಾತ್ರ ಕಿರಿದಾಗುತ್ತಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಅಂಗಡಿ ಒಳಗೆ ಜಾಗವಿದ್ದರೂ ಎಲ್ಲರೂ ಮುಂಭಾಗದ ಪುರಸಭೆ ಫುಟ್ ಬಾತ್ ಜಾಗದಲ್ಲೇ ಕಬ್ಬಿಣದ ಸರಳುಗಳಿಂದ ತಮ್ಮದೆ ಸ್ವಂತ ಜಾಗವೆಂಬಂತೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಬೆಳಿಗ್ಗೆ ಪತ್ರಿಕೆ ಹಾಕುವ ವಿತರಕರು ರಸ್ತೆಯಲ್ಲೇ ಕುಳಿತು ಪತ್ರಿಕೆ ವಿಂಗಡಿಸಿಕೊಂಡು ಹೋಗಬೇಕಿದೆ.
ಕನಿಷ್ಟ ಪತ್ರಿಕಾ ವಿತರಣೆಗೂ ಇಲ್ಲಿ ಅಡ್ಡಿಯಿದ್ದು, ಸಾರ್ವಜನಿಕರಿಗೂ ಅಡ್ಡಿಯಿದ್ದು, ಶೀಘ್ರ ಈ ಅನಧಿಕೃತ ಒತ್ತುವರಿ ತೆರವುಗೊಳಿಸಿಕೊಟ್ಟು ಪುರಸಭೆಯ ಶಕ್ತಿ ಪ್ರದರ್ಶಿಸಲಿ ಎಂದು ಸಾರ್ವಜನಿಕರು, ಪತ್ರಿಕಾ ವಿತರಕರು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



1 Comment
The bonus offers here are genuinely generous. I managed to double my initial deposit pretty quickly. If you are looking for a fair play environment, this is it. cosuperbet