ಪಾವಗಡ: ತಾಲೂಕಿನ ನಿಡಗಲ್ ಹೋಬಳಿ ದೇವರ ಬೆಟ್ಟ ಗ್ರಾಮದಲ್ಲಿ ವಾಸಿಸುತ್ತಿರುವ ತಂದೆ ತಾಯಿ ಇಲ್ಲದ ಬಡ ಕುಟುಂಬದ ಮೂವರು ಮಕ್ಕಳಿಗೆ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಮಕ್ಕಳ ತಂದೆ ತಾಯಿ ಅನಾರೋಗ್ಯದಿಂದ ಮರಣ ಹೊಂದಿದ್ದು ಸರಿಯಾಗಿ ಕಣ್ಣು ಕಾಣದೆ ಇರುವ ಅಜ್ಜಿಯ ಆಶ್ರಯದಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ.
ಮೂರು ಮಕ್ಕಳಾದ ರಾಜೇಶ್ ಎಂಟನೇ ತರಗತಿ ಮನು ನಾಲ್ಕನೇ ತರಗತಿ ದರ್ಶನ್ ಒಂದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇವರು ತೀರ ಬಡವರಾಗಿದ್ದಾರೆ.
ಇವರು ವಾಸಿಸುವ ಮನೆಗೆ ಬಾಗಿಲು ಸಹ ಇಲ್ಲದಿರುವುದನ್ನು ಮನಗಂಡ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅವರು ಮನೆಗೆ ಬಾಗಿಲನ್ನು ಆಳವಡಿಸಿಕೊಟ್ಟಿದ್ದಾರೆ. ಮಾತ್ರವಲ್ಲದೆ ಈ ವಿದ್ಯಾರ್ಥಿಗಳಿಗೆ ಪುಸ್ತಕ ಲೇಖನ ಸಾಮಗ್ರಿಗಳನ್ನು ಕೊಟ್ಟು ಅವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ.
ಈ ಬಡಕುಟುಂಬಕ್ಕೆ ಸಹಾಯ ಮಾಡಲು ಹೆಲ್ಪ್ ಸೊಸೈಟಿ ಪಾವಗಡ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಈ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಸಹಾಯ ಸಹಕಾರ ಮಾಡಲು ಮುಂದೆ ಬಂದಿದ್ದು, ನಮ್ಮ ಸಂಘಟನೆಯ ಜೊತೆ ದಾನಿಗಳು ಕೈ ಜೋಡಿಸಬೇಕೆಂದು ಮಾನಂ ಶಶಿಕಿರಣ್ ಹೆಲ್ಪ್ ಸೊಸೈಟಿ ಪಾವಗಡ, ಪಾಳೆಗಾರ ಲೋಕೇಶ್ ಜಿಲ್ಲಾಧ್ಯಕ್ಷರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವಿನಂತಿಸಿಕೊಳ್ಳುತ್ತಿದ್ದಾರೆ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296