nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ

    June 6, 2026

    6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!

    June 6, 2026

    ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ

    June 6, 2026
    Facebook Twitter Instagram
    ಟ್ರೆಂಡಿಂಗ್
    • ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ
    • 6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!
    • ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ
    • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
    • ಸರ್ಕಾರದ ಆದೇಶ ಪಾಲನೆ ನಿರ್ಲಕ್ಷ್ಯ: ಗ್ರಾಮ ಆಡಳಿತಾಧಿಕಾರಿಗಳಿಗೆ ನೋಟೀಸ್
    • ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ
    • ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ
    • ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾವನೆಗಳ ಸರಮಾಲೆಯಲ್ಲಿ ಕ್ಷೀಣಿಸುತ್ತಿರುವ ರಂಗಭೂಮಿ: ಪ್ರೊ. ಪರಶುರಾಮ ಕೆ.ಜಿ.
    ತುಮಕೂರು March 30, 2025

    ಭಾವನೆಗಳ ಸರಮಾಲೆಯಲ್ಲಿ ಕ್ಷೀಣಿಸುತ್ತಿರುವ ರಂಗಭೂಮಿ: ಪ್ರೊ. ಪರಶುರಾಮ ಕೆ.ಜಿ.

    By adminMarch 30, 2025No Comments2 Mins Read
    ranga

    ತುಮಕೂರು: ನಮ್ಮ ತಂದೆ ಕಾಲದ ರಂಗಭೂಮಿ ಇಂದು ನೋಡಲು ಸಾಧ್ಯವಿಲ್ಲ. ಇಂದಿನ ರಂಗಭೂಮಿಯಲ್ಲಿ ಬರೀ ಭಾವನೆಗಳನ್ನು ಸರಮಾಲೆಯಲ್ಲಿಯೇ ಹಿಡಿದಿಡಲಾಗುತ್ತಿದೆ. ಅಂತಹ ರಂಗಭೂಮಿ ಬೆಳೆದು ನಿಲ್ಲುವುದಾದರೂ ಹೇಗೆ? ಎಂಬ ಬೃಹದಾಕಾರದ ಪ್ರಶ್ನೆಗಳು ಹೆಮ್ಮರವಾಗಿ ಬೆಳೆಯುತ್ತಿರುವುದಕ್ಕೆ ಈ ಹೊತ್ತಿನ ಕುಟುಂಬಗಳೇ ಸಾಕ್ಷಿಎಂದು ಸಿಂಡಿಕೇಟ್ ಸದಸ್ಯರು ಹಾಗೂ ಹಿರಿಯ ಪ್ರಾಧ್ಯಾಪಕರು ಆಗಿರುವ ತುಮಕೂರು ವಿಶ್ವವಿದ್ಯಾನಿಲಯದಪ್ರೊ. ಪರಶುರಾಮ ಕೆ.ಜಿ. ಹೇಳಿದರು.

    ತುಮಕೂರಿನ ಸದಾಶಿವನಗರದಲ್ಲಿರುವ ಬೆಳ್ಳಿ ರಂಗ ಮನೆಯಲ್ಲಿ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತುಮಕೂರು, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಇವರುಗಳ ಸಹಕಾರದಲ್ಲಿ 27 ಮಾರ್ಚ್ 2025 ರಂದುಗುರುವಾರ ಸಂಜೆ 4 ಗಂಟೆಗೆ ಏರ್ಪಡಿಸಿದ್ದ “ವಿಶ್ವರಂಗಭೂಮಿ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.


    Provided by
    Provided by

    ಖಾಸಗೀಕರಣ, ಉದಾರೀಕರಣದ ಸಂದರ್ಭದಲ್ಲಿ ಬದುಕುತ್ತಿರುವ ನಾವುಗಳು ರಂಗಭೂಮಿಯನ್ನು ವ್ಯವಹಾರೀಕರಣವಾಗಿಸುತ್ತಿರುವ ನಮ್ಮ ಕಲಾವಿದರು ಬೆಳೆಯುವುದಾದರೂ ಹೇಗೆ? ಎಂದು ಪ್ರಶ್ನಸಿದರು. ಇದಕ್ಕೆ ಕಾರಣಗಳು ಬೇಕಾದಷ್ಟಿರಬಹುದು. ಆದರೆ ನೈಜವಾದ ನಾಟಕಗಳ ಪ್ರಯೋಗ ನೀಡಿದ/ನೋಡಿದ ಗುಬ್ಬಿ ಕಂಪನಿಯಾಗಲಿ, ಸುಬ್ಬಯ್ಯನಾಯ್ಡು ಕಂಪನಿಯಾಗಲಿ, ಆರ್. ನಾಗರತ್ನಮ್ಮನವರ ಕಂಪನಿಯಾಗಲಿ, ಹಿರಣ್ಣಯ್ಯ ಮಿತ್ರ ಮಂಡಲಿಗಳ ರಂಗಭೂಮಿ ಪ್ರತಿಭೆಗಳಾದ ಡಾ. ರಾಜಕುಮಾರ್. ಬಾಲಕೃಷ್ಣ, ನರಸಿಂಹರಾಜು, ಜಿ.ವಿ. ಅಯ್ಯರ್ ಮಾಸ್ಟರ್ ಹಿರಣ್ಣಯ್ಯ ಮುಂತಾದ ಹೆಸರಾಂತ ಕಲಾವಿದರ ಪಾಡೇನಾಗಬೇಕು ಎಂದು ನಾವುಗಳು ಚಿಂತಿಸಬೇಕಾಗಿದೆ.

    ಅಷ್ಟೆ ಅಲ್ಲದೆ ಈ ಹೊತ್ತು ನಮ್ಮ ನಮ್ಮಗಳ ಜೊತೆಜೊತೆಯಲ್ಲಿಯೇ ಕಲಾವಿದರಾಗಿ ಬದುಕು ಸಾಗಿಸುತ್ತಿರುವ ಉಮಾಶ್ರೀಯವರಾಗಲಿ, ರಂಗಾಯಣ ರಘುವಾಗಲಿ ಅಥವಾ ಹೆಚ್.ಎಂ. ರಂಗಯ್ಯನವರಂತಹ ಹಿರಿಯಕಲಾವಿದರು ಯಾವುದೇ ಸ್ವಾರ್ಥವಿಲ್ಲದೆ ಕಟ್ಟಿಕೊಂಡಿರುವ ಈ ಆಪ್ತ ರಂಗಮಂದಿರವಾಗಲಿ ಅವರು ಪಡೆದುಕೊಂಡಿರುವ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ರಂಗಮನೆಯಲ್ಲಿ ನೀಟಾಗಿ ಜೋಡಿಸಿರುವುದನ್ನು ನೋಡಿದರೇ ಸಾಕು ಬದುಕು ಸಾರ್ಥಕವೆನಿಸುವುದರಲ್ಲಿ ಯಾವುದೇ ಕೀಳರಿಮೆ ಪಡಬೇಕಾಗಿಲ್ಲ ಎಂದು ಭಾವಿಸುತ್ತೇನೆ. ಸಮಾಕಾಲೀನ ಕಲಾವಿದರಾಗಲಿ ಪ್ರಸ್ತುತ ಸಮಾಜದಲ್ಲಿ ಹೇಗೆ ತಮ್ಮ ಎಂದಿನ ರಂಗದ ಬದುಕನ್ನು ಕಟ್ಟಿಕೊಳ್ಳಬೇಕು? ಬಹುಶಃ ಇವರುಗಳ ನಂತರ ವಿಶ್ವರಂಗಭೂಮಿ ದಿನಾಚರಣೆ ಏರ್ಪಡಿಸುವ ಕಲಾವಿದರ ಗುಂಪೇ ಅವನತಿ ಹೊಂದುತ್ತದೆಂಬ ಭಾವನೆ ಮೂಡುವುದರಲ್ಲಿ ಸಂದೇಹವೇ ಇಲ್ಲ!? ಎನ್ನುವಂತಾಗಿದೆ ಎಂದರು.

    ಆದರೆ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೇರಳವಾಗಲಿ, ತುಳುನಾಡಾಗಲಿ, ಮಹಾರಾಷ್ಟ್ರವಾಗಲಿ ಅಥವಾ ನಮ್ಮ ರಾಜ್ಯದ ಮಂಗಳೂರಾಗಲಿ, ಉತ್ತರಕನ್ನಡವಾಗಲಿ, ದಕ್ಷಿಣ ಕನ್ನಡವಾಗಲಿ ಹಿಂದೆ ಬಿದ್ದಿಲ್ಲ. ಕಷ್ಟಪಟ್ಟು ಕಲಿಯುತ್ತಾರೆ, ಪ್ರಯೋಗ ನೀಡುತ್ತಾರೆ, ಬೆಳಗಾದರೂ ಪ್ರೇಕ್ಷಕರು ಕದಲುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿಎಂದರು. ನಾವು ಭಾವನಾತ್ಮಕ ಸಮಾಜವನ್ನು ಕಟ್ಟದಿದ್ದರೆ ಮನುಷ್ಯ ಸಂಬಂಧಗಳು ನಾಶವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅದಕ್ಕೆ ನಮ್ಮ ಕಲಾವಿದರು ಹಿರಿಯ ರಂಗಕರ್ಮಿಗಳ ಮಾರ್ಗದರ್ಶನ ಅತ್ಯವಶ್ಯಕವಾಗಿ ಬೇಕಾಗಿದೆ. ಇಂದಿನ ಮಕ್ಕಳಲ್ಲಿ ಭಾವನಾತ್ಮಕ ಸಂಸ್ಕೃತಿ ಹೇರಳವಾಗಿರುತ್ತದೆ. ಅದನ್ನುರಂಗಯ್ಯ ಸರ್ ಮೊಮ್ಮಗಳು ನೀಡಿದ ಭರತನಾಟ್ಯವೇ ಸಾಕ್ಷಿ. ಎಂಟು ವರ್ಷದಲ್ಲಿರುವ ಈ ಮಗು ಪಿ.ಜಿ.ಗೆ ಬರುವಷ್ಟರಲ್ಲಿ ಅವಳಲ್ಲಿರುವ ಭಾವನೆಗಳು ಹಾಳಾಗಿ ಬೇರೆಯಾಗಿಯೇ ಕಾಣಸಿಗುತ್ತಾಳೆ. ಎಂತಹ ನೋವಿನ ಸಂಗತಿ ನೋಡಿ, ಇದಾಗದಂತಿರಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತೇನೆಂದರು.

    ಇದೇ ಸಂದರ್ಭದಲ್ಲಿ ಡಾ.ಗುಬ್ಬಿವೀರಣ್ಣಕಲಾಕ್ಷೇತ್ರದಲ್ಲಿ ಸತತ 30 ವರ್ಷಗಳಿಂದಲೂ ಧ್ವನಿವರ್ಧಕ ನಿರ್ವಾಹಕರಾಗಿರುವ ಬಿ.ಆರ್.ರಾಜೇಗೌಡ ಮತ್ತು ಬೆಳಕು ನಿರ್ವಾಹಕರಾಗಿರುವ ಎನ್. ರಮೇಶ್, ಧ್ವನಿ ಮತ್ತು ಬೆಳಕಿನ ವಿಶೇಷ ತಜ್ಞರಾಗಿರುವ ಡಿ.ವಿ. ಸುರೇಶ್ಕುಮಾರ್ ಇವರುಗಳನ್ನು ಅಭಿನಂದಿಸಲಾಯಿತು.

    ಅತಿಥಿಗಳಾಗಿ ಗುಬ್ಬಿ ಕಂಪನಿಯ ಕುಮಾರ್ ಗುಬ್ಬಿವೀರಣ್ಣ ಆಗಮಿಸಿದ್ದರು. ಸದರಿ ಸಮಾರಂಭದ ಅಧ್ಯಕ್ಷತೆಯನ್ನು ರಂಗಕರ್ಮಿ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು & ಶ್ರೀರಂಗ ರಂಗ ಹವ್ಯಾಸಿ ಕಲಾವೃಂದದ ಮುಖ್ಯ ಟ್ರಸ್ಟಿ ಗುರು ಹೆಚ್.ಎಂ. ರಂಗಯ್ಯನವರು ವಹಿಸಿದ್ದರು. ಕಲಾವೃಂದದ ಕಲಾವಿದರುಗಳು ಗೀತಗಾಯನ ನಡೆಸಿಕೊಟ್ಟರು. ಟ್ರಸ್ಟಿಗಳು, ಕಲಾವಿದ ಸ್ನೇಹಿತರು ಭಾಗವಹಿಸಿದ್ದರು. ಕಲಾವಿದ ಮೋಹನ್ಕುಮಾರ್ ಎಂ.ಕೆ. ವಂದಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

    June 6, 2026

    ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ

    June 6, 2026

    ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ

    June 6, 2026

    Comments are closed.

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ

    June 6, 2026

    ಕುಣಿಗಲ್: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರನ್ನು ಅಂಚೆ ಪಾಳ್ಯದ ಕೈಗಾರಿಕಾ ವಲಯದದಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಕಾಂಗ್ರೆಸ್…

    6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!

    June 6, 2026

    ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ

    June 6, 2026

    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

    June 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.