nammatumakuru

    Subscribe to Updates

    Get the latest creative news from FooBar about art, design and business.

    What's Hot

    ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ

    November 23, 2025

    ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ

    November 23, 2025

    ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ

    November 23, 2025
    Facebook Twitter Instagram
    ಟ್ರೆಂಡಿಂಗ್
    • ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
    • ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ
    • ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
    • ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
    • ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
    • ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
    • ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
    • ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತ್ಯಾಜ್ಯ ಸಂಗ್ರಹ ಘಟಕವಾಗಿ ಬದಲಾಗುತ್ತಿರುವ ಕೆರೆ: ಕುಡುಕರ ಸ್ವರ್ಗ, ಅನೈತಿಕ ಚಟುವಟಿಕೆಯ ತಾಣ!
    ಸ್ಪೆಷಲ್ ನ್ಯೂಸ್ December 13, 2021

    ತ್ಯಾಜ್ಯ ಸಂಗ್ರಹ ಘಟಕವಾಗಿ ಬದಲಾಗುತ್ತಿರುವ ಕೆರೆ: ಕುಡುಕರ ಸ್ವರ್ಗ, ಅನೈತಿಕ ಚಟುವಟಿಕೆಯ ತಾಣ!

    By adminDecember 13, 2021No Comments2 Mins Read
    antharasante

    ಅಂತರಸಂತೆ: ವಿಶಾಲವಾದ ಸ್ಥಳಾವಕಾಶವಿದ್ದರೂ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಇದೀಗ ಕೆರೆಯೊಂದು ನೀರಿನ ಬದಲು ತ್ಯಾಜ್ಯಗಳಿಂದಲೇ ತುಂಬುವ ಹಂತವನ್ನು ತಲುಪಿದ್ದು, ಗ್ರಾಮದ ಕೆರೆಯನ್ನು ರಕ್ಷಣೆ ಮಾಡಬೇಕು ಎಂಬ ಕೂಗು ಅಂತರಸಂತೆ ಗ್ರಾಮಸ್ಥರಿಂದ ಕೇಳಿಬಂದಿದೆ.

    ಹೌದು, ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿನ ಮುಖ್ಯ ಕೆರೆ ಇದೀಗ ನಿರ್ವಹಣೆಯ ಸಮಸ್ಯೆಯಿಂದಾಗಿ ಪ್ಲಾಸ್ಟಿಕ್ ಮಯವಾಗುವ ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದ್ದು, ಕೆರೆಯ ಸುತ್ತಲು ತ್ಯಾಜ್ಯ ಸಂಗ್ರಹವಾಗುತ್ತಿದೆ. ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಬದಿಯಲ್ಲಿ ಈ ಕೆರೆಯಿದ್ದು, ಅಂತರಸಂತೆ ಸೇರಿದಂತೆ ನೂರಲಕುಪ್ಪೆ, ನೂರಲಕುಪ್ಪೆ ಬಿ. ಗ್ರಾಮಗಳ ಕೃಷಿ ಮತ್ತು ದನಕರುಗಳಿಗೆ ನೀರಿನ ಮೂಲವಾಗಿದೆ. ಸಧ್ಯ ಈ ಕೆರೆಯನ್ನು ಸ್ವಚ್ಛಗೊಳಿಸಿ ಸ್ಥಳೀಯ ಜಾನುವಾರುಗಳಿಗೆ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.


    Provided by
    Provided by

    ಸಮರ್ಪಕ ದಾರಿ ಇಲ್ಲ: ಇನ್ನೂ ಕೆರೆಯ ಸುತ್ತಲು ಸಂಪೂರ್ಣ ಲಾಂಟನಾದಂತಹ ಕಳೆ ಸಸ್ಯಗಳು ಹೆಚ್ಚಾಗಿ ಬೆಳೆದುಕೊಂಡಿವೆ. ಇದರಿಂದಾಗಿ ಕೆರೆಯ ಅಂಗಳದಲ್ಲಿ ದನಕರುಗಳಿಗೆ ಸರಿಯಾದ ಮೇವು ಸಹ ಸಿಗದಂತಾಗಿದೆ. ಅಲ್ಲದೇ ಕೆರೆಗೆ ಹೋಗಲು ಇದ್ದ ಮಾರ್ಗಗಳ ಪೈಕಿ ಸಾಕಷ್ಟು ಮಾರ್ಗಗಳು ಈಗಾಗಲೇ ಗಿಡಗಂಟೆಗಳಿಂದ ಮುಚ್ಚಿ ಹೋಗಿದ್ದು, ಕಾಲುದಾರಿಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಗ್ರಾಮದ ಮುಖ್ಯದ್ವಾರದ ಮತ್ತು ಗ್ರಾಮ ಪಂಚಾಯಿತಿಯ ಎದುರು ಭಾಗದಲ್ಲಿ ಕೆರೆಗೆ ಮುಖ್ಯ ಮಾರ್ಗವಿದ್ದು, ಅದು ಸಂಪೂರ್ಣ ಮುಚ್ಚಿ ಹೋಗಿ ಸಾಕಷ್ಟು ತಿಂಗಳುಗಳೇ ಕಳೆದರು ತೆರವು ಮಾಡಿ ಸಮರ್ಪಕ ರಸ್ತೆ ನಿರ್ಮಾಣ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಮದ್ಯವ್ಯಸನಿಗಳ ತಾಣವಾಗಿರುವ ಕೆರೆ: ಇದರೊಂದಿಗೆ ಕೆರೆಯ ಆವರಣದಲ್ಲಿ ಮದ್ಯವ್ಯಸನಿಗಳ ಆವಳಿ ಹೆಚ್ಚಾಗ ತೊಡಗಿದ್ದು, ಕೆರೆಯ ಅಂಗದಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ಕವರ್ ಗಳು ಸೇರುವಂತಾಗಿದೆ. ಅಲ್ಲದೇ ಅಲ್ಲಲ್ಲಿ ಇಸ್ಪಿಟ್ ಕಾರ್ಡ್‍ಗಳು ಸಹ ಕೆರೆಯ ಅಂಗಳದಲ್ಲಿ ಹರಡಿದ್ದು, ಸಮೀಪದಲ್ಲಿ ಜೂಜು ಅಡ್ಡೆಗಳು ಹೆಚ್ಚಾಗಿರುವ ಅನುಮಾನಗಳು ಉಂಟಾಗುವಂತೆ ಮಾಡಿದೆ.

    ಸ್ವಚ್ಛತೆಯಿಂದ ದೂರ ಉಳಿದಿರುವ ಕೆರೆ: ಇನ್ನೂ ಕೆರೆಯನ್ನು ಜನರು ಮೈಸೂರು ಮಾನಂದವಾಡಿ ಮಾರ್ಗವಾಗಿ ಓಡಾಡುವ ಪ್ರಯಾಣಿಕರು ಮಲ ಮೂರ್ತ ವಿಸರ್ಜನೆ ಮಾಡವ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಕೆರೆ ಸಂಪೂರ್ಣ ಮಾಲಿನ್ಯವಾಗಿದ್ದು, ಇದಕ್ಕೆ ಕಡಿವಾಣ ಹಾಕಿ ಕೆರೆಯೂ ಸ್ವಚ್ಛತೆಯಿಂದಿರುವಂತೆ ನೋಡಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಸಂಪೂರ್ಣ ತುಂಬವ ಅವಕಾಶವಿತ್ತು. ಆದರೆ ಕೆರೆಯಲ್ಲಿ ಗಿಡಗಂಟಿಗಳು ಹೆಚ್ಚಾಗಿರುವ ಕಾರಣ ಕೆರೆ ತುಂಬಲು ಸಾಧ್ಯವಾಗಿಲ್ಲ. ಇದರೊಂದಿಗೆ ಕೆರೆಯೂ ಒತ್ತುವರಿಯಾಗಿದೆ ಎಂಬ ಆರೋಪವು ಸಹ ಹೆಚ್ಚಾಗಿ ಕೇಳಿ ಬಂದಿದ್ದು, ಸಂಬಂಧಪಟ್ಟವರು ಅದನ್ನು ತೆರವು ಮಾಡಿ ಕೆರೆಯನ್ನು ಸ್ವಚ್ಛಗೊಳಿಸಿ ಉತ್ತಮ ವಾಯುವಿಹಾರದ ತಾಣವಾಗಿ ಮಾಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

    “ಸುತ್ತಲಿನ ಗ್ರಾಮಗಳ ನೀರಿನ ಮೂಲ ನಮ್ಮ ಅಂತರಸಂತೆಯ ಕೆರೆಯಾಗಿದೆ. ಸದ್ಯ ಈ ಕೆರೆ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ಅನೈರ್ಮಲ್ಯವಾಗುವ ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಕೆರೆಯನ್ನು ಕಾಪಾಡುವಲ್ಲಿ ಗಮನ ನೀಡಬೇಕು.”

          -ಮಹೇಶ್, ಅಂತರಸಂತೆ, ಗ್ರಾಮಸ್ಥ

     

    “ಕೆರೆಯೂ ಒತ್ತುವರಿಯಾಗಿದೆ ಎಂದು ದೂರು ನೀಡಿದಂತ ಸಂದರ್ಭದಲ್ಲಿ ಅಳತೆ ಮಾಡಲು ಬಂದಿದ್ದರು. ಆದರೆ ಸಂಪೂರ್ಣ ಅಳತೆ ಮಾಡಲಿಲ್ಲ. ಈ ಬಗ್ಗೆ ನಾವು ಸಾಕಷ್ಟು ದೂರು ನೀಡಿದ್ದೇವೆ. ಸಂಪೂರ್ಣ ಅಳತೆ ಮಾಡಿ ಕೆರೆಗೆ ಸೂಕ್ತ ದಾರಿಗಳನ್ನು ಮಾಡಿ ವಾಯುವಿಹಾರಕ್ಕೆ ಅವಕಾಶ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು.”

       -ಬುದ್ಧ ಪ್ರಕಾಶ್, ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ, ಅಂತರಸಂತೆ

     

    “ಜನವರಿ ಕಳೆದ ನಂತರ ಕೆರೆಯ ಸ್ವಚ್ಛತೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘ ಮತ್ತು ಗ್ರಾಮದ ಮುಖಂಡರನ್ನು ಒಳಗೊಂಡಂತೆ ಸಮಿತಿ ರಚಿಸಿ ಕೆರೆಯನ್ನು ಸ್ವಚ್ಛಗೊಳಿಸಲಾಗುವುದು. ಇನ್ನೂ ಕೆರೆಯಲ್ಲಿ ಮಧ್ಯವ್ಯಸನಿಗಳು ಮತ್ತು ಜೂಜುಕಾರರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆಯ ನೆರವು ಪಡೆಯಲಾಗುವುದು.”

          -ಆರ್.ಕೆ.ಚಿದಾನಂದಸ್ವಾಮಿ, ಪಿಡಿಒ, ಅಂತರಸಂತೆ

    ಜನವರಿ ಕಳೆದ ನಂತರ ಸ್ವಚ್ಛತೆಗೆ ಸಿದ್ಧವಾಗಿದೆ. ಮೊದಲು ಕೆರೆಯ ಸಚ್ಛತೆಯ ಕಡೆ ಹೆಚ್ಚಿನ ಗಮನ ನೀಡಲಾಗುವುದು. ಆನಂತರ ಕೆರೆಯ ಉಳಿದ ವಿಚಾರಗಳನ್ನು ಬಗೆಹರಿಸಿ ಅಭಿವೃದ್ಧಿ ಮಾಡಲಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸ ಆರಂಭಗೊಳ್ಳಲಿದೆ.

         -ಕಲೀಂಪಾಷ, ಅಧ್ಯಕ್ಷರು, ಅಂತರಸಂತೆ ಗ್ರಾಪಂ

    admin
    • Website

    Related Posts

    ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

    October 10, 2025

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    Leave A Reply Cancel Reply

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ

    November 23, 2025

    ತುಮಕೂರು: ನಗರದ ಸರಸ್ವತಿಪುರಂನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಜಿಲ್ಲಾ ಬಂಜಾರ ಭವನದ ಉದ್ಘಾಟನೆಯನ್ನು ಡಿಸೆಂಬರ್ 14ರಂದು  ನೆರವೇರಿಸಲಿದ್ದು, ಗೃಹ ಹಾಗೂ ಜಿಲ್ಲಾ…

    ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ:  ನಗನಗದು ದೋಚಿ ಪರಾರಿ

    November 23, 2025

    ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ

    November 23, 2025

    ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ

    November 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.