ಕೊರಟಗೆರೆ : ಸವಿತಾ ಸಮಾಜದ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿರುವುದರ ವಿರುದ್ಧ ತಾಲ್ಲೂಕಿನ ಸವಿತ ಸಮಾಜದ ವತಿಯಿಂದ ತಾಲ್ಲೂಕು ಪಂಚಾಯ್ತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಾತ್ಮ ಗಾಂಧೀಜಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಭಾವ ಚಿತ್ರವನ್ನಿಟ್ಟು ಕೊಂಡು ಪ್ರತಿಭಟಿಸಿದ ಪ್ರತಿಭಟನಾಕಾರರು ಪಿಡಿಒ ರಮೇಶ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕರ್ತವ್ಯದಿಂದ ವಜಾ ಗೊಂಡಿರುವ ಲಲಿತಾ ಮಾತನಾಡಿ, ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳದೆ ತುಂಬಾಡಿ ಪಿಡಿಒ ರಮೇಶ್ ರವರು ನನ್ನನ್ನು ಅನ್ಯಜಾತಿ ಹೆಣ್ಣುಮಗಳು ಎಂದು ನಿಂದಿಸಿದ್ದಾರೆ. ಕೆಲಸಕ್ಕೆ ತೆಗೆದುಕೊಳ್ಳದೆ ನಾಳೆ ಬಾ, ನಾಡಿದ್ದು ಬಾ ಎಂದು ಸತಾಯಿಸುತ್ತಿದ್ದಾರೆ. ನನ್ನ ಕೆಲಸಕ್ಕೆ ಬೇರೊಬ್ಬರನ್ನು ತೆಗೆದುಕೊಂಡಿದ್ದಾರೆ. ಅವರಿಗೆ ಸಂಬಳ ನೀಡುತ್ತಿದ್ದಾರೆ ನನಗೆ ಅನೇಕ ತಿಂಗಳ ಸಂಬಳವನ್ನು ಕೊಟ್ಟಿಲ್ಲ. ನ್ಯಾಯಾಲಕ್ಕೂ ಬೆಲೆ ಕೊಡದೆ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ದಯವಿಟ್ಟು ಮೇಲಧಿಕಾರಿಗಳು ಇತ್ತ ಗಮನ ಹರಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸವಿತ ಸಮಾಜದ ಮುಖಂಡರಾದ, ಚಲನಚಿತ್ರ ಹಾಸ್ಯ ನಟರು ಮುತ್ತುರಾಜ್ ಮಾತನಾಡಿ, ನಮ್ಮ ಸಮಾಜದ ಒಬ್ಬ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಕೂಡಲೇ ತುಂಬಾಡಿ ಪಿಡಿಒ ರಮೇಶ್ ರನ್ನು ವಜಾಗೊಳಿಸಿ ಅಥವಾ ನಮ್ಮ ಸಮಾಜದ ಹೆಣ್ಣು ಮಗಳಿಗೆ ಕೆಲಸ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಮಾಡಲಾಗುವುದು. ನ್ಯಾಯಾಲದ ಮಾತಿಗೂ ಕಿಮ್ಮತ್ತು ಕೊಡದ ಇಂತಹ ಪಿಡಿಒ ರಮೇಶ್ ನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ನಮ್ಮ ಸಮಾಜದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ತುಮಕೂರು ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಮಂಜೇಶ್ ಗಾಂಧಿ ಮಾತನಾಡಿ, ನಮ್ಮ ಜನಾಂಗದ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಈ ಕೂಡಲೇ ಎಚ್ಚೆತ್ತುಕೊಂಡು ಅದನ್ನು ಸರಿಪಡಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು. ಪಿಡಿಒ ರಮೇಶ್ ರವರ ವರ್ತನೆ ಸರಿಯಾಗಿ ಕಾಣುತ್ತಿಲ್ಲ. ಅವರು ಎಚ್ಚೆತ್ತುಕೊಂಡು ನಮ್ಮ ಸಮಾಜದ ಹೆಣ್ಣು ಮಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ನ್ಯಾಯಾಲಯದ ಬೆಲೆಗೂ ಗಮನಹರಿಸದ ಇವರ ವರ್ತನೆ ಸರಿಯಲ್ಲ ಮೇಲಧಿಕಾರಿಗಳು ಕಂಡೂ ಕಾಣದಂತೆ ಇರುವುದು ನಮಗೆ ಬೇಸರವಾಗಿದೆ . ದಯಮಾಡಿ ನಮ್ಮ ಸಮಾಜದ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿಕೊಂಡರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5