ತುರುವೇಕೆರೆ: ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ಮಾರಾಟ ಸೇರಿದಂತೆ ವಿವಿಧ ವಹಿವಾಟುಗಳನ್ನು ಪೇಪರ್ ಲೆಸ್ ಮಾಡಲಾಗುತ್ತಿದೆ. ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೆಸ್ ಮಾಡಿ ಕೇವಲ ತಂತ್ರಾಂಶದ ಮೂಲಕ ನೋಂದಣಿ ಮಾಡಿಸುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಸಂಘಟನಾಕಾರ ಬಿ.ಎನ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಗದ ರಹಿತ ಡಿಜಿಟಲ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದು ತರುವಾಯ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕಾನೂನು ರಾಜ್ಯಾದ್ಯಂತ ಜಾರಿಗೆ ಬಂದಲ್ಲಿ ಸಾರ್ವಜನಿಕರ ಗೋಳು ಹೇಳತೀರದು. ಈಗಿರುವ ವ್ಯವಸ್ಥೆಯಲ್ಲೇ ನೂರಾರು ತೊಂದರೆಗಳು ಇವೆ. ಇವುಗಳನ್ನು ಬಗೆಹರಿಸಲು ಹರಸಾಹಸ ಮಾಡಲಾಗುತ್ತಿದೆ. ಈಗ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರ ಆತಂಕ ಮತ್ತಷ್ಟು ಹೆಚ್ಚಲಿದೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವವರಿದ್ದೇವೆ ಎಂದರು.
“ಈಗಿನ ವ್ಯವಸ್ಥೆಯಲ್ಲಿ ಮಾರಾಟಗಾರರು ಮತ್ತು ಕೊಳ್ಳುವವರು ಎದುರು ಇದ್ದರೂ ಸಹ ಮೋಸ ಮಾಡಬಹುದಾಗಿದೆ. ಇನ್ನು ಕೇವಲ ಪೇಪರ್ ಲೆಸ್ ಅಥವಾ ಇ–ತಂತ್ರಾಂಶದಿಂದ ವಹಿವಾಟು ನಡೆದರೆ ಸಾಕಷ್ಟು ವಂಚನೆಗಳು ನಡೆದು ಸೈಬರ್ ಕ್ರೈಂ ಪೊಲೀಸರಿಗೆ ಹೆಚ್ಚು ಕೆಲಸ ಶುರುವಾಗಲಿದೆ ಎಂದು ಅವರು ಹೇಳಿದರು.
ಈ ವೇಳೆ ತಾಲೂಕು ಪತ್ರ ಬರಹಗಾರರ ಸಂಘದ ಗೌರವಾಧ್ಯಕ್ಷ ಕೆ.ಎಲ್. ಶಿವಕುಮಾರ್, ಅಧ್ಯಕ್ಷ ಕೊಲ್ಲಟ್ಟ ಕೆ.ಆರ್. ರಮೇಶ್ (ಪಟೇಲ್), ಉಪಾಧ್ಯಕ್ಷ ಬಿ.ಜಿ. ಶಿವಕುಮಾರ್, ಪರಮೇಶ್, ಕಾರ್ಯದರ್ಶಿ ಕೆ.ಟಿ. ಪುಟ್ಟಸ್ವಾಮಿಗೌಡ, ಖಜಾಂಚಿ ಟಿ.ಜಿ.ಶಿವಕುಮಾರ್ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ.ಎ. ಹರೀಶ್, ನಿರ್ದೇಶಕರಾದ ಜಗದೀಶ್ ಅರೆಹಳ್ಳಿ, ಕೆ. ಗೋಪಿನಾಥ್, ಬಿ.ಎಸ್. ಶಶಿಕುಮಾರ್, ಕೆ.ಎಲ್. ಕಲ್ಲೇಶ್, ಬಿ. ಕಂಚಿರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್, ಡಿ.ಎಸ್. ಶಿವಣ್ಣ ಮತ್ತು ಪುಟ್ಟರಾಮಯ್ಯ ಸೇರಿದಂತೆ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


