ಮಾಯಸಂದ್ರ: ಕನ್ನಡದ ಸಮನ್ವಯಗಳ ಕವಿ, ಸುನೀತಗಳ ಸಾಮ್ರಾಟ್ ಎಂದೇ ಹೆಸರುವಾಸಿಯಾಗಿದ್ದ ನಾಡೋಜ ಡಾ. ಚೆನ್ನವೀರಕಣವಿಯವರ ನಿಧನ, ಕರ್ನಾಟಕ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಇಂದು ಮಾಯಸಂದ್ರದ ಕನ್ನಡ ಭವನದಲ್ಲಿ ಚೆನ್ನವೀರ ಕಣವಿಯವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜೂನ್ 28, 1928ರಂದು ( 93 ವರ್ಷಗಳು ) ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ ಕಣವಿಯವರು, ಜೀವಧ್ವನಿ, ಭೂಮಿ ಬದುಕು ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ,ಪಂಪ ಪ್ರಶಸ್ತಿ , ನಾಡೋಜ ಪ್ರಶಸ್ತಿ , ಕರ್ನಾಟಕ ಕವಿರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಸರಮಾಲೆಯೇ ಲಭಿಸಿದೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕ.ಸಾ.ಪ ತುರುವೇಕೆರೆ ಘಟಕದ ಮಹಾಪೋಷಕರಾದ ಎನ್.ಆರ್.ಜಯರಾಮ್, ಕ.ಸಾ.ಪ ಮಾಯಸಂದ್ರ ಘಟಕದ ನೂತನ ಅಧ್ಯಕ್ಷರಾದ ಜವರೇಗೌಡ, , ಶಿಕ್ಷಕರಾದ ಶ್ರೀಧರ ಮೂರ್ತಿ, CP ಪ್ರಕಾಶ್, ಶಿವಲಿಂಗಯ್ಯ, P.ಹನುಮಂತಯ್ಯ, ರಾಧಾಕೃಷ್ಣ , ಮುನಿರಾಜು ಮತ್ತಿತರರು ಭಾಗವಹಿಸಿದ್ದರು.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB