ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿ ದೇವಾಲಯಕ್ಕೆ ದಲಿತರ ಪ್ರವೇಶವನ್ನು ಅಲ್ಲಿನ ಅರ್ಚಕರು ನಿರ್ಬಂಧ ಹಾಕಿದ್ದಾರೆ ಎಂದು ತಹಶೀಲ್ದಾರ್ ಅವರಿಗೆ ದಲಿತ ಸೇನೆಯ ಮುಖಂಡರು ಸೋಮವಾರ ಮನವಿ ಕೊಟ್ಟ ಹಿನ್ನಲೆಯಲ್ಲಿ ಸಾಗಸಂದ್ರ ಶ್ರೀ ಕೆಂಪಮ್ಮ ದೇವಾಲಯಕ್ಕೆ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಶ್ರೀನಿವಾಸ್ ಬುಧವಾರ ಭೇಟಿ ನೀಡಿ ಸಾಗಸಂದ್ರ ದೇವಾಲಯದಲ್ಲಿ ಅರ್ಚಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಜತೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅರ್ಚಕ ದೊಡ್ಡಕೆಂಪಯ್ಯ ಸುಮಾರು ವರ್ಷಗಳಿಂದ ದೇವಾಲಯಕ್ಕೆ ಸಾಕಷ್ವು ಭಕ್ತಾಧಿಗಳು ಬರುತ್ತಾರೆ ನಾವು ಯಾರನ್ನು ಕೂಢ ಗಲಾಟಿ ಮಾಡಿ ಹೊರಗಡೆ ನಿಲ್ಲಿಸಿಲ್ಲ ಇದರ ಹಿಂದೆ ಕಾಣದ ಕೈಗಳು ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿಸಬೇಕು ಅಂಥ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ನಮ್ಮಲ್ಲಿ ಸಾಕಷ್ವು ದಲಿತರು ದೇವಾಲಯಕ್ಕೆ ಬರುತ್ತಾರೆ ನಮ್ಮಲ್ಲಿ ಯಾವುದೇ ಜಾತಿ ಭೆಧವಿಲ್ಲದೆ ಎಲ್ಲರಿಗೂ ಸಮಾನವಾಗಿ ಪೂಜೆಗಳನ್ನು ಅರ್ಚಕರು ಮಾಡಿಕೊಟ್ಟಿದ್ದಾರೆ. ದಲಿತರನ್ನು ನಾವು ಅವಮಾನಿಸಿಲ್ಲ ಎಂದರು.
ದೇವಾಲಯ ಕಾರ್ಯದರ್ಶಿ ಅ.ನ.ಲಿಂಗಪ್ಪ ಮಾತನಾಡಿ, ನಾನು ಸುಮಾರು ವರ್ಷಗಳಿಂದ ಅಮ್ಮನವರ ದಾಸೋಹ ಕಾರ್ಯದ ಉಸ್ತುವರಿಯಾಗಿದ್ದೇನೆ. ಇಲ್ಲಿ ಯಾವುದೇ ಜಾತಿ ಭೇದಭಾವ ಮಾಡಿಲ್ಲ. ದಲಿತರು ಎಲ್ಲರೂ ಸಹ ದೇವಾಲಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮುಜಾರಾಯಿ ದೇವಾಲಯದಲ್ಲಿ ಎಲ್ಲರಿಗೂ ಕೂಡ ಅಮ್ಮನವರ ದರ್ಶನ ಇರುತ್ತದೆ. ನಮ್ಮಲ್ಲಿ ಯಾವುದೇ ಅರ್ಚಕರು ದಲಿತರನ್ನು ಅವಮಾನಿಸಿಲ್ಲ. ದೇವಾಲಯಕ್ಕೆ ಬರುವ ಭಕ್ತರನ್ನು ಪ್ರೀತಿಯಿಂದ ಪೂಜಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಮಾಹಿತಿ ಕೊಟ್ಟವರೇ ಇಲ್ಲಿಗೆ ಬಂದಿಲ್ಲ ದೇವಾಲಯದ ಅರ್ಚಕರು ದಲಿತರನ್ನು ಅವಮಾನಿಸಿದ ಸಾಕ್ಷಿ ಇದ್ದಾರೆ ಕೊಡಲಿ, ಆಗ ಎಲ್ಲರನ್ನೂ ಕರೆಸಿ ಮಾತಡೋಣ. ಆದರೆ ಸಾಕ್ಷಿಯೇ ಇಲ್ಲ, ಜಾತ್ರೆ ಸಮಯದಲ್ಲಿ ಬೇಕು ಅಂಥ ಜಗಳ ಮಾಡೋದಕ್ಕೆ. ಇವೆಲ್ಲ ಸುಳ್ಕು ಮಾಹಿತಿ. ಸುಳ್ಳು ಮಾಹಿತಿ ಕೊಟ್ಟವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಸ್ಥಳದಲ್ಲಿ ಸಾಗಸಂದ್ರ ಗ್ರಾಮಸ್ಥರು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5