ಕೊರಟಗೆರೆ: ಗ್ರಾಹಕರಿಂದ ತೆರಿಗೆ ಪಡೆಯದೇ ವಹಿವಾಟು ಮಾಡ್ತಾರಂತೆ.. ಅದಕ್ಕಾಗಿ ಸರಕಾರಕ್ಕೆ ಚಿನ್ನದ ಅಂಗಡಿ ಮಾಲೀಕರು ತೆರಿಗೆ ಕಟ್ಟಲ್ವಂತೆ.. ಜ್ಯುವೆಲರಿ , ಬ್ಯಾಂಕರ್ ಹಾಗೂ ಗೋಲ್ಡ್ ಲೋನ್ ಅಂಗಡಿಯ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೇ.30ರಷ್ಟು ಮಾತ್ರ ಜಿಎಸ್ಟಿ ರಸೀದಿ ಕೋಡ್ತಾರಂತೆ.. ಇನ್ನೂಳಿದ ಶೇ.70ರಷ್ಟು ವಹಿವಾಟಿನ ಲೆಕ್ಕಕ್ಕೆ ನಕಲಿ ರಸೀದಿಯೇ ನೀಡ್ತಾರಂತೆ.. ತೆರಿಗೆಮುಕ್ತ ಆಗಿರುವ ಕೊರಟಗೆರೆ ಕ್ಷೇತ್ರದ ಬಲಿಷ್ಟ ಚಿನ್ನದ ಅಂಗಡಿಗಳ ವಹಿವಾಟಿನ ತನಿಖೆಗೆ ಆದಾಯ ಇಲಾಖೆಯ ಮೌನವೇಕೆ ಎಂಬುದೇ ಯಕ್ಷಪ್ರಶ್ನೆ.
ಕೊರಟಗೆರೆ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಲ್ಲಿ 30ಜ್ಯುವೆಲರ್ಸ್ , ಐದಾರು ಬ್ಯಾಂಕರ್ಸ್ ಮತ್ತು ನಕಲಿ ಗೋಲ್ಡ್ ಲೋನ್ ಅಂಗಡಿಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆದಾಯದ ಲೆಕ್ಕ ನೀಡಲು ಶೇ.30ರಷ್ಟು ಜಿಎಸ್ಟಿ ರಸೀದಿ ನೀಡ್ತಾರಂತೆ. ಆದಾಯ ಮರೆಮಾಚಲು ಶೇ.70ರಷ್ಟು ನಕಲಿ ರಸೀದಿ ನೀಡಿ ಸರಕಾರಕ್ಕೆ ತೆರಿಗೆ ಕಟ್ಟದೇ ವಂಚನೆ ಮಾಡ್ತಾರೇ. ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬಂದಾಕ್ಷಣ ಅಂಗಡಿಗಳಿಗೆ ವಾರಪೂರ್ತಿ ರಜೆ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ವಂಚನೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ.
ನಕಲಿ ರಸೀದಿಯಿಂದ ಪ್ರಕರಣ ಬೆಳಕಿಗೆ..
ಕೊರಟಗೆರೆ ಪಟ್ಟಣದ ಗುಪ್ತ ಜ್ಯೂಯಲರ್ಸ್ ನಲ್ಲಿ ಗೌರಿಬಿದನೂರು ತಾಲೂಕಿನ ಸಾರಗುಂಡ್ಲು ಗ್ರಾಮದ ಮಂಜುಳ ಎಂಬಾಕೆ 2021ನೇ ಜು.10ರಂದು 1ಲಕ್ಷ 48ಸಾವಿರ ಮೌಲ್ಯದ 30ಗ್ರಾಂ ಮಾಂಗಲ್ಯದ ಸರ ಖರೀದಿಸಿದ್ದಾರೆ. ಗುಪ್ತ ಅಂಗಡಿ ಮಾಲೀಕ ನವೀನ್ ಗ್ರಾಹಕಿ ಮಂಜುಳ ಹೆಸರನ್ನು ಸಹ ಬರೆಯದೇ ನಕಲಿ ರಸೀದಿ ನೀಡಿದ್ದಾರೆ. 30ಗ್ರಾಂ ಬಂಗಾರದ ಜೊತೆಗೆ 2.7ಗ್ರಾಂ ಹೆಚ್ಚುವರಿ ವೇಷ್ಟೆಜ್ ಬಂಗಾರದ ಹಣವನ್ನು ಸಹ ಹೆಚ್ಚುವರಿಯಾಗಿ ಪಡೆದಿದ್ದಾರೆ.
ಮಂಜುಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ ದಿನ ಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ. ನಂತರ ಕತ್ತಿನಲ್ಲಿ ಗಾಯವಾಗಲು ಶುರುವಾಗಿದೆ ಗ್ರಾಹಕಿ ಗುಪ್ತ ನವೀನ್ ಬಳಿಗೆ ಬಂದು ಚಿನ್ನದ ಸರವನ್ನು ಪರೀಕ್ಷೆ ನಡೆಸಿದಾಗ 30ಗ್ರಾಂ ಚಿನ್ನದ ಸರ 23ಗ್ರಾಂಗೆ ಇಳಿದಿದೆ. ಕಂಗಲಾದ ಗ್ರಾಹಕಿ ಒಡವೆ ಅಂಗಡಿ ಮಾಲೀಕನಿಗೆ ಪ್ರಶ್ನೆ ಮಾಡಿದಾಗ ಮತ್ತೇ ಪರೀಕ್ಷಿಸಿ ಹೊಸದಾಗಿ ನೀಡುವ ಭರವಸೆ ನೀಡಿದ್ದಾರೆ. ಗ್ರಾಹಕಿಯಿಂದ ನಕಲಿ ರಸೀದಿ ಮತ್ತು ಮಾಂಗಲ್ಯದ ಸರ ಎರಡನ್ನು ಹಿಂದಕ್ಕೆ ಪಡೆದ ಮಾಲೀಕ ನವೀನ್ 15ದಿನ ಕಳೆದರೂ ಹಣವು ನೀಡದೇ ಬಂಗಾರವು ನೀಡಿಲ್ಲ ಎನ್ನಲಾಗಿದೆ.
ಜಿಎಸ್ ಟಿ ಯಾರು ಕಟ್ಟಲ್ವಂತೆ..
ಕೊರಟಗೆರೆ ಪಟ್ಟಣದ ಜ್ಯೂಯಲರಿ ಮತ್ತು ಬ್ಯಾಂಕರ್ಸ್ ಮಾಲೀಕರು ಯಾರು ಸಹ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಜಿಎಸ್ ಟಿ ತೆರಿಗೆ ಕಟ್ಟೋದಿಲ್ವಂತೆ. ಭಾರತ ದೇಶ ಸೇರಿದಂತೆ ಕೊರಟಗೆರೆಯಲ್ಲಿ ಶೇ.10ರಿಂದ 15ರಷ್ಟು ಜನ ಮಾತ್ರ ಚಿನ್ನದ ತೆರಿಗೆ ಕಟ್ತಾರಂತೆ ಅಷ್ಟೆ ಎಂಬುದು ಗುಪ್ತ ಜ್ಯುವೆಲರಿ ಮಾಲೀಕ ನವೀನ್ ಹೇಳುತ್ತಿದ್ದಾರೆ ಎನ್ನಲಾಗಿದೆ.
ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್..
ಗುಪ್ತ ಜ್ಯುವೆಲರಿ ಸಮೀಪವೇ ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್ ಕೂಡ ಗ್ರಾಹಕರಿಗೆ ಲಭ್ಯವಿದೆ. ಇದಕ್ಕೆ ಯಾರ ಅಪ್ಪಣೆಯು ಬೇಕಿಲ್ವಂತೆ, ಇದನ್ನು ಪ್ರಶ್ನಿಸುವ ಅಧಿಕಾರವು ಯಾರಿಗೂ ಇಲ್ಲವೇ. ಗ್ರಾಹಕರು ಬಂಗಾರ ಖರೀದಿಸುವಾಗ ನಕಲಿ ರಸೀದಿ ನೀಡುತ್ತೀರುವ ಇವರು ಇನ್ನೂ ಗೋಲ್ಡ್ ಲೋನ್ ವ್ಯವಹಾರ ಹೇಗೆ ಮಾಡ್ತಾರೇ. ಗ್ರಾಹಕರಿಂದ ಪಡೆಯುವ ಬಡ್ಡಿ ಎಷ್ಟು, ಬಂಗಾರ ಹೇಗೆ ಕೋಡ್ತಾರೇ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಹೊರತೆಗೆಯಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
“ಗುಪ್ತ ಜ್ಯುವೆಲರ್ಸ್ ನಲ್ಲಿ 30ಗ್ರಾಂ ಚಿನ್ನದ ಸರಕ್ಕೆ 1ಲಕ್ಷ 48ಸಾವಿರ ಹಣ ನೀಡಿದ್ದೇನೆ. ನಮಗೆ ಅಂಗಡಿ ಮಾಲೀಕ ನವೀನ್ ಜಿಎಸ್ಟಿ ರಸೀದಿ ನೀಡದೇ ನಕಲಿ ರಸೀದಿಯ ಜೊತೆ ಕೆಡಿಎಂ ಚಿನ್ನದ ಬದಲು ನಕಲಿ ಬಂಗಾರ ನೀಡಿದ್ದಾರೆ. 30ಗ್ರಾಂ ಇದ್ದ ಮಾಂಗಲ್ಯ ಸರ ಈಗ ಕಪ್ಪು ಬಣ್ಣಕ್ಕೆ ತಿರುಗಿ 23ಗ್ರಾಂ ಆಗಿದೆ. ನಾವು ಪ್ರಶ್ನಿಸಿದ್ದಕ್ಕೆ ಸರ ಮತ್ತು ರಸೀದಿ ಪಡೆದು ನಾಳೆ ಬನ್ನಿ ನಾಡಿದ್ದು ಬನ್ನಿ ಅಂತಾರೇ” ಎಂದು ಮೋಸ ಹೋಗಿರುವ ಗ್ರಾಹಕಿ ಮಂಜುಳ ಅಳವತ್ತು ಕೊಂಡಿದ್ದಾರೆ.
ನನ್ನ ಮಗಳಿಗೆ ಮಾಂಗಲ್ಯ ಸರ ನೀಡುವಾಗಲೇ ಮೋಸವಾಗಿದೆ. ಗುಪ್ತ ಅಂಗಡಿ ಮಾಲೀಕ ಅಧಿಕೃತ ರಸೀದಿಯು ಕೊಟ್ಟಿಲ್ಲ, ಕೆಡಿಎಂ ಬಂಗಾರವು ನೀಡಿಲ್ಲ. ನಮ್ಮ ಕಡೆಯಿಂದ ಚಿನ್ನದ ಸರ ಹಿಂದಕ್ಕೆ ಪಡೆದು 15ದಿನ ಕಳೆದಿವೆ. ಇತ್ತ ಹಣವು ಇಲ್ಲ ಬಂಗಾರವು ಇಲ್ಲದೇ ಪರದಾಡುವ ಪರಿಸ್ಥಿತಿ ಇದೆ. ದಯವಿಟ್ಟು ನಮಗೆ ನ್ಯಾಯ ಕೋಡಿಸಿ ಎಂದು ಮಂಜುಳ ಅವರ ತಂದೆ ಬೇಡಿಕೊಂಡರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB