ನಕಲಿ ನೋಟ್ ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಡಾ.ಕೆ. ಆರ್ ಸಂಜಯ್ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 500 ರೂ. ಮುಖ ಬೆಲೆಯ 51 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.ಈತ ಕ್ಯಾಬ್ ಡ್ರೈವರುಗಳನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ.
ದೂರುದಾರ ಚಂದ್ರಶೇಖರ್ ಎಂಬವರನ್ನು ಯಶವಂತಪುರದಲ್ಲಿ ಪಿಕ್ ಮಾಡಿ ಊಟಕ್ಕೆ ಕರೆದೊಯ್ದಿದ್ದ ಆರೋಪಿ. ಮಾಗಡಿ ರೋಡ್ ಹೌಸಿಂಗ್ ಬೋರ್ಡ್ನಲ್ಲಿ ಬಿ.ಎನ್.ಬಾರ್ ಅಂಡ್ ರೆಸ್ಟೊರೆಂಟ್ ಗೆ ಕರೆದುಕೊಂಡು ಹೋಗಿದ್ದ. ಬಾರ್ ಗೆ ಹೋದ ಬಳಿಕ ದೂರುದಾರರ ಬಳಿ 10 ಸಾವಿರ ಪೋನ್ ಪೇ ಮಾಡಿಸಿದ್ದ. ಬದಲಾಗಿ ತನ್ನ ಬಳಿ ಇದ್ದ 10 ಸಾವಿರದ 500 ರೂ. ನಕಲಿ ನೋಟನ್ನು ನೀಡಿದ್ದ. ಹಣ ನೀಡಿ ದೂರುದಾರನ ಮೊಬೈಲ್ ಪಡೆದುಕೊಂಡು ಎಸ್ಕೇಪ್ ಆಗಿದ್ದ.
ಘಟನೆ ಬಳಿಕ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಜರಿಪಿಟಿ ಚಂದ್ರಶೇಖರ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಚೆನ್ನೈ ಮೂಲದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ದೂರುದಾರ ಚಂದ್ರಶೇಖರ್ ಗೆ ನೀಡಿದ್ದ 21 ಖೋಟಾ ನೋಟ್ ಗಳು, ನೋಟ್ ತಯಾರಿಕೆಗೆ ಬಳಸುತ್ತಿದ್ದ ಪ್ರಿಂಟರ್, 90 ಸಾವಿರ ಮೌಲ್ಯದ 9 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296